ADVERTISEMENT
Monday, February 23, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ ಕೋಶಿಶ್‌ ಮೆ ಲಗ್ ಜಾತೆ ಹೇ..

admin by admin
February 23, 2026
in Newsbeat, Sports, ಕ್ರೀಡೆ
cmcup badminton 2026- team 9dreamz

cmcup badminton 2026- team 9dreamz

Share on FacebookShare on TwitterShare on WhatsappShare on Telegram
cmcup badminton 2026- team 9dreamz
cmcup badminton 2026- team 9dreamz

‘ಅಗರ್‌ ಕೋಯಿ ಚೀಸ್‌ ಕೋ ದಿಲ್‌ ಸೆ ಚಾಹೋ ಥೋ.. ಪೂರಿ ಕಾಯನಾತ್‌ ಉಸೆ ತುಮ್‌ ಸೆ ಮಿಲಾನೆ ಕಿ ಕೋಶಿಶ್‌ ಮೆ ಲಗ್ ಜಾತೆ ಹೇ….’ ಇದು ಹಿಂದಿಯ ಓಂ ಶಾಂತಿ ಓಂ ಚಿತ್ರದ ಡೈಲಾಗ್‌. ಈ ಡೈಲಾಗ್‌ ಅಕ್ಷರಶಃ ಸಿಎಂ ಕಪ್‌ 2026ರ ಯಶಸ್ಸಿಗೆ ಅನ್ವರ್ಥವಾದದ್ದಾಗಿದೆ.
ಸರಿಸುಮಾರು ಐದಾರು ತಿಂಗಳುಗಳಿಂದ ಸಿಎಂ ಕಪ್‌ಗಾಗಿ ಪಟ್ಟ ಪಡಿಪಾಡಲು ಅಷ್ಟಿಷ್ಟಲ್ಲ. ಅದೇ ಹೇಳ್ತಾರಲ್ಲ, ಯಾವುದೇ ಕೆಲಸವನ್ನು ಶ್ರದ್ಧೆಯಿಂದ, ಪರಿಶ್ರಮದಿಂದ ಮಾಡಿದರೆ ಅದರಲ್ಲಿ ಯಶಸ್ಸು ಸಿಕ್ಕೇ ಸಿಗುತ್ತದೆ ಎಂದು. ಸಿಎಂ ಕಪ್‌ ಮಾಡಬೇಕೆಂದು ನಿರ್ಧರಿಸಿ ಅದರ ಲೋಗೋ ಸಿದ್ಧಗೊಳಿಸಿ ಸಂಪರ್ಕಿಸಿದ್ದೇ ಮುಖ್ಯಮಂತ್ರಿ ಅವರ ಮಾಧ್ಯಮ ಸಲಹೆಗಾರ ಕೆ.ವಿ. ಪ್ರಭಾಕರ್‌ ಅವರನ್ನು. ಸಿಎಂ ಕಪ್‌ ಆಯೋಜಿಸಬೇಕೆಂಬ ಕಲ್ಪನೆ ಹುಟ್ಟಿಕೊಂಡಾಗಿನಿಂದ ಪಂದ್ಯಾವಳಿ ಮುಗಿಯುವವರೆಗೆ ದೊಡ್ಡ ಬೆಂಬಲ ಹಾಗೂ ಬೆನ್ನೆಲುಬಾಗಿ ನಿಂತಿದ್ದೇ ಕೆ.ವಿ. ಪ್ರಭಾಕರ್‌ ಅವರು. ಅವರ ಬೆಂಬಲವಿಲ್ಲದೆ ಸಿಎಂ ಕಪ್‌ ಇಷ್ಟು ದೊಡ್ಡ ಮಟ್ಟಿಗೆ ಯಶಸ್ವಿಯಾಗುವುದು ಕಷ್ಟ ಸಾಧ್ಯ.
ಇನ್ನು, ಜನಪ್ರತಿನಿಧಿಗಳು, ಐಎಎಸ್‌/ಐಪಿಎಸ್‌, ಪೊಲೀಸ್‌ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳು, ವೈದ್ಯರು, ಚಲನಚಿತ್ರ ರಂಗದವರು ಮತ್ತು ಮಾಧ್ಯಮ ಕ್ಷೇತ್ರದವರನ್ನು ಒಂದುಗೂಡಿಸಿ ಸಿಎಂ ಕಪ್‌ ಶಟಲ್‌ ಬ್ಯಾಡ್ಮಿಂಟನ್‌ ಆಯೋಜಿಸಬೇಕೆಂಬ ಪರಿಕಲ್ಪನೆಯೊಂದಿಗೆ ಯೋಜನೆ ಆರಂಭಿಸಲಾಗಿತ್ತು. ಆದರೆ, ಕಾರ್ಯಾಂಗ, ಶಾಸಕಾಂಗದ ಪ್ರಮುಖರು ಸ್ಪರ್ಧಿಗಳಾಗಿ ಬರಲು ಒಪ್ಪುತ್ತಾರೆಯೇ, ಹಾಗೆ ಒಪ್ಪಿಸಲು ಯಾರನ್ನು ಭೇಟಿ ಮಾಡಬೇಕು, ಯಾರೆಲ್ಲ ಆಡುತ್ತಾರೆ ಎಂಬ ಮಾಹಿತಿಯೇ ನಮಗಿರಲಿಲ್ಲ. ಅಲ್ಲದೆ ದಿ ಬೆಸ್ಟ್‌ ಆಟಗಾರರನ್ನು ಕಣಕ್ಕಿಳಿಸಬೇಕೆನ್ನುವ ಆಲೋಚನೆ ನಮ್ಮದಾಗಿತ್ತು.
ಅದಕ್ಕೆ ಪುಷ್ಟಿ ನೀಡುವಂತೆ ಸಚಿವರಾದ ಡಾ. ಎಂ.ಸಿ.ಸುಧಾಕರ್‌, ವಿಧಾನಪರಿಷತ್‌ ಮಾಜಿ ಸದಸ್ಯ ನಾರಾಯಣಸ್ವಾಮಿ, ಕಾರ್ಯಾಂಗದ ಬಹುದೊಡ್ಡ ಹೆಸರಾದ ಹಿರಿಯ ಐಎಎಸ್‌ ಅಧಿಕಾರಿಗಳಾದ ಸೆಲ್ವಕುಮಾರ್‌, ಜಗದೀಶ್‌, ಐಪಿಎಸ್‌ ಅಧಿಕಾರಿಗಳಾದ ಅಲೋಕ್‌ ಕುಮಾರ್‌, ರಮೇಶ್‌ ಬಾನೋಥ್‌, ಮಿಥುನ್‌, ಕೆಎಎಸ್‌ ಅಧಿಕಾರಿಗಳಾದ ಯೋಗೀಶ್‌, ಸತೀಶ್‌, ಕೆಎಸ್‌ಪಿಎಸ್‌ ಅಧಿಕಾರಿಗಳಾದ ಪರಮೇಶ್ವರ್‌ ಹೀಗೆ ಒಬ್ಬೊಬ್ಬರೇ ಘಟಾನುಘಟಿಗಳು ನಮ್ಮ ಮನವಿಗೆ ಆಟಗಾರರಾಗಿ ಶಟಲ್‌ ಕೋರ್ಟ್‌ನಲ್ಲಿ ಸಾಮರ್ಥ್ಯ ಪ್ರದರ್ಶಿಸಲು ಒಪ್ಪಿಕೊಂಡರು. ಅವರೊಂದಿಗೆ ಚಲನಚಿತ್ರ ರಂಗ ರವಿಚೇತನ್‌, ಮನೋರಂಜನ್‌, ದಿವ್ಯಾ ಉರುಡುಗ, ಕವಿತಾ ಲಂಕೇಶ್‌ ಹೀಗೆ ಹಲವರು ಜೊತೆಯಾದರು. ನಮ್ಮ ಮನವಿಯನ್ನು ಮನ್ನಿಸಿ ಸ್ಪರ್ಧಿಗಳಾಗಿ ಕಣಕ್ಕಿಳಿದ ಗಣ್ಯರೆಲ್ಲರಿಗೂ ಬಹುದೊಡ್ಡ ಧನ್ಯವಾದಗಳು.
