ರಾರಾ ಕುರುಕ್ಷೇತ್ರದಲ್ಲಿ ಇಂದು `ರಾಜಾಹುಲಿ’ ಘರ್ಜನೆ
ಬೆಂಗಳೂರು : ರಾಜರಾಜೇಶ್ವರಿ ಉಪಚುನಾವಣಾ ಬಿಹಿರಂಗ ಪ್ರಚಾರಕ್ಕೆ ಇನ್ನೊಂದಿ ದಿನ ಮಾತ್ರ ಬಾಕಿ ಇದೆ. ಈ ಹಿನ್ನೆಲೆ ರಾಜ್ಯ ಕೇಸರಿ ಪಡೆ ಶಿರಾ ಹಾಗೂ ರಾಜರಾಜೇಶ್ವರಿ ಕ್ಷೇತ್ರಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದೆ.
ನಿನ್ನೆ ರಾಜರಾಜೇಶ್ವರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ರೋಡ್ ಶೋ ಮೂಲಕ ಮತಬೇಟೆ ನಡೆಸಿದ್ದರು. ಇಂದು ಕ್ಷೇತ್ರದಲ್ಲಿ ರಾಜಾಹುಲಿ ( bs yeddyurappa ) ಘರ್ಜಿಸಲಿದೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ( bs yeddyurappa ) ರಾರಾ ಕ್ಷೇತ್ರದ 9 ವಾರ್ಡ್ ಗಳಲ್ಲಿ ರೋಡ್ ಶೋ ನಡೆಸಲಿದ್ದಾರೆ.
ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ರಾಜರಾಜೇಶ್ವರಿ ನಗರ ಕ್ಷೇತ್ರ ಜೆ.ಪಿ ಪಾರ್ಕ್, ಯಶವಂತಪುರ, ಕೊಟ್ಟಿಗೆಪಾಳ್ಯ, ರಾಜರಾಜೇಶ್ವರಿನಗರ, ಜ್ಞಾನಭಾರತಿ, ಲಗ್ಗೆರೆ, ಲಕ್ಷ್ಮೀದೇವಿನಗರ, ಹೆಚ್ ಎಂಟಿ, ಜಾಲಹಳ್ಳಿ ಸೇರಿದಂತೆ 9 ವಾರ್ಡ್ ಗಳಲ್ಲಿ ರೋಡ್ ಶೋ ನಡೆಲಿದೆ.
ಇನ್ನು ರೋಡ್ ಶೋ ಗೂ ಮುನ್ನ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು ವರ್ಚುಯಲ್ ರ್ಯಾಲಿಯನ್ನು ಉದ್ದೇಶಿನಿ ಭಾಷಣ ಮಾಡಲಿದ್ದಾರೆ.
ಸಿಎಂ ಪ್ರಚಾರ ಎಲ್ಲೆಲ್ಲಿ?
ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಇಂದು ಬೆಳಿಗ್ಗೆಯಿಂದ 5.30ರವರೆಗೂ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ಪ್ರಚಾರ ನಡೆಸಲಿದ್ದಾರೆ.
ಇದನ್ನೂ ಓದಿ : ಕೆ.ಜಿ ಹಳ್ಳಿ ಕೇಸ್ ಮಾಜಿ ಮೇಯರ್ ಸಂಪತ್ರಾಜ್ ನಾಪತ್ತೆ; ಆಸ್ಪತ್ರೆಗೆ ಸಿಸಿಬಿ ನೋಟಿಸ್..!
ಮೊದಲನೇಯದಾಗಿ ಜ್ಞಾನಭಾರತಿ ವಾರ್ಡ್ನಿಂದ ಯಡಿಯೂರಪ್ಪ ರೋಡ್ ಶೋ ಆರಂಭಿಸಲಿದ್ದಾರೆ. ಬಳಿಕ ಮಧ್ಯಾಹ್ನ 12.30 ರಿಂದ ಮ 1 ಗಂಟೆವರೆಗೂ ಕೊಟ್ಟಿಗೆಪಾಳ್ಯ ವಾರ್ಡ್,
ಮಧ್ಯಾಹ್ನ 2ಗಂಟೆಯಿಂದ 2.30ಗಂಟೆಯವರೆಗೆ ಲಗ್ಗೆರೆ ವಾರ್ಡ್, ಮಧ್ಯಾಹ್ನ 2.30 ಗಂಟೆಯಿಂದ ಮಧ್ಯಾಹ್ನ 3ಗಂಟೆಯವರೆಗೆ ಲಕ್ಷ್ಮೀದೇವಿ ನಗರ,
ಮಧ್ಯಾಹ್ನ 3ಗಂಟೆಯಿಂದ ಮಧ್ಯಾಹ್ನ 3.30ಗಂಟೆಯವರೆಗೆ ಹೆಚ್ ಎಂಟಿ ವಾರ್ಡ್, ಮಧ್ಯಾಹ್ನ 3.30 ಗಂಟೆಯಿಂದ ಮಧ್ಯಾಹ್ನ 3.45 ವರೆಗೆ ಜಾಲಹಳ್ಳಿ ವಾರ್ಡ್,
ಸಂಜೆ 4ಗಂಟೆಯಿಂದ 5.30ರವರೆಗೆ ಜೆಪಿಪಾರ್ಕ್ ಮತ್ತು ಯಶವಂತಪುರ ವಾರ್ಡ್ ಗಳಲ್ಲಿ ಪ್ರಚಾರ ನಡೆಸಲಿದ್ದಾರೆ.
ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯ
ಶಿರಾ ಹಾಗೂ ರಾಜರಾಜೇಶ್ವರಿ ನಗರದ ಉಪ ಚುನಾವಣೆಯ ಬಹಿರಂಗ ಪ್ರಚಾರ ಇಂದು ಸಂಜೆ ಅಂತ್ಯಗೊಳ್ಳಲಿದೆ.
ನವೆಂಬರ್ 3ರಂದು ಎರಡು ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ, ನವೆಂಬರ್ 10ರಂದು ಚುನಾವಣಾ ಫಲಿತಾಂಶ ಹೊರಬರಲಿದೆ. ನಾಳೆ ಮತ್ತು ನಾಡಿದ್ದು ಮನೆ ಮನೆಗಳಿಗೆ ತೆರಳಿ ಪ್ರಚಾರ ನಡೆಸಲು ಅವಕಾಶವಿದೆ.
ಇನ್ನು ಶಿರಾ ಹಾಗೂ ರಾಜರಾಜೇಶ್ವರಿ ಎರಡು ಕ್ಷೇತ್ರದಲ್ಲಿ ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ನಡುವೆ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆ.
ಇದನ್ನೂ ಓದಿ : ಶಿರಾಕ್ಕೆ ಮದಲೂರು ಕೆರೆ ನೀರು, ಶಿಕಾರಿಪುರ ಮಾದರಿ ಅಭಿವೃದ್ಧಿ: ಸಿಎಂ ಬಿಎಸ್ವೈ ಭರವಸೆಗಳ ಸುರಿಮಳೆ..!
ಜೊತೆಗೆ ಕೆಲ ಪಕ್ಷೇತರ ಅಭ್ಯರ್ಥಿಗಳು ತಮ್ಮ ರಾಜಕೀಯ ಭವಿಷ್ಯ ನಿರ್ಧರಿಸಿಕೊಳ್ಳಲು ಕಣಕ್ಕಿಳಿದಿದ್ದಾರೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿಯಾಗಿ ಕುಸುಮಾ, ಜೆಡಿಎಸ್ ಅಭ್ಯರ್ಥಿಯಾಗಿ ವಿ. ಕೃಷ್ಣಮೂರ್ತಿ ಕಣದಲ್ಲಿದ್ದಾರೆ.
ಶಿರಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಡಾ.ರಾಜೇಶ್ ಗೌಡ, ಕಾಂಗ್ರೆಸ್ ಅಭ್ಯರ್ಥಿಯಾಗಿ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿಯಾಗಿ ಅಮ್ಮಾಜಮ್ಮ ಅಖಾಡಕ್ಕೆ ಇಳಿದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel