BJP | ಬಿಜೆಪಿಗರೇ “ಬಿಜೆಪಿ ಮುಕ್ತ ಕರ್ನಾಟಕ” ಮಾಡಲು ತುದಿಗಾಲಲ್ಲಿದ್ದಾರೆ
ಬೆಂಗಳೂರು : ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ “ಬಿಜೆಪಿ ಮುಕ್ತ ಕರ್ನಾಟಕ” ಮಾಡಲು ತುದಿಗಾಲಲ್ಲಿದ್ದಾರೆ ಎಂದು ರಾಜ್ಯ ಬಿಜೆಪಿ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.
ಬಿಜೆಪಿ ವಿರುದ್ಧ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಭಾರತ್ ಜೋಡೋ ಯಾತ್ರೆಯನ್ನು ‘ಸಿದ್ದು – ಡಿಕೆಶಿ ಜೋಡೊ ಯಾತ್ರೆ’ ಎನ್ನುವ ಬಿಜೆಪಿಗರು ತಮ್ಮ ಪಕ್ಷದಲ್ಲಿ ‘ಬಿಜೆಪಿ ತೋಡೋ ಜಾತ್ರೆ’ ನಡೆಯುತ್ತಿರುವುದನ್ನು ಗಮನಿಸಲಿ. ರಾಜ್ಯದ ಜನರಷ್ಟೇ ಅಲ್ಲ ಸ್ವತಃ ಬಿಜೆಪಿಗರೇ “ಬಿಜೆಪಿ ಮುಕ್ತ ಕರ್ನಾಟಕ” ಮಾಡಲು ತುದಿಗಾಲಲ್ಲಿದ್ದಾರೆ. ಯತ್ನಾಳ್ ಹೇಳುತ್ತಿರುವ ಆ ಹುಳವನ್ನು ಬಿಜೆಪಿ ಹುಡುಕಿಕೊಳ್ಳಲಿ!
ಪೇ ಸಿಎಂ ಬಸವರಾಜಬೊಮ್ಮಾಯಿ ಅವರೇ, ನಿಮ್ಮದೇ ಪಕ್ಷದ ಶಾಸಕರಾದ ಯತ್ನಾಳ್ #PSIScam ಸಿಬಿಐಗೆ ವಹಿಸಿ ಎನ್ನುತ್ತಿದ್ದಾರೆ, ಪರೇಶ್ ಮೇಸ್ತಾ ಪ್ರಕರಣದಲ್ಲಿ ನಿಮ್ಮ ಪಕ್ಷದವರು ಸಿಬಿಐಯನ್ನೂ ನಂಬದ ಸ್ಥಿತಿಯಲ್ಲಿದ್ದಾರೆ. ಹಾಗಾಗಿ ನ್ಯಾಯಾಂಗ ತನಿಖೆಗಾದರೂ ವಹಿಸಿ ಯತ್ನಾಳ್ರ ಸವಾಲು ಸ್ವೀಕರಿಸಿ. 40 ಪರ್ಸೆಂಟ್ ಸರ್ಕಾರ ದ ತನಿಖೆ ಬಗ್ಗೆ ಅವರಿಗೂ ನಂಬಿಕೆ ಇಲ್ಲ.
#BharatJodoYatra
"ಸಿದ್ದು – ಡಿಕೆಶಿ ಜೋಡೊ ಯಾತ್ರೆ"
–@BJP4Karnatakaನಿಜ, @siddaramaiah @DKShivakumar ಅವರು ಕಾಂಗ್ರೆಸ್ ನೇಗಿಲಿನ ನೊಗ ಹೊತ್ತ ಜೋಡೆತ್ತುಗಳೇ,#40Percentsarkara ದಿಂದ ಪಾಳು ಬಿದ್ದ ಕರ್ನಾಟಕದ ನೆಲವನ್ನು ಉಳುಮೆ ಮಾಡಿ, ಬಿಜೆಪಿ ಎಂಬ ಕಳೆ ಕಿತ್ತು, ವಿಶ್ವಾಸದ ಬೀಜ ಬಿತ್ತಿ, ಜನಬೆಂಬಲದ ಫಸಲು ತೆಗೆಯುತ್ತೇವೆ!
— Karnataka Congress (@INCKarnataka) October 5, 2022
ಡಾ. ಸಿ.ಎನ್ ಅಶ್ವಥ್ ನಾರಾಯಣ ಹೆಸರು ಬಂದರೂ ತನಿಖೆ ಇಲ್ಲ. ಬಸವರಾಜ್ ದಡೇಸಗೂರರ ಬಗ್ಗೆ ಸಾಕ್ಷ್ಯ ಸಿಕ್ಕರೂ ತನಿಖೆ ಇಲ್ಲ. ಮಾಜಿ ಸಿಎಂ ಪುತ್ರನ ಕೈವಾಡವಿದೆ ಎಂದು ಸ್ವತಃ ಬಿಜೆಪಿಯ ಯತ್ನಾಳ್ ಹೇಳಿದರೂ ತನಿಖೆ ಇಲ್ಲ. ಪೇ ಸಿಎಂ ಎಂದರೆ ಉರಿದುಕೊಳ್ಳುವ ಬಸವರಾಜ ಬೊಮ್ಮಾಯಿ ಅವರೇ, ದಮ್ಮು ತಾಕತ್ತು ಇದ್ರೆ ಮಾಜಿ ಸಿಎಂ ಪುತ್ರ ಯಾರೆಂದು ತನಿಖೆ ಮಾಡಿಸಿ ಎಂದು ಒತ್ತಾಯಿಸಿದೆ.
ಭಾರತ್ ಜೋಡೋ ಯಾತ್ರೆ “ಸಿದ್ದು – ಡಿಕೆಶಿ ಜೋಡೊ ಯಾತ್ರೆ” – ಬಿಜೆಪಿ
ನಿಜ, ಸಿದ್ದರಾಮಯ್ಯ – ಡಿ.ಕೆ.ಶಿವಕುಮಾರ್ ಅವರು ಕಾಂಗ್ರೆಸ್ ನೇಗಿಲಿನ ನೊಗ ಹೊತ್ತ ಜೋಡೆತ್ತುಗಳೇ, 40 ಪರ್ಸೆಂಟ್ ಸರ್ಕಾರದಿಂದ ಪಾಳು ಬಿದ್ದ ಕರ್ನಾಟಕದ ನೆಲವನ್ನು ಉಳುಮೆ ಮಾಡಿ, ಬಿಜೆಪಿ ಎಂಬ ಕಳೆ ಕಿತ್ತು, ವಿಶ್ವಾಸದ ಬೀಜ ಬಿತ್ತಿ, ಜನಬೆಂಬಲದ ಫಸಲು ತೆಗೆಯುತ್ತೇವೆ ಎಂದು ಟಾಂಗ್ ನೀಡಿದೆ.