ADVERTISEMENT
Friday, August 21, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Business

ಟೆಕ್ ಹಿನ್ನೆಲೆ ಇಲ್ಲದವರಿಗೂ ಕಾಗ್ನಿಜೆಂಟ್‌ನಲ್ಲಿ ಉದ್ಯೋಗ, ಐಐಎಂ ಬೆಂಗಳೂರು ಸೇರಿ 58 ಸಂಸ್ಥೆಗಳ ಪದವೀಧರರ ನೇಮಕ

admin by admin
August 21, 2026
in Business, Newsbeat, ತಂತ್ರಜ್ಞಾನ
cognizant-launches-talent-accelerator-program-hires-489-b-school-graduates-kannada

cognizant-launches-talent-accelerator-program-hires-489-b-school-graduates-kannada

Share on FacebookShare on TwitterShare on WhatsappShare on Telegram

ಬೆಂಗಳೂರು: ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ) ಮತ್ತು ತಂತ್ರಜ್ಞಾನ ಸೇವೆ ಒದಗಿಸುವ ಜಾಗತಿಕ ಮಟ್ಟದ ಮುಂಚೂಣಿ ಸಂಸ್ಥೆ ಕಾಗ್ನಿಜೆಂಟ್ ಭಾರತದಲ್ಲಿ ತನ್ನ ಹೊಸ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವನ್ನು ಆರಂಭಿಸಿದೆ. ಈ ಕಾರ್ಯಕ್ರಮಕ್ಕಾಗಿ ದೇಶದ 37 ನಗರಗಳ 58 ಪ್ರತಿಷ್ಠಿತ ಬಿಸಿನೆಸ್ ಸ್ಕೂಲ್‌ಗಳಿಂದ ಹೊಸದಾಗಿ 489 ಪದವೀಧರರನ್ನು ನೇಮಕ ಮಾಡಿಕೊಂಡಿದೆ.

ಐಐಎಂ ಬೆಂಗಳೂರು, ಐಐಎಂ ಲಕ್ನೋ, ಐಐಎಂ ಕೋಳಿಕ್ಕೋಡ್‌, ಎಕ್ಸ್‌ಎಲ್‌ಆರ್‌ಐ, ಐಎಸ್‌ಬಿ ಹೈದರಾಬಾದ್‌ನಂತಹ ದೇಶದ ಅತ್ಯುನ್ನತ ಮ್ಯಾನೇಜ್ಮೆಂಟ್ ಸಂಸ್ಥೆಗಳಿಂದ ಈ ಪ್ರತಿಭೆಗಳನ್ನು ಆಯ್ಕೆ ಮಾಡಲಾಗಿದೆ. ವಿಶೇಷವೆಂದರೆ, ನೇಮಕಗೊಂಡವರಲ್ಲಿ ಶೇ. 42ಕ್ಕೂ ಹೆಚ್ಚು ಮಂದಿ ಮಹಿಳೆಯರಾಗಿದ್ದಾರೆ.

Related posts

jeep-compass-85th-anniversary-edition-launched-in-india-price-features-kannada

ಜೀಪ್ 85ನೇ ವಾರ್ಷಿಕೋತ್ಸವ: ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ ಎಸ್‌ಯುವಿ!

August 21, 2026
swiggy-launches-guru-24x7-ai-business-partner-for-restaurant-owners-kannada

ಹೋಟೆಲ್ ಮಾಲೀಕರಿಗೆ ಸ್ವಿಗ್ಗಿಯಿಂದ ಹೊಸ ಗಿಫ್ಟ್, ಬಂತು 24×7 ಕೆಲಸ ಮಾಡುವ ಎಐ ಬಿಸಿನೆಸ್ ಪಾರ್ಟ್ನರ್! ಏನಿದು ‘ಗುರು’?

August 21, 2026

ಏನಿದು ‘ಟ್ಯಾಲೆಂಟ್ ಆಕ್ಸಿಲರೇಟರ್’ ಕಾರ್ಯಕ್ರಮ?

