Congress | ರೈತರ ಆಕ್ರೋಶದಿಂದಲೇ ಬಿಜೆಪಿಯ ನಾಶ ನಿಶ್ಚಿತ
ಬೆಂಗಳೂರು : ರೈತರ ಆಕ್ರೋಶದಿಂದಲೇ ಬಿಜೆಪಿಯ ನಾಶ ನಿಶ್ಚಿತ ಎಂದು ರಾಜ್ಯ ಕಾಂಗ್ರೆಸ್ ಕುಟುಕಿದೆ.
ರಾಜ್ಯದ ಹಲವೆಡೆ ಸುರಿದ ಮಳೆಗೆ ಲಕ್ಷಾಂತರ ಹೆಕ್ಟೇರ್ ಕೃಷಿ ಹಾಗೂ ತೋಟಗಾರಿಕೆ ಬೆಳೆ ನಾಶವಾಗಿದೆ. ಇತ್ತ ಕೇಂದ್ರ ಸರ್ಕಾರದ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ.
ಈ ಬಗ್ಗೆ ಸರಣಿ ಟ್ವೀಟ್ ಗಳನ್ನು ಮಾಡಿರುವ ಕಾಂಗ್ರೆಸ್, ಮಳೆಯಿಂದಾದ ಹಾನಿಯ ನಡುವೆಯೂ ಸಿಕ್ಕ ಅಲ್ಪ ಸ್ವಲ್ಪ ಬೆಳೆಗೂ ಬೆಲೆ ಕುಸಿತದ ಆಘಾತ. ಹೆಸರು ಕಾಳು ರೈತರು ನೂರೆಂಟು ಸವಾಲು ಎದುರಿಸುತ್ತಿದ್ದಾರೆ. ಹೆಸರು ಕಾಳಿಗೆ ₹7755 ಬೆಂಬಲ ಬೆಲೆ ಇದ್ದರೂ ₹5000ಕ್ಕೆ ಕುಸಿದಿದ್ದೇಕೆ? ಬೆಂಬಲ ಬೆಲೆ ತಲುಪದಿರುವುದೇಕೆ? ಬಿ.ಸಿ.ಪಾಟೀಲ್ ಅವರೇ,ತಾವು ಸಿನೆಮಾ ಬಿಟ್ಟು ನೊಂದ ರೈತರ ಕಡೆ ನೋಡುವುದು ಯಾವಾಗ?
![Congress BJP's destruction is certain due to farmers' anger saaksha tv](http://saakshatv.com/wp-content/uploads/2022/08/karnataka-congress.jpg)
ಮಳೆ ಹಾನಿ ಸಮೀಕ್ಷೆಯು ಕಾಟಾಚಾರದ ಅಂಕಿ-ಅಂಶದಿಂದ ಕೂಡಿದೆ, ವಾಸ್ತವದಲ್ಲಿ ಇದರ ನಾಲ್ಕು ಪಟ್ಟು ಹೆಚ್ಚು ಹಾನಿಯಾಗಿದೆ. ಕುರ್ಚಿ ಕಸರತ್ತಿಗೆ ದೆಹಲಿಗೆ ಓಡುವ ಸಿಎಂ, ಪರಿಹಾರ ಕೇಳಲು ಹೋಗುವುದಿಲ್ಲವೇಕೆ? ಸಿನಮಾಗೆ ಹೋಗುವ ಬಿ.ಸಿ.ಪಾಟೀಲ್ ಅವರು ರೈತರ ನೋಡಲು ಹೋಗದಿರುವುದೇಕೆ? ಬೇಜವಾಬ್ದಾರಿ ಬಿಜೆಪಿಯಿಂದ ರೈತರಿಗೆ ‘ಹಗ್ಗಭಾಗ್ಯ’ ಸಿಗುತ್ತಿದೆ.
ವಿದ್ಯುತ್ ಖಾಸಗೀಕರಣ, ಕೃಷಿ ಉತ್ಪನ್ನಗಳು, ಉಪಕರಣಗಳ ಮೇಲೆ GST ಹೊರೆ, ನಿಗದಿಯಾಗದ ಕನಿಷ್ಠ ಬೆಂಬಲ ಬೆಲೆ. ರೈತರನ್ನು ಸರ್ವನಾಶ ಮಾಡಲು ಕೃಷಿ ಕಾಯ್ದೆಗಳ ಬದಲು ಇತರ ಮಾರ್ಗಗಳನ್ನು ಹುಡುಕಿದೆ ಬಿಜೆಪಿ ಸರ್ಕಾರ. ರೈತರ ಆದಾಯ ಡಬಲ್ ಮಾಡುತ್ತೇವೆ ಎಂದವರು ರೈತರ ಕಷ್ಟಗಳನ್ನ ಡಬಲ್ ಮಾಡುತ್ತಿದ್ದಾರೆ. ರೈತರ ಆಕ್ರೋಶದಿಂದಲೇ ಬಿಜೆಪಿಯ ನಾಶ ನಿಶ್ಚಿತ ಎಂದು ಕಿಡಿಕಾರಿದೆ.