Priyank Kharge : ಸಮಸ್ಯೆಗಳ ಬಗ್ಗೆ ಮಾತನಾಡಿದ್ರೆ ಖರ್ಗೆ ಅವರಿಂದ ಮಾನಸಿಕ ಹಿಂಸೆ
ಕಲಬುರಗಿ : ಚಿತ್ತಾಪೂರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಯಾರಾದ್ರೂ ಚಕಾರ ಎತ್ತಿದವರಿಗೆ ಶಾಸಕ ಪ್ರಿಯಾಂಕ್ ಖರ್ಗೆ ತೊಂದರೆಗಳನ್ನು ನೀಡುತ್ತಿದ್ದಾರೆ. ಸುಖಾಸುಮ್ಮನೆ ಅವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವುದು, ಪೊಲೀಸ್ ಠಾಣೆಗೂ ಮನೆ ಅಲೆದಾಡುವಂತೆ ಮಾಡಿ ಅವರಿಗೆ ಮಾನಸಿಕವಾಗಿ ಹಿಂಸೆ ನೀಡುತ್ತಿದ್ದಾರೆ ಎಂದು ಬಿಜೆಪಿ ಯುವ ಮುಖಂಡ ಮಣಿಕಂಠ ರಾಥೋಡ್ ಎಂಬುವವರು ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸ ಮಾತನಾಡಿದ ಮಣಿಕಠ ರಾಥೋಡ್, ಕಾಂಗ್ರೆಸ್ ಶಾಸಕ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಆರೋಪಗಳ ಸುರಿಮಳೆಗೈದರು.
ಚಿತ್ತಾಪೂರ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿವೆ. ಕುಡಿಯುವ ನೀರಿನ ಸಮಸ್ಯೆ, ನಿರುದ್ಯೋಗ ಸಮಸ್ಯೆ, ರಸ್ತೆ ಸಮಸ್ಯೆ ಸೇರಿದಂತೆ ನಾನಾ ಸಮಸ್ಯೆಗಳಿವೆ. ಈ ಸ್ಥಳೀಯ ಸಮಸ್ಯೆಗಳ ಬಗ್ಗೆ ಯಾರಾದರೂ ಚಕಾರ ಎತ್ತಿದವರಿಗೆ ಶಾಸಕರು ತೊಂದರೆಯನ್ನುಂಟು ಮಾಡುತ್ತಿದಾರೆ.
ಅದಕ್ಕೆ ಉದಾಹರಣೆ ನಾನು, ಈ ಹಿಂದೆ ಶಾಲಾ ಮಕ್ಕಳು ಕಸ ತುಂಬಿದ ಅಟೋದಲ್ಲಿ ಪ್ರಯಾಣಿಸುತ್ತಿದ್ದಾರೆ. ಮಾಧ್ಯಮಗಳ ವರದಿ ಆಧರಿಸಿ ಸುಮಾರು 50 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅಕ್ರಮ ಆಸ್ತಿ ಮಾಡಿರುವ ಕುರಿತು ಹೇಳಿಕೆ ನೀಡಿದ್ದೆ.
ಅದಕ್ಕೆ ಅವರು ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದು, ಕೋಟಿ ರೂಪಾಯಿ ಮಾನ ಹಾನಿ ಪರಿಹಾರ ಕೇಳಿದ್ದಾರೆ. ಹಾಗಾದರೆ, ಸಮಸ್ಯೆಗಳ ಬಗ್ಗೆ ಶಾಸಕರ ಗಮನ ಸೆಳೆದಿದ್ದೇ ತಪ್ಪಾ. ಹಾಗದರೆ ನಮ್ಮ ಊರು ಅಭಿವೃದ್ದಿ ಕಾಣುವುದಾದರೂ ಎಂದು ಇದಕ್ಕೆ ಮಾನ್ಯ ಶಾಸಕರು ಉತ್ತರ ಹೇಳಬೇಕು ಎಂದು ಪ್ರಶ್ನಿಸಿದ್ದಾರೆ.
