ನರಿ ‘ಛೀ’ನಾ ಗಾಯಗೊಂಡಿರುವ ಪ್ರಾಣಿಯಂತೆ ವರ್ತಿಸುತ್ತಿದೆ’..!
ನವದೆಹಲಿ: ನರಿ ಬುದ್ದಿ ಇರುವ ಚೀನಾ ಆಗಾಗ ತನ್ನ ಕಪಟತನದಿಂದಾಗಿ ವಿಶ್ವದ ಎದುರು ಅವಮಾನಗೊಳ್ಳುವುದು ಹೊಸ ವಿಷಯವೇನಲ್ಲ.. ಚೀನಾ ಇಡೀ ವಿಶ್ವಕ್ಕೆ ಕೋವಿಡ್ ಮಹಾಮಾರಿಯನ್ನ ಅಂಟಿಸಿದೆ.. ಲಕ್ಷಾಂತರ ಜನರ ಜೀವ ತೆಗೆದಿರುವ ಕೋವಿಡ್ ವೈರಸ್ ಅನ್ನು ಚೀನಾ ಜೆನೆಟಿಕ್ ವಾರ್ ನ ರೂಪದಲ್ಲಿ ಇಡೀ ವಿಶ್ವಕ್ಕೆ ಹಬ್ಬಿಸಿದೆ. ಇದಕ್ಕಾಗಿ 2015ರಲ್ಲೇ ಪ್ಲಾನ್ ಮಾಡಿಕೊಂಡಿದ್ದಕ್ಕೆ ಇತ್ತೀಚೆಗೆ ದಾಖಲೆ ಸಿಕ್ಕಿದೆ.. ಈ ಮೂಲಕ ಇದ್ದ ಅಲ್ವ ಸ್ವಲ್ಪ ಮರ್ಯಾದೆಯನ್ನೂ ಕಳೆದುಕೊಂಡಿದೆ..
ಇತ್ತೀಚೆಗೆ ಅಮೆರಿಕ, ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತದ 4 ದೇಶಗಳ ಭದ್ರತಾ ಸಂವಾದಕ್ಕೆ ಸೇರದಂತೆ ಬಾಂಗ್ಲಾದೇಶಕ್ಕೆ ಚೀನಾ ಎಚ್ಚರಿಕೆ ನೀಡಿದೆ. ಆದ್ರೆ ಇದಕ್ಕೆ ಮಾಜಿ ರಾಯಭಾರಿ ಜಿತೇಂದ್ರ ತ್ರಿಪಾಠಿ ಚೀನಾಗೆ ಮುಟ್ಟಿನೋಡಿಕೊಳ್ಳುವಂತಹ ಉತ್ತರ ನೀಡಿದ್ದಾರೆ.
ಈ ಕ್ವಾಡ್ ಗೆ ಇನ್ನೂ ಹಲವಾರು ರಾಷ್ಟ್ರಗಳು ಸೇರಬಹುದೆಂಬ ಭಯ ಚೀನಾಗೆ ಶುರುವಾಗಿದೆ. ಹಾಗಾಗಿ ಬಾಂಗ್ಲಾದಂತಹ ಸಣ್ಣ ದೇಶಗಳಿಗೆ ಬೆದರಿಕೆಯೊಡ್ಡುತ್ತಿದೆ ಎಂದು ವ್ಯಂಗ್ಯವಾಡಿದ್ದಾರೆ. ಬಾಂಗ್ಲಾದಂತೆಯೇ ಇತರ ರಾಷ್ಟ್ರಗಳು ಕ್ವಾಡ್ ಗೆ ಸೇರಿದರೆ, ಚೀನಾ ಏಕಾಂಗಿಯಾಗುತ್ತದೆ ಎಂಬ ಭೀತಿ ಶುರುವಾಗಿದೆ ಎಂದಿದ್ದಾರೆ.
ಯುಎಸ್ ನೇತೃತ್ವದ ಕ್ವಾಡ್ ಮೈತ್ರಿಕೂಟಕ್ಕೆ ಬಾಂಗ್ಲಾ ಸೇರ್ಪಡೆಗೊಳ್ಳುವುದರಿಂದ ನಮ್ಮ ದ್ವಿಪಕ್ಷೀಯ ಸಂಬಂಧಗಳಿಗೆ ಹಾನಿಯಾಗುತ್ತದೆ ಎಂದು ಚೀನಾದ ರಾಯಭಾರಿ ಢಾಕಾ ಲಿ ಜಿಮಿಂಗ್ ಎಚ್ಚರಿಕೆ ನೀಡಿದ್ದರು.
ಈ ಹೇಳಿಕೆಗೆ ಬಾಂಗ್ಲಾದ ವಿದೇಶಾಂಗ ಸಚಿವ ಎ.ಕೆ.ಅಬ್ದುಲ್ ಮೊಮೆನ್ ಖಾರವಾಗಿಯೇ ಉತ್ತರಿಸಿದ್ದು, ರಾಯಭಾರಿಯಿಂದ ಇಂತಹ ಹೇಳಿಕೆ ಬಂದಿರುವುದು ಬಹಳ ದುರದೃಷ್ಟಕರ ಮತ್ತು ಆಕ್ರಮಣಕಾರಿಯಾಗಿದೆ. ನಮ್ಮದು ಸ್ವತಂತ್ರ ಮತ್ತು ಸಾರ್ವಭೌಮ ರಾಷ್ಟ್ರವಾಗಿದ್ದು, ವಿದೇಶಾಂಗ ನೀತಿಯನ್ನು ನಿರ್ಧರಿಸಬಹುದು ಎಂದು ತಿರುಗೇಟು ನೀಡಿದ್ದಾರೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ತ್ರಿಪಾಠಿ, ಚೀನಾ ಗಾಯಗೊಂಡಿರುವ ಪ್ರಾಣಿಯಂತೆ ವರ್ತಿಸುತ್ತಿದೆ. ಚೀನಾವನ್ನು ಹಿಮ್ಮೆಟ್ಟಿಸಲು ವಿಶ್ವದ ಪ್ರತಿಯೊಂದು ದೇಶವೂ ಭಾರತದ ನೆರವಿಗೆ ಬರುತ್ತಿರುವುದನ್ನು ನೋಡಿ ಅದು ಬೆಚ್ಚಿಬೆದ್ದಿದೆ ಎಂದಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ಭಾರತ ತನ್ನ ಸಹಾಯ ಕೇಳುತ್ತೆ ಎಂದು ಕೊಂಡಿದ್ದ ಚೀನಾ ಮತ್ತೆ ತಪ್ಪು ಲೆಕ್ಕಾಚಾರ ಹಾಕಿದೆ. ಭಾರತ ಸಂದಿಗ್ಧ ಪರಿಸ್ಥಿತಿಯನ್ನು ಉತ್ತಮವಾಗಿ ನಿಭಾಯಿಸುವುದರ ಜತೆಗೆ, ಲಸಿಕೆ ಉತ್ಪಾದನೆಯನ್ನೂ ಹೆಚ್ಚಿಸಿರೋದು ಚೀನಾಗೆ ಅರಗಿಸಿಕೊಳ್ಳಲಾಗುತ್ತಿಲ್ಲ ಎಂದು ತ್ರಿಪಾಠಿ ಅಭಿಪ್ರಾಯ ಪಟ್ಟಿದ್ದಾರೆ.
ಅಲ್ಲದೇ ಹಿಂದೂ ಮಹಾಸಾಗರವನ್ನು ಅಪ್ಪಳಿಸುವ ಚೀನಾದ ರಾಕೆಟ್, ಆ ರಾಷ್ಟ್ರದ ಫ್ಲಾಪ್ ಶೋಗಳಲ್ಲಿ ಒಂದು ಎಂದು ವ್ಯಂಗ್ಯವಾಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.