ಮನೀಶ್ ಸಿಸೋಡಿಯಾ ಮಹಾರಾಣಾ ವಂಶಸ್ಥರು – ಜಾತಿ ಕಾರ್ಡ್ ಹಿಡಿದ ಆಪ್ ಪಕ್ಷ..
ದೆಹಲಿಯ ಹೊಸ ಮದ್ಯ ನೀತಿಯಲ್ಲಿ ಭ್ರಷ್ಟಾಚಾರದ ಆರೋಪ ಪ್ರಕರಣದಲ್ಲಿ ಸಿಬಿಐ ದಾಳಿಗೆ ಒಳಗಾಗಿರುವ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರ ರಕ್ಷಣೆಗೆ ಆಮ್ ಆದ್ಮಿ ಪಕ್ಷ ಜಾತಿ ಗುರಾಣಿಯನ್ನ ಮುಂದಿಟ್ಟುಕೊಂಡಿದೆ.
ಪಕ್ಷವು ಸಿಸೋಡಿಯಾ ಅವರನ್ನು ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಎಂದು ಬಣ್ಣಿಸಿದೆ. ಈ ವಿಷಯದಲ್ಲಿ, ಎಎಪಿಯ ರಾಷ್ಟ್ರೀಯ ಜಂಟಿ ಪ್ರಧಾನ ಕಾರ್ಯದರ್ಶಿ ಮತ್ತು ಗುಜರಾತ್ ನಾಯಕ ಇಸುದನ್ ಗಧ್ವಿ ಸಾಮಾಜಿಕ ಜಾಲತಾಣದಲ್ಲಿ ಮೊದಲು ಪ್ರತಿಕ್ರಿಯೆ ನೀಡಿದ್ದಾರೆ. ಮಹಾರಾಣಾ ಪ್ರತಾಪ್ ಅವರ ವಂಶಸ್ಥ ಮನೀಶ್ ಸಿಸೋಡಿಯಾ ಅವರ ಮೇಲೆ ಬಿಜೆಪಿ ಸುಳ್ಳು ಆರೋಪಗಳ ಮೇಲೆ ಕಿರುಕುಳ ನೀಡುತ್ತಿದೆ ಎಂದು ಅವರು ಬರೆದಿದ್ದಾರೆ. ಇದರಿಂದ ಗುಜರಾತಿನ ರಜಪೂತ ಯುವಕರಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ ಎಂದಿದ್ದಾರೆ.
ಇನ್ನು ಕೆಲವೇ ದಿನಗಳಲ್ಲಿ 5000ಕ್ಕೂ ಹೆಚ್ಚು ರಜಪೂತ ಯುವಕರು ಪಕ್ಷ ಸೇರಲಿದ್ದಾರೆ ಎನ್ನುವ ವಿಷಯವನ್ನ ಅರವಿಂದ್ ಕೇಜ್ರಿವಾಲ್ ಮುಂದಿಟ್ಟಿದ್ದಾರೆ. ಇದಕ್ಕೂ ಮುನ್ನ ಶನಿವಾರ ಪಕ್ಷದ ವಕ್ತಾರ ಸಂಜಯ್ ಸಿಂಗ್ ಅವರು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಿರುದ್ಧ ಸಿಸೋಡಿಯಾ ಅವರನ್ನು ಮಹಾರಾಣಾ ಪ್ರತಾಪ್ ಅವರ ವಂಶಸ್ಥರು ಎಂದು ಕರೆದರು.
ಈ ವರ್ಷ ಗುಜರಾತ್ ಮತ್ತು ಹಿಮಾಚಲ ಪ್ರದೇಶದ ಚುನಾವಣೆಗಳ ಕಾರಣ, ಪಕ್ಷವು ಸಿಸೋಡಿಯಾ ಅವರನ್ನು ಪ್ರಾಮಾಣಿಕ ಮತ್ತು ಉತ್ತಮ ಶಿಕ್ಷಣ ಸಚಿವ ಎಂದು ಕರೆಯುವ ಮೂಲಕ ಅವರ ಜಾತಿಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ. ಗುಜರಾತ್ನಲ್ಲಿ ರಜಪೂತರ ಸಹಾನುಭೂತಿಯಿಂದ ತನಗೆ ಲಾಭವಾಗಬಹುದು ಎಂದು ಪಕ್ಷ ಆಶಿಸುತ್ತಿದೆ.