ಇನ್ನು, ಸಿಎಂ ಕಪ್‌ ಟೂರ್ನಿ ಯಶಸ್ಸಿಗೆ ಕಾರಣರಾದ 8 ತಂಡಗಳ ಮಾಲೀಕರು, ರಾಜ್‌ ಇವೆಂಟ್ಸ್‌, ರಿಲಯನ್ಸ್‌, ಸಕ್ರಾ ವರ್ಲ್ಡ್‌ ಆಸ್ಪತ್ರೆ, ಕವಳ ಸಿನೆಮಾ ನಿರ್ಮಾಪಕರು, ಧಾರಾ ವೆಂಚರ್ಸ್‌, ಬೆಳಕು ಮೀಡಿಯಾ, ಎಸ್‌ಪಿ ಅಡ್ವಟೈಸಿಂಗ್‌ ಏಜೆನ್ಸಿ, ಕ್ಷೇಮವನ ಸೇರಿದಂತೆ ಎಲ್ಲ ಸ್ಪಾನ್ಸರ್ಸ್‌ಗಳು, ಸಿಎಂ ಕಪ್‌ನ ಪ್ರತಿ ಹಂತದ ತಯಾರಿಯನ್ನು ಜನರಿಗೆ ತಲುಪಿಸುವ ಕೆಲಸ ಮಾಡಿದ ಪ್ರತಿಧ್ವನಿ, ಬಾಸ್‌ ಟಿವಿ, ಸಾಕ್ಷಾ ಮೀಡಿಯಾ, ನ್ಯೂಸೋ ನ್ಯೂಸು ಡಿಜಿಟಲ್‌ ಪ್ಲಾಟ್‌ಫಾರ್ಮ್‌ಗಳು ಹಾಗೂ ಸಿಎಂ ಕಪ್‌ನ ಪ್ರತಿ ಹಂತದ ಸುದ್ದಿಯನ್ನು ಪ್ರಸಾರ ಮತ್ತು ಪ್ರಕಟಿಸಿದ ರಾಜ್ಯದ ಎಲ್ಲ ದೃಶ್ಯ ಮತ್ತು ಮುದ್ರಣ ಮಾಧ್ಯಮಗಳಿಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು.
ಲಾಸ್ಟ್‌ ಸಿಪ್‌:
ಸಿಎಂ ಕಪ್‌ ಯಶಸ್ಸಿಗೆ ನಮಗೆ ಬೆಂಬಲವಾಗಿ ನಿಂತವರ ಜತೆಗೆ ಸಿಎಂ ಕಪ್‌ ಆಗದಂತೆ ತಡೆಯಲು ವ್ಯರ್ಥ ಹೋರಾಟ ನಡೆಸಿದ ಹಿತಶತ್ರುಗಳ ಪಾತ್ರವೂ ಬಹಳಷ್ಟಿದೆ. ನಮ್ಮ ಅತಿಥಿಗಳು ಕಾರ್ಯಕ್ರಮಗಳಿಗೆ ಬಾರದಂತೆ ತಡೆದವರಿದ್ದಾರೆ. ನಮಗೆ ಬೆಂಬಲವಾಗಿ ನಿಂತವರ ಬಳಿ ಬೆಂಬಲ ನೀಡದಂತೆ ಚಾಡಿ ಹೇಳಿದವರೂ ಇದ್ದಾರೆ. ಅಪಪ್ರಚಾರ ಮಾಡಿದವರೂ ಬಹಳಷ್ಟಿದ್ದಾರೆ. ಇಷ್ಟೆಲ್ಲದರ ನಡುವೆ ನಮ್ಮ ಮೇಲೆ ನಂಬಿಕೆ ಇಟ್ಟು ಬೆಂಬಲ ನೀಡಿದವರಿಗೆ ಕೃತಜ್ಞನೆಗಳು.
ಆಗ ತಾನೆ ಜನಿಸಿದ ಮಗು ಮಡಿಲಲ್ಲಿ ಅಳುತ್ತಿರುವಾಗ ತಾಯಿಯ ಮುಖದಲ್ಲಿನ ನಗು, ಪ್ರಸವ ವೇದನೆ ಮರೆಸಿ ಎದೆಯೊಳಗೆ ಪ್ರೀತಿ ಹುಟ್ಟುವಂತಹ ಭಾವನೆಯೇ ಇದೀಗ ಸಿಎಂ ಕಪ್‌ ಆಯೋಜಕ ಮಂಡಳಿಯದ್ದು. ಸಿಎಂ ಕಪ್‌ 2026ರ ಯಶಸ್ಸು, ಗಣ್ಯರ ಮಾತುಗಳು ನಾವು ಪಟ್ಟ ಶ್ರಮವನ್ನೆಲ್ಲ ಮರೆಸಿದೆ, ಮುಖದಲ್ಲಿ ಸಾರ್ಥಕ ಭಾವನೆ ಮೂಡಿಸಿದೆ. ಎಲ್ಲರ ಬೆಂಬಲ ಹೀಗೆಯೇ ಇರಲಿ ಎಂದು ಆಶಿಸುತ್ತಾ, ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಮತ್ತೊಮ್ಮೆ ಹೃದಯ ತುಂಬಿ ಕೃತಜ್ಞತೆಯನ್ನು ಅರ್ಪಿಸುತ್ತೇವೆ.

