ಕೇಂದ್ರವನ್ನು ಟೀಕಿಸಿದ ನಟಿಯ ವಿರುದ್ಧ ದೇಶದ್ರೋಹದ ಕೇಸ್..!
ಕೇಂದ್ರ ಸರ್ಕಾರವನ್ನು ಟೀಕಿಸಿದ್ದ ಮಾಲಿವುಡ್ ನಟಿ ಐಶಾ ಸುಲ್ತಾನಾ ವಿರುದ್ಧ ಇದೀಗ ದೇಶದ್ರೋಹದ ಪ್ರಕರಣ ದಾಖಲಾಗಿದೆ. ಕೇಂದ್ರಾಡಳಿತ ಪ್ರದೇಶವಾಗಿರುವ ಲಕ್ಷದ್ವೀಪಕ್ಕೆ ಹೊಸದಾಗಿ ನೇಮಕವಾಗಿರುವ ಬಿಜೆಪಿಯ ಪ್ರಫುಲ್ ಪಟೇಲ್ ಮಾಡಿರುವ ಹೊಸ ಕಾನೂನು ಹಾಗೂ ನಿಯಮಗಳಿಂದಾಗಿ ಲಕ್ಷದ್ವೀಪದ ನಾಗರೀಕರಿಗೆ ಸಮಸ್ಯೆ ಎದುರಾಗಿದ್ದು ಇದರ ವಿರುದ್ಧ ಪ್ರತಿಭಟನೆ, ಅಭಿಯಾನಗಳು ಆರಂಭವಾಗಿವೆ.
ಹೀಗೆ ಲಕ್ಷದ್ವೀಪದ ಬಗ್ಗೆ ಅಭಿಯಾನದಲ್ಲಿ ನಟಿ ಹಾಗೂ ನಿರ್ದೇಶಕಿಯಾಗಿರುವ ಐಶಾ ಸುಲ್ತಾನಾ ಭಾಗಿಯಾಗಿದ್ದಾರೆ… ‘ಸೇವ್ ಲಕ್ಷದ್ವೀಪ’ ಅಭಿಯನಾದಲ್ಲಿ ಸಕ್ರಿಯರಾಗಿ ತೊಡಗಿಕೊಂಡಿದ್ದಾರೆ. ಇದರ ಬಗ್ಗೆ ಚರ್ಚೆಯಲ್ಲಿ ಮಾತನಾಡಿದ್ದ ನಟಿ ಐಶಾ, ಆಡಳಿತಾಧಿಕಾರಿ ಪ್ರಫುಲ್ ಅವರನ್ನು ತೀವ್ರವಾಗಿ ಟೀಕಿಸಿದ್ದರು. ಅಲ್ಲದೇ ‘ಈ ಮೊದಲು ಲಕ್ಷದ್ವೀಪದಲ್ಲಿ ಒಂದೂ ಕೋವಿಡ್ ಪ್ರಕರಣ ಇರಲಿಲ್ಲ.
ಆದರೆ ನಿಯಮ ಸಡಿಲಿಕೆ ಬಳಿಕ ಪ್ರತಿದಿನ ನೂರಾರು ಪ್ರಕರಣ ದಾಖಲಾಗುತ್ತಿದೆ. ಇದು ಕೇಂದ್ರ ನಮ್ಮ ಮೇಲೆ ಅಜೈವಿಕ ಅಸ್ತ್ರ ಪ್ರಯೋಗಿಸಿದೆ’ ಎಂದಿದ್ದರು. ಇದೇ ಹೇಳಿಕೆ ವಿರುದ್ಧ ಇದೀಗ ಐಶಾ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಲಾಗಿದೆ. ಲಕ್ಷದ್ವೀಪದ ಬಿಜೆಪಿ ಮುಖಂಡ ಸಿ ಅಬ್ದುಲ್ ಖಾದೆರ್, ಐಶಾ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದು, ಕೇಂದ್ರ ಸರ್ಕಾರದ ದೇಶನಿಷ್ಠೆಯನ್ನು ಐಶಾ ಟೀಕಿಸಿದ್ದಾರೆ ಎಂದಿದ್ದು ದೂರು ದಾಖಲಿಸಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.