ಇದು ಹೊಸದಾಗಿ ನೇಮಕಗೊಂಡ ಉದ್ಯೋಗಿಗಳಿಗೆ ನೀಡಲಾಗುವ 2 ವಾರಗಳ ತರಬೇತಿ ಕಾರ್ಯಕ್ರಮವಾಗಿದೆ. ಬೆಂಗಳೂರು, ಚೆನ್ನೈ, ಹೈದರಾಬಾದ್ ಮತ್ತು ಪುಣೆಯಲ್ಲಿರುವ ಕಾಗ್ನಿಜೆಂಟ್ ಕ್ಯಾಂಪಸ್‌ಗಳಲ್ಲಿ ಏಕಕಾಲದಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ.

ಈ ಅವಧಿಯಲ್ಲಿ ಹೊಸ ಉದ್ಯೋಗಿಗಳಿಗೆ ಕಂಪನಿಯ ಮೌಲ್ಯಗಳು, ಸೇಲ್ಸ್ ಮತ್ತು ಮಾರ್ಕೆಟಿಂಗ್ ತರಬೇತಿ ನೀಡಲಾಗುತ್ತದೆ. ಜೊತೆಗೆ, ಕಾಗ್ನಿಜೆಂಟ್‌ನ ಹಿರಿಯ ನಾಯಕತ್ವ ತಂಡದೊಂದಿಗೆ ನೇರವಾಗಿ ಸಂವಾದ ನಡೆಸುವ ಅವಕಾಶವೂ ಸಿಗಲಿದೆ.

ಟೆಕ್‌ ಹಿನ್ನೆಲೆ ಇಲ್ಲದವರಿಗೂ ಮಣೆ!

ಇಂದಿನ ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಕೇವಲ ಇಂಜಿನಿಯರ್‌ಗಳು ಮಾತ್ರವಲ್ಲ, ವಿಭಿನ್ನ ಆಲೋಚನೆ ಮತ್ತು ಕೌಶಲ್ಯವುಳ್ಳವರ ಅಗತ್ಯವಿದೆ ಎಂಬುದನ್ನು ಕಾಗ್ನಿಜೆಂಟ್ ಮನಗಂಡಿದೆ. ಈ ಹಿನ್ನೆಲೆಯಲ್ಲಿ ಹೊಸದಾಗಿ ನೇಮಕಗೊಂಡವರ ಪೈಕಿ ಶೇ. 37ಕ್ಕೂ ಹೆಚ್ಚು ಮಂದಿ ವಿಜ್ಞಾನ, ತಂತ್ರಜ್ಞಾನ, ಇಂಜಿನಿಯರಿಂಗ್, ಗಣಿತ (ಸ್ಟೆಮ್‌) ಹಿನ್ನೆಲೆ ಇಲ್ಲದವರೂ ಇದ್ದಾರೆ.

ಬದಲಾಗಿ ಸಮಾಜಶಾಸ್ತ್ರ, ಮನೋವಿಜ್ಞಾನ, ಇಂಡಸ್ಟ್ರಿಯಲ್ ಡಿಸೈನ್ ಮತ್ತು ಕಚೇರಿ ನಿರ್ವಹಣೆಯಂತಹ ನಾನ್ ಟೆಕ್ ವಿಭಾಗಗಳಲ್ಲಿ ವ್ಯಾಸಂಗ ಮಾಡಿದವರನ್ನು ಕಂಪನಿ ನೇಮಕ ಮಾಡಿಕೊಂಡಿದೆ.

