ಪ್ರಕೃತಿಯಿಂದ ಪ್ರಾಪ್ತವಾದ ಪ್ರತಿಯೊಂದು ವಸ್ತುವನ್ನೂ ಪೂಜಿಸುವುದು ಗೌರವ ಸ್ಥಾನದಲ್ಲಿಡುವುದು ಆರಾಧಿಸುವುದು ನಮ್ಮ ಸನಾತನ ಧರ್ಮದ ಶ್ರೇಷ್ಠ ವಿಚಾರವೆಂದರೆ ಅತಿಶಯೋಕ್ತಿಯಾಗದು. ಗಿಡ, ಮರ, ಪ್ರಾಣಿ, ಪಕ್ಷಿ, ಕಲ್ಲು, ಮಣ್ಣು, ನೀರು ಎಲ್ಲವೂ ಪೂಜ್ಯತೆಯನ್ನು ಹೊಂದಿದೆಯೆಂದರೆ ಅದಕ್ಕೆರಡು ಮಾತಿಲ್ಲ. ಅಮರನಾಥದಲ್ಲಿ ಮಂಜಿನಿಂದ ಉಂಟಾಗುವ ಲಿಂಗಾಕಾರವನ್ನು ಹೊಂದಿದ ಅಮರನಾಥೇಶ್ವರನ ದರ್ಶನ ಮಾಡಿ ಧನ್ಯರಾಗುವೆವು ನಾವು. ನಮ್ಮ ಜೀವನಕ್ಕೆ ಅತ್ಯವಶ್ಯಕವಾದ ಆಮ್ಲಜನಕವನ್ನು ಪೂರೈಸುವ ಸಸ್ಯರಾಶಿಗಳೆಲ್ಲವೂ ಪೂಜ್ಯವೇ. ಅಂತಹ ಸಸ್ಯಗಳಲ್ಲಿ ಅಶ್ವತ್ಥನಾರಾಯಣನೆಂದೇ ಸಾಕ್ಷಾತ್ ವಿಷ್ಣುವಿನ ಸ್ಥಾನದಲ್ಲಿ ಪೂಜಿಸುವ ಹಾಗೂ ಬ್ರಹ್ಮಾವಿಷ್ಣು ಮಹೇಶ್ವರಾತ್ಮಕವೆಂದೇ ಖ್ಯಾತವಾಗಿರುವ ಶ್ರೀ ಅಶ್ವತ್ಥ ವೃಕ್ಷಾರಾಧನೆ ಬಹು ಪ್ರಾಚೀನಕಾಲದಿಂದಲೂ ನಮ್ಮಲ್ಲಿ ಬೆಳೆದು ಬಂದಿದೆ. ಈ ರೀತಿಯ ಆರಾಧನೆಗೆ ಶಾಸ್ತ್ರೀಯ ಹಿನ್ನೆಲೆ-ಪರಿಕಲ್ಪನೆ ಇದೆ. ಯಾವ ರೀತಿಯಲ್ಲಿ ದೇವ ಮಂದಿರದಲ್ಲಿ ದೇವತಾ ಮೂರ್ತಿಯನ್ನು ಸ್ಥಾಪಿಸುವ ವೈದಿಕ – ಆಗಮಿಕ ವಿಧಿಗಳು ರೂಢಿಯಲ್ಲಿವೆಯೋ ಅದೇ ರೀತಿಯಲ್ಲಿ ಶ್ರೀ ಅಶ್ವತ್ಥವೃಕ್ಷ ಸ್ಥಾಪನೆಗೆ ಶಾಸ್ತ್ರೀಯ ವಿಧಿ ವಿಧಾನಗಳು ಸ್ಮೃತಿಗಳಲ್ಲಿ ಹೇಳಲ್ಪಟ್ಟಿವೆ.
ಹಿಂದೂ ಮಹಾಕಾವ್ಯವಾದ ಮಹಾಭಾರತದಲ್ಲಿ ಅಶ್ವತ್ಥ ಮರಕ್ಕೆ ಸಂಬಂಧಿಸಿದ ಅನೇಕ ಕಥೆಗಳನ್ನು ಕಾಣಬಹುದು. ಅವುಗಳಲ್ಲಿ ಸತಿ ಸಾವಿತ್ರಿಯ ಕಥೆಯೂ ಒಂದು. ಸಾವಿತ್ರಿಯು ವಿವಾಹವಾಗಿ ಒಂದು ವರ್ಷದಲ್ಲಿಯೇ ಅಶ್ವತ್ಥ ಮರದ ಹತ್ತಿರ ಬಳಿ ಸಾವಿತ್ರಿಯ ಪತಿ ಸತ್ಯವಾನನು ಸಾಯುತ್ತಾನೆ. ಆಗ ತನ್ನ ಬುದ್ಧಿವಂತಿಕೆ ಹಾಗೂ ದೃಢವಾದ ದೈವ ಭಕ್ತಿಯ ಮೂಲಕ ಗಂಡನಿಗೆ ಜೀವ ಬರುವಂತೆ ಮಾಡುತ್ತಾಳೆ ಸಾವಿತ್ರಿ. ಈ ಹಿನ್ನೆಲೆಯಲ್ಲಿಯೇ ಇಂದಿಗೂ ಮಹಿಳೆಯರು ತಮ್ಮ ಸೌಭಾಗ್ಯವನ್ನು ಗಟ್ಟಿಗೊಳಿಸಲು, ಪತಿಯ ಆಯುಷ್ಯದ ವೃದ್ಧಿಗೆ, ಕುಟುಂಬದ ಏಳಿಗೆಗೆ, ಅವಿವಾಹಿತರು ವಿವಾಹ ಆಗಲು, ಕೆಲಸವನ್ನು ಪಡೆದುಕೊಳ್ಳಲು ಹಾಗೂ ಆರೋಗ್ಯ ಸುಧಾರಣೆ ಹೀಗೆ ಅನೇಕ ವಿಷಯಗಳಿಗಾಗಿ ಅಶ್ವತ್ಥ ಮರದ ಪ್ರದಕ್ಷಿಣೆ, ದೀಪ ಬೆಳಗುವುದು, ಪವಿತ್ರ ಧಾರ ಸುತ್ತುವುದು, ವ್ರತ ಕೈಗೊಳ್ಳುವುದು ಹಾಗೂ ಪೂಜೆ ಸಲ್ಲಿಸುವುದರ ಮೂಲಕ ಇಷ್ಟಾರ್ಥಗಳನ್ನು ಪೂರೈಸಿಕೊಳ್ಳುತ್ತಾರೆ.
|ಮೂಲತೋ ಬ್ರಹ್ಮ ರೂಪಾಯ ಮಧ್ಯತೋ ವಿಷ್ಣು ರೂಪಿಣೇ ಅಗ್ರತ ಶಿವ ರೂಪಾಯ ವೃಕ್ಷ ರಾಜಯ ತೇ ನಮಃ ||
ಮೂಲವು ಬ್ರಹ್ಮದ ರೂಪ, ಮಧ್ಯವು ವಿಷ್ಣುವಿನ ರೂಪ, ಮತ್ತು ಮೇಲ್ಭಾಗವು ಶಿವನ ರೂಪವಾಗಿರುವ ಮರಗಳ ರಾಜನಿಗೆ ನನ್ನ ನಮಸ್ಕಾರಗಳು.
ಈ ಮಂತ್ರವನ್ನು ಹೇಳುತ್ತಾ ನಿತ್ಯವೂ ಅಶ್ವತ್ಥನಾರಾಯಣನಿಗೆ ಪ್ರದಕ್ಷಿಣೆ ಬಂದಲ್ಲಿ ನಮ್ಮ ಸಕಲ ಮನೋಕಾಮನೆಗಳು ಪೂರ್ಣವಾಗುತ್ತವೆ
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ, ಮದುವೆ ವಿಳಂಬ, ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಶಾಶ್ವತವಾಗಿ ಪರಿಹಾರ ಮಾಡಿಕೊಡುತ್ತಾರೆ, ನಿಮ್ಮ ಸಮಸ್ಯೆಗಳಿಗೆ ಯಾರಿಂದಲೂ ಪರಿಹಾರ ಸಿಗದೆ ನೊಂದಿದ್ದರೆ ಇವರನ್ನು ಒಮ್ಮೆನಂಬಿ ಕರೆ ಮಾಡಿ ಖಂಡಿತಾ ಪರಿಹಾರ ಸಿಗುತ್ತದೆ.
ವಿಳಾಸ:- ಜ್ಞಾನೇಶ್ವರ್ ರಾವ್ ತಂತ್ರಿ ಮನೆ ಕೊಂಡಿಮುಲೆ ಹಳ್ಳಿ, ಕಟೀಲ್ ಪೋಸ್ಟ್ , ಮೂಲ್ಕಿ ತಾಲ್ಲೂಕು, ಮಂಗಳೂರು ತಪ್ಪದೆ ಕರೆ ಮಾಡಿ
85489 98564
ಅಶ್ವತ್ಥ ಮರದ ಕೆಳಗೆ ಅನೇಕ ಋಷಿ ಮುನಿಗಳು ಜಪ-ತಪಗಳನ್ನು ನಡೆಸಿದ್ದಾರೆ. ಅಂತೆಯೇ ಜ್ಞಾನವನ್ನು ಪಡೆದುಕೊಂಡಿದ್ದಾರೆ. ಸದಾ ಸಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಈ ಅಶ್ವತ್ಥ ವೃಕ್ಷವನ್ನು ಪೂಜಿಸುವುದರ ಮೂಲಕ ಸಾಕಷ್ಟು ಅನುಕೂಲವನ್ನು ಪಡೆದುಕೊಳ್ಳಬಹುದು. ಈ ಸಂಗತಿಯ ಬಗ್ಗೆ ಅನೇಕ ಮಂದಿಗೆ ಜ್ಞಾನವಿಲ್ಲದೆ ಇರಬಹುದು. ದೈವ ಶಕ್ತಿ ಹಾಗೂ ಔಷಧೀಯ ಗುಣವನ್ನು ಹೊಂದಿರುವ ಈ ಮರದ ಪೂಜೆ ಮಾಡುವುದರ ಮೂಲಕ ಸಾಕಷ್ಟು ಪುಣ್ಯವನ್ನು ಪಡೆದುಕೊಳ್ಳಬಹುದು. ಅಲ್ಲದೆ ನಾವು ಜೀವನದಲ್ಲಿ ಅನುಭವಿಸುತ್ತಿರುವ ಸಮಸ್ಯೆಗಳನ್ನು ಸುಲಭವಾಗಿ ಬಗೆಹರಿಸಿಕೊಳ್ಳಬಹುದು.