ಹಾಗೆಯೇ ಮಾನ್ಯ ಶಾಸಕರು ಸ್ಥಳೀಯ ಸಮಸ್ಯೆಗಳ ಪರಿಹಾರಕ್ಕೆ ಕ್ರಮ ಕೈಗೊಳ್ಳುವ ಬದಲು ಕಾಂಗ್ರೆಸ್ ನ ರಾಷ್ಟ್ರೀಯ ನಾಯಕರಂತೆ ರಾಷ್ಟ್ರೀಯ ವಿಚಾರಗಳ ಬಗ್ಗೆ ಚರ್ಚಿಸುತ್ತಿದ್ದಾರೆ. ಮೊದಲು ನಮಗೆ ಕುಡಿಯುವ ನೀರು, ಉದ್ಯೋಗಾವಕಾಶ ನೀಡಿ, ಸಹಾಯ ಕೇಳಲು ಬಂದವರಿಗೆ ಬಾಯಿಗೆ ಬಂದಂತೆ ನಿಂದಿಸುವ ಬದಲು ಅವರಿಗೆ ಸಹಾಯ ಮಾಡಿ ಮಾನ್ಯ ಶಾಸಕರೇ ಎಂದು ಕಿಡಿಕಾರಿದರು.
ನಿಮ್ಮ ತಂದೆಯವರಾದ ಮಲ್ಲಿಕಾರ್ಜುನ ಖರ್ಗೆ ಅವರು ಚುನಾವಣೆಯಲ್ಲಿ ಸೋಲಲು ತಾವೇ ಕಾರಣಿಕರ್ತರು ಎಂಬ ಮಾತು ಸ್ಥಳೀಯರಲ್ಲಿ ಕೇಳಿಬರುತ್ತಿದೆ. ನ್ಯಾಯಯುತವಾಗಿ ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಅವರ ಕಷ್ಟಗಳನ್ನು ಪರಿಹಾರ ನೀಡಿ.
ನ್ಯಾಯಕ್ಕೆ ಬೆಲೆ ನೀಡುವವ ನಾನು ಎಂದು ಹೇಳುತ್ತಿರುವ ನೀವು, ಪಿಎಸ್ಐ ಹಗರಣಕ್ಕೆ ಸಂಬಂಧಿಸಿದಂತೆ ಸಿಐಡಿ ಪೊಲೀಸರು ಮೂರು ಬಾರಿ ನೀಡಿರುವ ನೋಟೀಸ್ ಗೆ ನೀವು ಬೆಲೆನೇ ನೀಡಲಿಲ್ಲ, ಇದೇನಾ ನಿಮ್ಮ ನ್ಯಾಯದ ಬೆಲೆ ಎಂದು ಪ್ರಶ್ನಿಸಿದ್ದಾರೆ.
ನಿಮ್ಮ ತಂದೆಯವರಿಗೆ ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಇಡಿಯವರು ನೋಟೀಸ್ ನೀಡಿದ್ದಾರೆ. ಹಾಗದರೆ ನೀವು ನಡೆಸಿದ ಅವ್ಯವಹಾರವಾದರೂ ಎಂತಹ ಗಾತ್ರದ್ದು ಅದನ್ನಾದರೂ ಬಹಿರಂಗಪಡಿಸಿ ಮಾನ್ಯ ಶಾಸಕರೇ. ನಿಮ್ಮ ವಿರುದ್ಧ ಧ್ವನಿ ಎತ್ತಿದ ಜನರ ವಿರುದ್ಧ ನಾನಾ ಸಂಘಟನೆಗಳಿಂದ ಪ್ರತಿಭಟನೆ ನಡೆಸಿ, ಅವರ ವಿರುದ್ಧ ದೂರು ದಾಖಲಿಸುವುದನ್ನು ಬಿಟ್ಟು, ನ್ಯಾಯಯುತವಾಗಿ ಅವರಿಗೆ ಸಿಗಬೇಕಾದ ನ್ಯಾಯ ಕೊಡಿಸಿ, ಸುಖಾಸುಮ್ಮನೆ ನಿಮ್ಮ ವಿರೋಧಿಗಳ ಮೇಲೆ ದೂರು ದಾಖಲಿಸುವುದನ್ನು ಕೈಬಿಡಿ, ಇಲ್ಲವಾದ್ದಲ್ಲಿ ಮುಂಬರುವ ದಿನಗಳಲ್ಲಿ ತಮ್ಮ ವಿರುದ್ಧ ಉಗ್ರ ಹೋರಾಟ ನಡೆಸಲು ತೀರ್ಮಾನಿಸಲಾಗುವುದು ಎಂದು ಮಣಿಕಂಠ ರಾಥೋಡ್ ಎಚ್ಚರಿಕೆ ನೀಡಿದ್ದಾರೆ.