ವೈವಿಧ್ಯತೆಯೇ ನಮ್ಮ ಬಲ

ಈ ಬಗ್ಗೆ ಮಾತನಾಡಿದ ಕಾಗ್ನಿಜೆಂಟ್ ಇಂಡಿಯಾದ ಸಿಎಂಡಿ ಮತ್ತು ಗ್ಲೋಬಲ್ ಆಪರೇಶನ್ಸ್ ಅಧ್ಯಕ್ಷ ರಾಜೇಶ್ ವಾರಿಯರ್, “ಗ್ರಾಹಕರಿಗೆ ಮತ್ತು ಸಂಸ್ಥೆಗೆ ಉತ್ತಮ ಮೌಲ್ಯ ತಂದುಕೊಡಲು ವೈವಿಧ್ಯಮಯ ಚಿಂತನೆಗಳ ಅಗತ್ಯವಿದೆ. ನಮ್ಮ ಟ್ಯಾಲೆಂಟ್ ಆಕ್ಸಿಲರೇಟರ್ ಕಾರ್ಯಕ್ರಮವು ದೇಶದ ವಿವಿಧ ಭಾಗಗಳ ಪ್ರತಿಭೆಗಳನ್ನು ಒಂದೆಡೆ ಸೇರಿಸುತ್ತದೆ. ಎಐ ತಂತ್ರಜ್ಞಾನವನ್ನು ಬಳಸಿ ನೈಜ ಜಗತ್ತಿನ ವಾಣಿಜ್ಯ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಲು ಹೊಸ ಉದ್ಯೋಗಿಗಳನ್ನು ಇದು ಸಜ್ಜುಗೊಳಿಸಲಿದೆ,” ಎಂದರು.

ಎಐ ಯುಗಕ್ಕೆ ಕಾಗ್ನಿಜೆಂಟ್ ಸಿದ್ಧತೆ

ಎಐ ತಂತ್ರಜ್ಞಾನವನ್ನು ಸಮರ್ಥವಾಗಿ ಬಳಸಿಕೊಳ್ಳಲು ಕಾಗ್ನಿಜೆಂಟ್ ಬೃಹತ್ ಯೋಜನೆ ರೂಪಿಸಿದ್ದು, ಮುಂದಿನ ದಿನಗಳಲ್ಲಿ 5,000 ಫ್ರಾಂಟಿಯರ್ ಸರ್ಟಿಫೈಡ್ ಇಂಜಿನಿಯರ್‌ಗಳು ಹಾಗೂ 10,000 ಬಿಸಿನೆಸ್ ಆಪರೇಟರ್‌ಗಳನ್ನು ಸೃಷ್ಟಿಸುವ ಗುರಿ ಹೊಂದಿದೆ. ಇದು ಉದ್ಯಮಗಳಿಗೆ ಎಐ ತಂತ್ರಜ್ಞಾನವನ್ನು ಅಳೆಯಬಹುದಾದ ಆರ್ಥಿಕ ಲಾಭವಾಗಿ ಪರಿವರ್ತಿಸಲು ನೆರವಾಗಲಿದೆ.

Tags: #Cognizant #TalentAccelerator #AIJobs #NonSTEMHiring #BusinessNewsKannada #TechNewsKannada #KannadaNews #CareerUpdates #CognizantIndia #ITIndustry2026
ShareTweetSendShare
Join us on:

Related Posts

jeep-compass-85th-anniversary-edition-launched-in-india-price-features-kannada

ಜೀಪ್ 85ನೇ ವಾರ್ಷಿಕೋತ್ಸವ: ಭಾರತದಲ್ಲಿ ಕೇವಲ 85 ಗ್ರಾಹಕರಿಗೆ ಸಿಗಲಿದೆ ‘ಕಾಂಪಾಸ್’ನ ಈ ಸ್ಪೆಷಲ್ ಎಡಿಷನ್ ಎಸ್‌ಯುವಿ!

by admin
August 21, 2026
0

ಬೆಂಗಳೂರು: ಜಗತ್ತಿನ ಖ್ಯಾತ ಎಸ್‌ಯುವಿ ತಯಾರಕ ಕಂಪನಿ ಜೀಪ್ ತನ್ನ 85ನೇ ವಾರ್ಷಿಕೋತ್ಸವದ ಸಂಭ್ರಮದಲ್ಲಿದೆ. ಈ ಸಂಭ್ರಮವನ್ನು ಇಮ್ಮಡಿಗೊಳಿಸಲು ಕಂಪನಿಯು ಭಾರತದಲ್ಲಿ ತನ್ನ ಅತ್ಯಂತ ಜನಪ್ರಿಯ ಜೀಪ್...

swiggy-launches-guru-24x7-ai-business-partner-for-restaurant-owners-kannada

ಹೋಟೆಲ್ ಮಾಲೀಕರಿಗೆ ಸ್ವಿಗ್ಗಿಯಿಂದ ಹೊಸ ಗಿಫ್ಟ್, ಬಂತು 24×7 ಕೆಲಸ ಮಾಡುವ ಎಐ ಬಿಸಿನೆಸ್ ಪಾರ್ಟ್ನರ್! ಏನಿದು ‘ಗುರು’?

by admin
August 21, 2026
0

ಭಾರತದ ಪ್ರಮುಖ ಆನ್‌ಲೈನ್ ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಸ್ವಿಗ್ಗಿ ತನ್ನ ಹೋಟೆಲ್ ಹಾಗೂ ರೆಸ್ಟೋರೆಂಟ್ ಪಾಲುದಾರರಿಗಾಗಿ ಹೊಚ್ಚಹೊಸ ತಂತ್ರಜ್ಞಾನವೊಂದನ್ನು ಪರಿಚಯಿಸಿದೆ. ಹೋಟೆಲ್ ಉದ್ಯಮವನ್ನು ಮತ್ತಷ್ಟು ಸುಲಭ ಮತ್ತು...

swiggy-leadership-changes-promotions-instamart-food-marketplace-kannada

ಹೊಸ ಹುದ್ದೆ, ಹೊಸ ಜವಾಬ್ದಾರಿ: ಸ್ವಿಗ್ಗಿ ನಾಯಕತ್ವ ತಂಡದಲ್ಲಿ ಮಹತ್ವದ ಬದಲಾವಣೆ!

by admin
August 21, 2026
0

ಹೊಸ ಹುದ್ದೆ, ಹೊಸ ಜವಾಬ್ದಾರಿ: ಸ್ವಿಗ್ಗಿ ನಾಯಕತ್ವ ತಂಡದಲ್ಲಿ ಮಹತ್ವದ ಬದಲಾವಣೆ! ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ಹಾಗೂ ಕ್ವಿಕ್ ಕಾಮರ್ಸ್ ವಲಯದಲ್ಲಿ ಮುಂಚೂಣಿಯಲ್ಲಿರುವ ಸ್ವಿಗ್ಗಿ ತನ್ನ...

bgmi-lite-announced-pre-registration-launch-date-low-end-phones-kannada

ಗೇಮಿಂಗ್‌ ಪ್ರಿಯರಿಗೆ ಗುಡ್ ನ್ಯೂಸ್‌ : ಕಡಿಮೆ ಸಾಮರ್ಥ್ಯದ ಫೋನ್‌ಗಳಿಗಾಗಿ ಬರ್ತಿದೆ BGMI LITE, ಶೀಘ್ರದಲ್ಲೇ ಪ್ರೀ-ರಿಜಿಸ್ಟ್ರೇಷನ್ ಆರಂಭ!

by admin
August 21, 2026
0

ಗೇಮಿಂಗ್‌ ಪ್ರಿಯರಿಗೆ ಗುಡ್ ನ್ಯೂಸ್‌ : ಕಡಿಮೆ ಸಾಮರ್ಥ್ಯದ ಫೋನ್‌ಗಳಿಗಾಗಿ ಬರ್ತಿದೆ BGMI LITE, ಶೀಘ್ರದಲ್ಲೇ ಪ್ರೀ-ರಿಜಿಸ್ಟ್ರೇಷನ್ ಆರಂಭ! ಬೆಂಗಳೂರ: ಮೊಬೈಲ್ ಗೇಮ್ ಪ್ರಿಯರಿಗೆ, ಅದರಲ್ಲೂ ವಿಶೇಷವಾಗಿ...

yezdi-roadster-red-wolf-launched-online-booking-amazon-flipkart-price-kannada

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ ‘ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್’ ಬೈಕ್‌; ಬೆಲೆ ಎಷ್ಟು?

by admin
August 21, 2026
0

ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ನಲ್ಲೂ ಲಭ್ಯ ಹೊಸ 'ಯೆಜ್ಡಿ ರೋಡ್‌ಸ್ಟರ್ ರೆಡ್ ವೂಲ್ಫ್' ಬೈಕ್‌; ಬೆಲೆ ಎಷ್ಟು? ಬೆಂಗಳೂರು: ಖ್ಯಾತ ಬೈಕ್ ತಯಾರಕ ಕಂಪನಿ ಜಾವಾ-ಯೆಜ್ಡಿ ಮೋಟಾರ್‌ಸೈಕಲ್ಸ್ ತನ್ನ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram