Chikkamagaluru : ದಲಿತ ಯುವತಿ ಮದುವೆಯಾದವನಿಗೆ ಬಹಿಷ್ಕಾರ
ಚಿಕ್ಕಮಗಳೂರು : ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇನ್ನೂ ಬಹಿಷ್ಕಾರದ ಪಿಡುಗು ಇನ್ನೂ ನಿಂತಿಲ್ಲ.. ದಲಿತ ಯುವತಿಯನ್ನ ಮದುವೆಯಾಗಿದಕ್ಕೆ ಸ್ವಜಾತಿಯವರು ಬಹಿಷ್ಕಾರ ಹಾಕಿರುವ ಘಟನೆ ತುಮಕೂರಿನ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ..
ದಲಿತ ಯುವತಿಯನ್ನ ಪ್ರೀತಿಸಿ ಮದುವೆಯಾಗಿದ್ದ ಚಂದ್ರಶೇಖರ್ ಎಂಬುವವರ ಕುಟುಂಬಕ್ಕೆ ಸ್ವಜಾತಿ ಮುಖಂಡರು ಬಹಿಷ್ಕಾರ ಹಾಕಿದ್ದಾರೆ.
ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಬಹಿಷ್ಕಾರ ಹಾಕಲಾಗಿದೆ. ಜೊತೆಗೆ ಯಾರಾದ್ರೂ ಇವರ ಜೊತೆ ಮಾತಾನಾಡಿದರೆ ಐದು ಸಾವಿರ ದಂಡ ಕಟದ್ಟಬೇಕೆಂದು ಹೇಳಿದ್ದಾರೆ ಎನ್ನಲಾಗಿದೆ.
ಯಾರು ಮಾತಾನಾಡುವಂತಿಲ್ಲ, ಯಾವುದೇ ಕಾರ್ಯಕ್ರಮಕ್ಕೂ ಕರೆಯುವಂತಿಲ್ಲ ಎಂದು ಬಹಿಷ್ಕಾರ ಹಾಕಿರೋದಾಗಿ ತಿಳಿದುಬಂದಿದೆ.. ಇತ್ತ ಕಿರುಕುಳದಿಂದ ಬೇಸತ್ತು ಕ್ರೈಸ್ತ ಧರ್ಮಕ್ಕೆ ಮಂತಾತರಗೊಳ್ಳಲು ಕುಟುಂಬ ಚಿಂತಿಸಿತ್ತು ಎಂದೂ ಸಹ ಹೇಳಲಾಗಿದೆ..
ಹಿಂದು ಧರ್ಮದ ಮುಖಂಡರು ಕುಟುಂಬದವರ ಮನವೊಲಿಸಿರುವುದಾಗಿ ತಿಳಿದುಬಂದಿದೆ.. ಇದೀಗ ಕುಟುಂಬ ನ್ಯಾಯಕ್ಕಾಗಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದೆ..
BJP | ಕಾಂಗ್ರೆಸ್ ಹೈಕಮಾಂಡ್ಗೆ ಮೂರ್ಛೆ ತರಿಸುವುದಕ್ಕೆ ಸಿಧು, ಸಿದ್ದು ಸಾಕು