ಸಿಡಿ ಕೇಸ್ : ತನಿಖಾಧಿಕಾರಿಗಳ ವಿರುದ್ಧ ಯುವತಿ ಪರ ವಕೀಲ ದೂರು
ಬೆಂಗಳೂರು : ಈ ಪ್ರಕರಣದಲ್ಲಿ ಎಸ್ ಐಟಿ ಅಧಿಕಾರಿಗಳು ಹಾಗು ಪೊಲೀಸರು ಉದ್ದೇಶಪೂರ್ವಕವಾಗಿ ಯುವತಿಯ ವಿಡಿಯೋವನ್ನ ಮಾಧ್ಯಮಗಳಿಗೆ ಕೊಟ್ಟಿದ್ದಾರೆ ಎಂದು ಯುವತಿ ಪರ ವಕೀಲ ಆರೋಪಿಸಿದ್ದು, ಈ ಬಗ್ಗೆ ದೂರು ನೀಡಲು ಮುಂದಾಗಿದ್ದಾರೆ.
ಸಿಡಿ ಪ್ರಕರಣದಲ್ಲಿ ಎಸ್ ಐಟಿ ಆರೋಪಿ ಪರವಾಗಿ ತನಿಖೆ ಮಾಡುತ್ತಿದೆ.
ಸಂತ್ರಸ್ತೆಯ ವಿಡಿಯೋ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಆದೇಶ ಇದೆ.
ಆದ್ರೂ ನಿನ್ನೆ ಎಸ್ ಐಟಿ ಅಧಿಕಾರಿಗಳು ಯುವತಿ ನ್ಯಾಯಾಲಯದಿಂದ ಹೊರಬರುತ್ತಿರುವಾಗ ವಿಡಿಯೋ ಮಾಡಿದ್ದಾರೆ.
ಅದನ್ನ ಪೊಲೀಸರೇ ವಿಡಿಯೋ ಮಾಡಿ ಮಾಧ್ಯಮಕ್ಕೆ ನೀಡಿದ್ದಾರೆ. ಹೀಗಾಗಿ ಮ್ಯಾಜಿಸ್ಟ್ರೇಟ್ಗೆ ದೂರು ನೀಡುವುದಾಗಿ ಯುವತಿ ಪರ ವಕೀಲರು ತಿಳಿಸಿದ್ದಾರೆ.
ಇನ್ನು ಎಫ್ ಐಆರ್ ದಾಖಲಾಗಿದ್ದರೂ ಆರೋಪಿ ರಮೇಶ್ ಜಾರಕಿಹೊಳಿಯನ್ನ ಯಾಕಿನ್ನೂ ಅರೆಸ್ಟ್ ಮಾಡಿಲ್ಲ ಎಂದು ವಕೀಲರು ಪ್ರಶ್ನೆ ಮಾಡಿದ್ದು ಹಲವಾರು ಪ್ರಶ್ನೆಗಳ ಸಮೇತ ವಕೀಲರು ದೂರು ನೀಡಲು ತೀರ್ಮಾನಿಸಿದ್ದಾರೆ.
