ಬೆಡ್ ಬ್ಲಾಕಿಂಗ್ ಅವ್ಯವಹಾರಕ್ಕೆ ಬಿಎಸ್ ವೈ ನೇರ ಹೊಣೆ : ಹೆಚ್.ವಿಶ್ವನಾಥ್
ಮೈಸೂರು : ಬಿಬಿಎಂಪಿ ಬೆಡ್ ಬ್ಲಾಕಿಂಗ್ ಅವ್ಯವಹಾರಕ್ಕೆ ಸಿಎಂ ಬಿಎಸ್ ವೈ ಅವರೇ ನೇರ ಹೊಣೆ ಎಂದು ಎಂಎಲ್ ಸಿ ಹೆಚ್ ವಿಶ್ವನಾಥ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರಿಗೆ ಕಣ್ಣು ಕಾಣಲ್ಲ, ಕಿವಿಯೂ ಕೇಳಲ್ಲ, ಹೇಳಿದ್ದೂ ಅರ್ಥ ಆಗಲ್ಲ.
ಇಂಥ ಮುಖ್ಯಮಂತ್ರಿಗಳನ್ನು ಕಟ್ಟಿಕೊಂಡು ಏನು ಮಾಡಲು ಸಾಧ್ಯ ಎಂದು ಕಿಡಿಕಾರಿದ್ದಾರೆ.
ಬಿಬಿಎಂಪಿ ಬೆಡ್ ಬ್ಲಾಕಿಂಗ್ ಅವ್ಯವಹಾರಕ್ಕೆ ಅವರೇ ನೇರ ಹೊಣೆ. ಸಿಎಂ ಬಳಿ ಹೋದ ಖಾತೆಗಳು ಸತ್ತೇ ಹೋಗುತ್ತವೆ.
ಒಂದೇ ಒಂದು ದಿನ ಯಡಿಯೂರಪ್ಪನವರು ಬಿಬಿಎಂಪಿಗೆ ಹೋಗಿಲ್ಲ, ಸಭೆಯನ್ನೂ ನಡೆಸಿಲ್ಲ. ಅಂದಮೇಲೆ ಅವರಿಗೇಕೆ ಆ ಖಾತೆ ಎಂದು ಪ್ರಶ್ನಿಸಿದರು.
ಇದೇ ವೇಳೆ ಕೊರೊನಾ ನಿರ್ವಹಣೆಗೆ ಸಚಿವ ನೇಮಕ ಮಾಡಿದ ವಿಚಾರವಾಗಿ ಮಾತನಾಡಿ, ಸುಧಾಕರ್ ಸ್ಥಿತಿ ದ್ರೌಪದಿ ವಸ್ತ್ರಾಪಹರಣದಂತಾಗಿದೆ.
ಸುಧಾಕರ್ ಬಳಿ ಇದ್ದ ಎಲ್ಲಾ ಅಧಿಕಾರ ಕಿತ್ತುಕೊಂಡಿದ್ದಾರೆ. ಸುಧಾಕರ್ ಬಳಿ ಹೋಗಿ ನೀವು ಏನು ಎಂದು ಕೇಳಿದರೆ ಹೆಲ್ತ್ ಮಿನಿಸ್ಟರ್ ಎಂದು ಹೇಳಬೇಕಷ್ಟೆ ಪಾಪ ಎಂದು ವಿಶ್ವನಾಥ್ ವ್ಯಂಗ್ಯವಾಡಿದರು.