ಚಾಮರಾಜನಗರ : ದಿನಸಿ ಅಂಗಡಿ ಮುಂದೆ ಜನ ಜಾತ್ರೆ
ಚಾಮರಾಜನಗರ : ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತಾಂಡವವಾಡುತ್ತಿದೆ.
ಹೆಮ್ಮಾರಿಯ ಅಬ್ಬರಕ್ಕೆ ದಿನಂಪ್ರತಿ ಸಾಕಷ್ಟು ಮಂದಿ ಕೊನೆಯುಸಿರೆಳೆಯುತ್ತಿದ್ದಾರೆ.
ಆದ್ರೆ ಜನರು ಮಾತ್ರ ಬುದ್ಧಿಕಲಿತಂತೆ ಕಾಣುತ್ತಿಲ್ಲ.
ಯಾಕಂದ್ರೆ ಇಂದು ಬೆಳಗ್ಗೆ ಅಗತ್ಯ ವಸ್ತುಗಳ ಖರೀದಿಗೆ ಜನರು ಕೊರೊನಾ ನಿಯಮಗಳನ್ನು ಗಾಳಿಗೆ ತೂರಿ ಮುಗಿಬಿದ್ದಿದ್ದಾರೆ.
ನಗರದ ಎಲ್ಲಿ ಅಂದರಲ್ಲಿ ದಿನಸಿ ಅಂಗಡಿ ಮುಂದೆ ಜನ ಜಾತ್ರೆ ನಡೆದಿದೆ.
ತರಕಾರಿ ಸೊಪ್ಪು ಖರೀದಿಸಲು ಜನರು ಕೊರೊನಾವನ್ನೂ ಲೆಕ್ಕಿಸದೇ ಮುಗಿಬಿದ್ದಿದಾರೆ.
ಪರಿಣಾಮ ಅಂಗಡಿ ಬೀದಿಗಳಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದೆ.