ಕೊರೊನಾ ಸೋಂಕಿತರ ನೆರವಿಗೆ ಮುಂದಾದ ಅಕ್ಷಯ್ – ಗಂಭೀರ್ ಫೌಂಡೇಶನ್ ಗೆ 1 ಕೋಟಿ ರೂ. ದೇಣಿಗೆ..!
ಮುಂಬೈ : ಒಂದೆಡೆ ಬಾಲಿವುಡ್ ನಲ್ಲಿ ಕೆಲ ಫೇಮಸ್ ಸ್ಟಾರ್ ಸೆಲೆಬ್ರಿಟಿಗಳು ಇಂತಹ ಕೊರೊನಾ ಪರಿಸ್ಥಿತಿಯಲ್ಲಿ ದೇಶದಲ್ಲಿ ಎಲ್ಲಿ ನೋಡಿದ್ರು ಸಾವು ನೋವುಗಳೇ ಸಂಭವಿಸುತ್ತಿರುವ ಹೊತ್ತಿನಲ್ಲಿ ದೇಶ ಬಿಟ್ಟು ವಿದೇಶಕ್ಕೆ ತೆರಳಿ ಮೋಜು ಮಸ್ತಿ ಮಾಡುತ್ತಾ ದುಡ್ಡು ಉಡಾಯಿಸುತ್ತಿದ್ದಾರೆ. ರಣಬೀರ್ ಕಪೂರ್ – ಆಲಿಯಾ ಭಟ್ , ಟೈಗರ್ ಶ್ರಾಫ್ – ದಿಶಾ ಪಟಾನಿ, ಸಾರಾ ಅಲಿ ಖಾನ್ ಹೀಗೆ ಹಲವರು ಮಾಲ್ಡೀವ್ಸ್ ನಲ್ಲಿ ಮೈ ಮರೆತು ಎಂಜಾಯ್ ಮಾಡ್ತಿದ್ಧಾರೆ.
ಮತ್ತೊಂದೆಡೆ ಸೋನು ಸೂದ್ ಹಾಗೂ ಕೆಲ ಪತಾರೆಯರು ಬಡವರಿಗಾಗಿ ನೆರವಾಗ್ತಿದ್ದಾರೆ. ಅದ್ರಲ್ಲೂ ಸೋನು ಸೂದ್ ತಮಗೆ ಕೊರೊನಾ ಪಾಸಿಟಿವ್ ಇದ್ದಾಗಲೂ ಇತರರಿಗೆ ನೆರವಾಗಿ ಬಡವರ ಪಾಲಿಗೆ ದೇವರಾಗಿದ್ಧಾರೆ.
ಇದೀಗ ಬಾಲಿವುಡ್ ನ ಕಿಲಾಡಿ ಅಕ್ಷಯ್ ಕುಮಾರ್ ಸº ಕೊರೊನಾ ಸೋಂಕಿತರ ನೆರವಿಗೆ ಆಗಮಿಸಿದ್ದು , ಬಿಜೆಪಿ ಸಂಸದ ಗೌತಮ್ ಗಂಭೀರ್ ಅವರು ನಡೆಸುತ್ತಿರುವ ಗಂಭೀರ್ ಫೌಂಡೇಷನ್ಗೆ 1 ಕೋಟಿ ರೂಪಾಯಿ ದೇಣಿಗೆ ರೂಪದಲ್ಲಿ ನೀಡಿದ್ದಾರೆ. ಆ ಹಣವನ್ನು ಸೋಂಕಿತರ ಆಹಾರ, ಆಕ್ಸಿಜನ್ ಸೇರಿ ವಿವಿಧ ಬೇಡಿಕೆಗಳಿಗೆ ಬಳಸಿಕೊಳ್ಳುವಂತೆ ತಿಳಿಸಿದ್ದಾರೆ.
ಗೌತಮ್ ಗಂಭೀರ್ ಟ್ವಿಟ್ಟರ್ನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದು, ನೆರವು ನೀಡಲು ಮುಂದೆ ಬಂದಿದ್ದಕ್ಕಾಗಿ ಧನ್ಯವಾದಗಳು. ಕತ್ತಲೆಯಲ್ಲಿ ಮುಳುಗಿರುವಾಗ ಪ್ರತಿ ಸಹಾಯವೂ ಭರವಸೆಯ ಕಿರಣವಾಗುತ್ತದೆ. ನಿಮಗೆ ದೇವರು ಒಳ್ಳೆಯದು ಮಾಡಲಿ ಎಂದು ಟ್ವೀಟ್ ಮಾಡಿದ್ದಾರೆ.