ಗಂಡಸುತನ ಮನಸ್ಥಿತಿ ಇರುವುದೇ ತಪ್ಪು : ಚೇತನ್ ಅಹಿಂಸಾ
ತುಮಕೂರು : ಸಚಿವ ಅಶ್ವಥ್ ನಾರಾಯಣ್ ಮತ್ತು ಸಂಸದ ಡಿ.ಕೆ.ಸುರೇಶ್ ಇಬ್ಬರ ಮಧ್ಯೆ ಗಂಡಸ್ತನ ಗುದ್ದಾಟ ಜೋರಾಗಿ ನಡೆಯುತ್ತಿದೆ.
ರಾಮನಗರದಲ್ಲಿ ಶುರುವಾದ ಈ ಗುದ್ದಾಟ ಇದೀಗ ಎಲ್ಲೆಂದರಲ್ಲಿ ಮಾತಿನ ಮಲ್ಲಯುದ್ಧಕ್ಕೆ ಕಾರಣವಾಗಿದೆ.
ಈ ಮಧ್ಯೆ ರಾಜಕಾರಣಿಗಳ ಈ ಹೇಳಿಕೆಗಳಿಗೆ ನಟ, ಚೇತನ್ ಅಹಿಂಸಾ ಬೇಸರ ವ್ಯಕ್ತಪಡಿಸಿದ್ದು, ಗಂಡಸುತನ ಎಂಬಂತಹ ಮನಸ್ಥಿತಿ ಇರುವುದೇ ತಪ್ಪು ಎಂದಿದ್ದಾರೆ.
ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಚೇತನ್ ಅಹಿಂಸಾ, ಡಿ.ಕೆ.ಸುರೇಶ್ ಹಾಗೂ ಸಚಿವ ಆಶ್ವತ್ಥ್ ನಾರಾಯಣ ಅವರು ಗಂಡಸ್ತನದ ಬಗ್ಗೆ ವೇದಿಕೆಗಳ ಮೇಲೆ ಮಾತನಾಡಿದ್ದಾರೆ.
ಈ ರಾಜಕಾರಣಿಗಳಿಗೆ ಗಂಡಸರು ಮಾತ್ರ ಮತ ಹಾಕುವುದೇ? ಮಹಿಳೆಯರು ಮತ ಹಾಕುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
ಅಲ್ಲದೇ ಗಂಡಸುತನ ಎಂಬಂತಹ ಮನಸ್ಥಿತಿ ಇರುವುದೇ ತಪ್ಪು. ಹೆಣ್ಣು ಮತ್ತು ಗಂಡು ಸರಿಸಮಾನರು ಎಂಬ ಮನಸ್ಥಿತಿ ಬರಬೇಕು ಎಂದು ಪ್ರತಿಪಾದಿಸಿದ್ದಾರೆ.