“ಬಿಎಸ್ವೈ ಡಮ್ಮಿ ಸಿಎಂ, ಸಿಡಿ ನಕಲಿ ಎಂದಾದ್ರೆ ಸಿಎಂಗೆ ನೇಣು”
ಮೈಸೂರು : ಯಡಿಯೂರಪ್ಪ ಡಮ್ಮಿ ಸಿಎಂ, ಸಹಿ ಮಾಡಲು ಅಷ್ಟೇ ಯಡಿಯೂರಪ್ಪ ಇದ್ದಾರೆ ಎಂದು ಶಾಸಕ ಹೆಚ್.ಪಿ.ಮಂಜುನಾಥ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕರು, ಆರ್ ಅಶೋಕ್, ಸರ್ಕಾರಿ ದುಡ್ಡಲ್ಲಿ ಸ್ವಂತ ತೋಟಕ್ಕೆ ಕಾಂಪೌಂಡ್ ನಿರ್ಮಾಣ ಮಾಡಿಕೊಳ್ಳುತ್ತಿದ್ದಾರೆ.
ಆದ್ರೆ ಜನಪ್ರತಿನಿಧಿಗಳು ಕೇಳಿದ್ರೆ ಅನುದಾನ ಕೊಡ್ತಿಲ್ಲ ಎಂದು ದೂರಿದ್ದಾರೆ. ಇನ್ನು ಅಧಿಕಾರಿಗಳು ವಿಧಾನಸೌಧಕ್ಕಿಂತ ಹೆಚ್ಚು ವಿಜಯೇಂದ್ರ ಪ್ಲಾಟ್ನಲ್ಲೇ ಹೆಚ್ಚಾಗಿ ಇರ್ತಾರೆ.
ಮಂತ್ರಿಗಳು ಶಾಸಕರನ್ನ ಕ್ಯಾರೆ ಎನ್ನುತ್ತಿಲ್ಲ. ಸರ್ಕಾರವನ್ನ ಯಡಿಯೂರಪ್ಪ ನಡೆಸುತ್ತಿದ್ದಾರೋ, ಅವರ ಮಗ ನಡೆಸುತ್ತಿದ್ದಾರೋ ಗೊತ್ತಿಲ್ಲ ಎಂದು ಹೇಳಿದರು.
ಮರ್ಮಾಘಾತ ಆದ ಮಂತ್ರಿ, ಶಾಸಕರು ಮಾತ್ರ ಸಿಎಂ ವಿರುದ್ಧ ಧ್ವನಿ ಎತ್ತುತ್ತಿದ್ದಾರೆ. ಬಿಎಸ್ವೈಗೆ ಅರುಳೋ ಮರುಳೋ ಎನ್ನುವಂತಾಗಿದೆ. ಸಿಎಂ ಅವರ ಕುಟುಂಬಕ್ಕೆ ರಬ್ಬರ್ ಸ್ಟಾಂಪ್ ಆಗಿದ್ದಾರೆ ಎಂದು ವ್ಯಂಗ್ಯವಾಡಿದರು.
ಇದೇ ವೇಳೆ ಸಿಡಿ ವಿಚಾರವಾಗಿ ಮಾತನಾಡಿ, ಸಿಡಿ ವಿಚಾರ ಸಿಎಂಗೆ ಸಂದಿಗ್ಧ ಪರಿಸ್ಥಿತಿ ತಂದೊಡ್ಡಿದೆ.
ಸಿಡಿ ನಕಲಿ ಎಂದು ಒಪ್ಪಿಕೊಂಡ್ರೆ ಸಿಎಂಗೆ ನೇಣು,ಅಸಲಿ ಎಂದು ಒಪ್ಪಿಕೊಂಡ್ರೆ ಸರ್ಕಾರಕ್ಕೆ ನೇಣು ಎಂದು ಕಾಂಗ್ರೆಸ್ ಶಾಸಕ ಹೆಚ್.ಪಿ.ಮಂಜುನಾಥ್ ಲೇವಡಿ ಮಾಡಿದ್ದಾರೆ.