ಕಣ್ಣೀರಿಟ್ಟ ಚಂದ್ರಬಾಬು ನಾಯ್ಡು – ಸಿ ಎಂ ಆದ ಬಳಿಕವೇ ವಿಧಾನಸಭೆಗೆ ಪ್ರವೇಶ ಎಂದು ಶಫಥ
ಕಳೆದ ಕೆಲವು ತಿಂಗಳಗಳಿಂದ ನಮ್ಮ ಕುಟುಂಬದ ಮೇಲೆ ತೀವ್ರ ವಾಗ್ದಾಳಿ ನಡೆಯುತ್ತಿದೆ. ವಿಧಾನಭೆಯಲ್ಲಿ ನನ್ನ ಹೆಂಡತಿ ಭುವನೇಶ್ವರಿ ವಿರುದ್ಧ ನಡೆಸಿದ ತೇಜೋವದೆ ಅಮಾನವೀಯ ಎಂದು ಆಂಧ್ರ ಪ್ರದೇಶದ TDP ರಾಜ್ಯಾಧ್ಯಕ್ಷ ಮತ್ತು ಪ್ರತಿಪಕ್ಷ ನಾಯಕ ಚಂದ್ರಬಾಬು ನಾಯ್ಡು ಕಣ್ಣೀರು ಹಾಕಿದ್ದಾರೆ.
ಮುಂದಿನ ಭಾರಿ ನಾನು ಸಿ ಎಂ ಆದ ಬಳಿಕವೇ ಅಸೆಂಬ್ಲಿಗೆ ಎಂಟ್ರಿ ಕೊಡಲಿದ್ದೇನೆ ಎಂದು ಶಫಧ ಮಾಡಿದ್ದಾರೆ.
ಇಂದು ಆಂದ್ರ ವಿಧಾನಸಭೆಯಲ್ಲಿ ಸುದ್ದಿಗೋಷ್ಠಿ ನಡೆಸುತ್ತ ಮಾತನಾಡಿದ ಚಂದ್ರಬಾಬು ನಾಯ್ಡು ತಮ್ಮ ಕುಟುಂಬ ಮತ್ತು ಪತ್ನಿಯ ಬಗ್ಗೆ ವಯಕ್ತಿಕ ವಿಚಾರಗಳನ್ನ ಪ್ರಸ್ತಾಪ ಮಾಡಿ ಅಸಭ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಕುಟುಂಬದ ವಿಚಾರಗಳನ್ನ ಅಸೆಂಬ್ಲಿಯಲ್ಲಿ ಚರ್ಚೆ ಮಾಡುತ್ತಿದ್ದಾರೆ ಇದು ವೈಯಕ್ತಿಕವಾಗಿ ದುಖಃ ತಂದಿದೆ ಎಂದು ಗಳಗಳನೆ ಕಣ್ಣೀರಾಕಿದರು.
ನಾನು 1978 ರಿಂದ ರಾಜಕೀಯದಲ್ಲಿದ್ದೇನೆ ಘಟಾನುಘಟಿಗಳ ಜೊತೆ ರಾಜಕೀಯ ಮಾಡಿದ್ದೇನೆ ಆದರೆ ಎಂದು ವಯಕ್ತಿಕವಾಗಿ ಟೀಕೆ ಮಾಡಿಲ್ಲ. ನನ್ನ ಹೆಂಡತಿ ಎಂದೂ ರಾಜಕೀಯ ಮಾಡಿದವಳಲ್ಲ ಅವಳಿಗೆ ಕುಟುಂಬ ಬಿಟ್ಟು ಬೇರೆ ಗೊತ್ತಿಲ್ಲ ಆದರೆ ಇಂದು ಅವರ ಬಗ್ಗೆಯೇ ಟೀಕೆ ಮಾಡುತ್ತಿದ್ದಾರೆ ಎಂದು ವೈಎಸ್ ಆರ್ ಪಕ್ಷದ ಎಂ ಎಲ್ ಎ ಮತ್ತು ಮಂತ್ರಿಗಳ ವಿರುದ್ದ ಹರಿಹಾಯ್ದರು.