ಆಯೋಜಕ ಮಂಡಳಿ
ಸಿಎಂ ಕಪ್‌ 2026

Related posts

Just chanting this one mantra is enough for your children to improve in their studies and for the wealth in your home to change...!

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು  ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು…!

February 23, 2026
The only standing Bala Ganapati in the world, special information about the Idagunji area that no one has seen

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ

February 23, 2026
Tags: #9dreamz#cmcup2026#cmcupbadminton2026#saakshatvbengalurukarnataka
ShareTweetSendShare
Join us on:

Related Posts

Just chanting this one mantra is enough for your children to improve in their studies and for the wealth in your home to change...!

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು  ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು…!

by admin
February 23, 2026
0

ಈ ಒಂದು ಮಂತ್ರವನ್ನು ಪಠಿಸಿದರೆ ಸಾಕು  ಮಕ್ಕಳು ತಮ್ಮ ವಿದ್ಯಾಭ್ಯಾಸದಲ್ಲಿ ಸುಧಾರಿಸಲು ಮತ್ತು ನಿಮ್ಮ ಮನೆಯಲ್ಲಿ ಸಂಪತ್ತು ಬದಲಾಗಲು...! ನಮಸ್ಕಾರ ಬಂಧುಗಳೇ ನಾವು ನಿಮ್ಮ ಪಂಡಿತ್ ಜ್ಞಾನೇಶ್ವರ್...

The only standing Bala Ganapati in the world, special information about the Idagunji area that no one has seen

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ

by admin
February 23, 2026
0

ವಿಶ್ವದ ಏಕೈಕ ನಿಂತಿರುವ ಬಾಲಗಣಪತಿ, ಯಾರು ಕಂಡರಿಯದ ಇಡಗುಂಜಿ ಕ್ಷೇತ್ರದ ವಿಶೇಷ ಮಾಹಿತಿ ಇಡಗುಂಜಿ ವಿನಾಯಕ ದೇವಸ್ಥಾನವು ಕರ್ನಾಟಕದ ಬಹು ಪ್ರಸಿದ್ದ ಹಿಂದೂ ಧಾರ್ಮಿಕ ಕೇಂದ್ರವಾಗಿದ್ದೂ ಸುಮಾರು...

ATS Attackers team wins inaugural CM Cup-2026

ಎಟಿಎಸ್‌ ಅಟ್ಯಾಕರ್ಸ್‌ ತಂಡ ಚೊಚ್ಚಲ ಆವೃತ್ತಿಯ ಸಿಎಂ ಕಪ್‌ ಚಾಂಪಿಯನ್‌

by admin
February 23, 2026
0

ಎಟಿಎಸ್‌ ಅಟ್ಯಾಕರ್ಸ್‌ ತಂಡ ಚೊಚ್ಚಲ ಆವೃತ್ತಿಯ ಸಿಎಂ ಕಪ್‌ ಚಾಂಪಿಯನ್‌ ಬೆಂಗಳೂರು: ಸರ್ವಾಂಗೀಣ ಆಟ ಪ್ರದರ್ಶಿಸಿದ ಎಟಿಎಸ್‌ ಅಟ್ಯಾಕರ್ಸ್‌ ತಂಡ 2026ರ ಚೊಚ್ಚಲ ಸಿಎಂ ಕಪ್‌ ಬ್ಯಾಡ್ಮಿಂಟನ್‌...

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

ಶಿರಹಟ್ಟಿ BJP ಶಾಸಕನ ರಾಜಕೀಯ ಜೀವನ ಮುಗಿಸಲು ಮಠದೊಳಗೇ ನಡೀತಾ ಸಂಚು? ಆಡಿಯೋದಲ್ಲಿ ಬಯಲಾಯ್ತು ಸ್ಫೋಟಕ ಸತ್ಯ

by Shwetha
February 23, 2026
0

ಗದಗ: ಶಿರಹಟ್ಟಿ ಶಾಸಕ ಡಾ. ಚಂದ್ರು ಲಮಾಣಿ ಅವರ ಲೋಕಾಯುಕ್ತ ಟ್ರ್ಯಾಪ್ ಪ್ರಕರಣಕ್ಕೆ ಇದೀಗ ಮಹತ್ವದ ಹಾಗೂ ಸ್ಫೋಟಕ ತಿರುವು ಸಿಕ್ಕಿದೆ. ಶಾಸಕರನ್ನು ಉದ್ದೇಶಪೂರ್ವಕವಾಗಿ ಕಾನೂನಿನ ಕುಣಿಕೆಯಲ್ಲಿ...

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

RTE ಉಚಿತ ಸೀಟಿಗೆ ಮಾ.16 ರಿಂದ ಅರ್ಜಿ ಸಲ್ಲಿಕೆ ಆರಂಭ: ಪೋಷಕರು ಈ ದಾಖಲೆಗಳನ್ನು ಕೂಡಲೇ ರೆಡಿ ಮಾಡಿಕೊಳ್ಳಿ

by Shwetha
February 23, 2026
0

ಬೆಂಗಳೂರು: ರಾಜ್ಯದ ಪೋಷಕರಿಗೆ ಮಹತ್ವದ ಸುದ್ದಿಯೊಂದು ಇಲ್ಲಿದೆ. ತಮ್ಮ ಮಕ್ಕಳನ್ನು ಪ್ರತಿಷ್ಠಿತ ಖಾಸಗಿ ಶಾಲೆಗಳಲ್ಲಿ ಉಚಿತವಾಗಿ ಓದಿಸಬೇಕು ಎಂಬ ಕನಸು ಹೊತ್ತಿರುವ ಪೋಷಕರಿಗಾಗಿ ಕರ್ನಾಟಕ ಶಾಲಾ ಶಿಕ್ಷಣ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram