BRS-BJP poster war : B L ಸಂತೋಷ್ ಕಾಣೆಯಾಗಿದ್ದಾರೆ ಎಂದು ಪೋಸ್ಟರ್ ವಾರ್…
BRS-BJP Poster War : ದೆಹಲಿ ಮದ್ಯ ಹಗರಣ ಪ್ರಕರಣದಲ್ಲಿ ಎಂಎಲ್ಸಿ ಕವಿತಾ ಇ ಡಿ ವಿಚಾರಣೆಗೆ ಹಾಜರಾಗುತ್ತಿರುವ ಹಿನ್ನೆಲೆಯಲ್ಲಿ ಹೈದರಾಬಾದ್ನಲ್ಲಿ ಬಿಆರ್ಎಸ್ – ಬಿಜೆಪಿ ನಡುವೆ ಪೋಸ್ಟರ್ ವಾರ್ ಆರಂಭವಾಗಿದೆ. ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಭಾವಚಿತ್ರಗಳನ್ನ ಅಂಟಿಸಿ ಕ್ರಿಮಿನಲ್ ಅಂಡ್ ವಾಂಟೆಂಡ್ ಎಂಬ ಪೋಸ್ಟರ್ ಅಂಟಿಸಾಲಾಗಿದ್ದು, ಶಾಸಕರ ಖರೀದಿಯಲ್ಲಿ ಸಿದ್ಧಹಸ್ತರು ಎಂದು ಬರೆಯಾಲಾಗಿದೆ.
ಈತ ಎಲ್ಲಿದ್ದಾನೆ ಎಂದು ಬಹಿರಂಗಪಡಿಸಿದವರಿಗೆ ಮೋದಿ ಭರವಸೆಯಂತೆ 15 ಲಕ್ಷ ರೂಪಾಯಿ ಬಹುಮಾನ ನೀಡಲಾಗುವುದು ಎಂದು ಪೋಸ್ಟರ್ ಅಂಟಿಸಿದ್ದಾರೆ ಬಿಆರ್ ಎಸ್ ಕಾರ್ಯಕರ್ತರು. ಇತ್ತೀಚೆಗಷ್ಟೇ ದೆಹಲಿಯಲ್ಲಿ ಇಡಿ ಮುಂದೆ ಕವಿತಾ ವಿಚಾರಣೆಗೆ ಹಾಜರಾದ ಬಳಿಕ ಹೈದರಾಬಾದ್ನಲ್ಲಿ ಇಂತಹ ಹಲವು ಪೋಸ್ಟರ್ಗಳು ಕಾಣಿಸಿಕೊಂಡಿವೆ. ಕವಿತಾ ಇಂದು ಮತ್ತೊಮ್ಮೆ ಇ ಡಿ ಮುಂದೆ ಹಾಜರಾಗಲಿದ್ದಾರೆ. ಈ ಹಿನ್ನೆಲೆಯಲ್ಲಿ ನಿನ್ನೆ ದೆಹಲಿಗೆ ತೆರಳಿದ ಅವರು ತುಘಲಕ್ ರಸ್ತೆಯಲ್ಲಿರುವ ಸಿಎಂ ಕೆಸಿಆರ್ ನಿವಾಸದಲ್ಲಿ ತಂಗಿದ್ದರು.
ತೆಲಂಗಾಣ ಸಚಿವರಾದ ಕೆಟಿಆರ್, ಹರೀಶ್ ರಾವ್ ಸೇರಿದಂತೆ ಸತ್ಯವತಿ ರಾಥೋಡ್, ಸಬಿತಾ ಇಂದ್ರ ರೆಡ್ಡಿ, ಎರ್ರಬೆಲ್ಲಿ ದಯಾಕರ್ ರಾವ್ ಮತ್ತು ಕೆಲವು ಟಿಆರ್ಎಸ್ ನಾಯಕರು ಕವಿತಾ ಅವರನ್ನು ಬೆಂಬಲಿಸಲು ಈಗಾಗಲೇ ದೆಹಲಿಗೆ ತೆರಳಿದ್ದಾರೆ. ಇದಲ್ಲದೆ, ಸಂಸತ್ ಸಭೆಯ ಹಿನ್ನೆಲೆಯಲ್ಲಿ ಎಲ್ಲಾ ಬಿಆರ್ಎಸ್ ಸಂಸದರು ಕೂಡ ದೆಹಲಿಯಲ್ಲಿದ್ದಾರೆ.
BRS-BJP poster war : B L Santhosh is missing in poster war…