ಮಲನಾಡು ಚಿಕ್ಕಮಗಳೂರಿನಲ್ಲಿ ಕೊರೋನಾ ಹಾವಳಿ ಮುಂದುವರೆದಿದೆ. ಇಂದು ಒಂದೇ ದಿನ ಜಿಲ್ಲೆಯಲ್ಲಿ 41 ಮಂದಿಗೆ ಸೋಂಕು ತಗುಲಿರುವುದು ದೃಢವಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1087 ಕ್ಕೆ ತಲುಪಿದ್ದು, ಜಿಲ್ಲೆಯಲ್ಲಿ ಸದ್ಯ 614 ಸಕ್ರಿಯ ಪ್ರಕರಣಗಳಿದೆ. ಇನ್ನೂ ಇಂದು 11 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಜಿಲ್ಲೆಯಲ್ಲಿ ಈವರೆಗೂ ಗುಣಮುಖರಾದವರ ಸಂಖ್ಯೆ 440ಕ್ಕೇರಿದೆ. ಇಂದು ಹೊಸದಾಗಿ ಸೋಂಕು ಪತ್ತೆಯಾದವರ ಪೈಕಿ ಅಜ್ಜಂಪುರ 1, ಕಡೂರು 4, ತರೀಕೆರೆ 5, ಚಿಕ್ಕಮಗಳೂರು 30 ಕೇಸ್ ಗಳಿವೆ.
ಬಿತ್ತನೆ ಬೀಜ ಗೋದಾಮಿಗೆ ಬೆಂಕಿ; ಕೋಟ್ಯಾಂತರ ಮೌಲ್ಯದ ಬೀಜ ಭಸ್ಮ
ಬೀದರ್: ಬಿತ್ತನೆ ಬೀಜದ ಗೋದಾಮಿಗೆ ಬೆಂಕಿ ಬಿದ್ದ ಪರಿಣಾಮ ಕೋಟ್ಯಾಂತರ ರೂ. ಮೌಲ್ಯದ ನಷ್ಟ ಸಂಭವಿಸಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ತಾಲೂಕಿನ ಬಗದಲ್ ಗ್ರಾಮದಲ್ಲಿಯೇ ಈ ಘಟನೆ...