Congress : ಕೋಲಾರದಿಂದ ಹೈಕಮಾಂಡ್ ಹೇಳಿದರೆ ಸಿದ್ದರಾಮಯ್ಯನವರು ಸ್ಪರ್ಧೆ ಮಾಡ್ತಾರೆ – ಯತೀಂದ್ರ
ಕೋಲಾರ : ಮನೆ ನೋಡಿಕೊಂಡು ಹೋಗಲು ಬಂದಿರುವೆ.. ಅಪ್ಪನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಮುಖಂಡರು ಕೈ ಜೋಡಿಸಬೇಕಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ( ವಿಪಕ್ಷ ನಾಯಕ ) ಪುತ್ರ ಯತೀಂದ್ರ ಅವರು ಕೋಲಾರದಲ್ಲಿ ಹೇಳಿದ್ದಾರೆ..
ಮನೆ ಚೆನ್ನಾಗಿದೆ, ತಂದೆ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳತ್ತಾರೆ,
ಅನಿಲ್ ಕುಮಾರ್, ಸುದರ್ಶನ್ ಮನೆಯ ವಾಸ್ತು ನೋಡಿರುತ್ತಾರೆ,
ನಮಗೆ ಮತ್ತು ತಂದೆ ವಾಸ್ತು ಮೇಲೆ ನಂಬಿಕೆ ಇಲ್ಲ,
ಇದೇ ಮೊದಲ ಬಾರಿಗೆ ನಾನು ನೋಡುತ್ತಿರುವುದು ಅಪ್ಪ ಇನ್ನೂ ಮನೆ ನೋಡಿಲ್ಲ ಎಂದಿದ್ದಾರೆ..
ಇದೇ ವೇಳೆ ಯಡಿಯೂರಪ್ಪ ಮತ್ತು ಅನೇಕರು ಸಿದ್ದರಾಮಯ್ಯ ಕೋಲಾರದಲ್ಲಿ ಸ್ಪರ್ಧೆ ಮಾಡಲ್ಲ ಎಂಬ ಹೇಳಿಕೆ ವಿಚಾರವಾಗಿ ಮಾತನಾಡ್ತಾ
ನಮ್ಮ ಪಕ್ಷದ ನಾಯಕರು ಎಲ್ಲಿ ನಿಂತುಕೊಳ್ಳತ್ತಾರೆ ಎಂಬುದು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ,
ಬೇರೆ ಪಕ್ಷದವರಿಗೆ ಏನು ಗೋತ್ತು,
ಅಪ್ಪ ಹೈಕಮಾಂಡ್ ಹೇಳಿದರೆ ಕೋಲಾರದಿಂದ ಸ್ಪರ್ಧೆ ಮಾಡುವುದಾಗಿ ಹೇಳಿದ್ಧಾರೆ,
ಅದಕ್ಕಾಗಿ ಕೋಲಾರದಲ್ಲಿ ಕೆಲಸ ಆರಂಭ ಮಾಡಲಾಗಿದೆ,
ನಾನು ಸಹ ವರುಣದಲ್ಲಿ ಸ್ಪರ್ಧೆ ಮಾಡುವಂತೆ ಆಹ್ವಾನ ನೀಡಿದ್ದೆ
ಆದ್ರೆ ಅವ್ರು ಮನಸ್ಸು ಬೇರೆ ಕೆಡೆ ಇದೆ,
ಕೋಲಾರದಿಂದ ಹೈಕಮಾಂಡ್ ಹೇಳಿದರೆ ಸ್ಪರ್ಧೆ ಮಾಡವುದಾಗಿ ಹೇಳಿದರೆ,
ಕೊನೆ ಕ್ಷಣದಲ್ಲಿ ಸಿದ್ದತೆಗಳು ಮಾಡಿಕೊಳ್ಳಲು ಕಷ್ಟ,
ಆ ಹಿನ್ನಲೆಯಲ್ಲಿ ಕೋಲಾರದಲ್ಲಿ ಚುನಾವಣೆ ಕೆಲಸ ಆರಂಭ ಮಾಡಲಾಗಿದೆ ಎಂದಿದ್ದಾರೆ..
ಇನ್ನೂ ದೈ ವದ ವಿಚಾರವಾಗಿಯೂ ಮಾತನಾಡಿರುವ ಯತೀಂದ್ರ ಅವರು ,
ನಾನು ಪ್ರಶ್ನೆ ಕೇಳಲು ಹೋಗಿಲ್ಲ, ಆ ದೇವರು ನಮ್ಮ ಮನೆ ದೇವರಲ್ಲ,
ರಾಜಕೀಯ ತೀರ್ಮಾನಗಳನ್ನು ದೇವರು ಹೇಳಿದರೆ ಅಂತಾ ಬೇರೆ ಯಾರೋ ಹೇಳಿದ್ದಾರೆ ಅಂತಾ ತೀರ್ಮಾನ ಕೈಗೊಳ್ಳಲು ಸಾಧ್ಯವಿಲ್ಲ ಎಂದಿದ್ದಾರೆ..
ಹೈ ವೋಲ್ಟೇಜ್ ಕ್ಷೇತ್ರವಾದ ಕೋಲಾರ…!!!
ಸಿದ್ದರಾಮಯ್ಯ ಅವರು ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕೋಲಾರದಿಂದ ಅಖಾಡಕ್ಕೆ ಧುಮುಕಲು ಸಜ್ಜಾಗ್ತಿರುವಂತೆ ಕಾಣುತ್ತಿದೆ… ಹೀಗಾಗಿಯೇ ಈ ಬಾರಿಯ ಹೈ ಓಲ್ಟೇಜ್ ಕ್ಷೇತ್ರವಾಗಿ ಕೋಲಾರ ಮಾರ್ಪಾಡಾಗಿದೆ..
ಎಲ್ಲರ ಚಿತ್ತ ಇದೀಗ ಕೋಲಾರದತ್ತ ನೆಟ್ಟಿದೆ..
ಕೋಲಾರದಲ್ಲಿ ಅಹಿಂದ ಮತಗಳು ಹೆಚ್ಚಾಗಿರುವ ಕಾರಣ ಈ ಬಾರಿ ಕೋಲಾರ ಕ್ಷೇತ್ರದತ್ತ ಸಿದ್ದರಾಮಯ್ಯ ಅವರು ವಾಲಿರೋದಾಗಿಯೇ ಹೇಳಲಾಗ್ತಿದೆ..
ಇತ್ತ ವರ್ತೂರು ಪ್ರಕಾಶ್ ಸಿದ್ದರಾಮಯ್ಯ ವಿರುದ್ಧ ಬಿಜೆಪಿಯಿಂದ ಕಣಕ್ಕೆ ಇಳಿಯುವ ಸಾಧ್ಯತೆಯೂ ದಟ್ಟವಾಗಿದೆ..
ಅಧಿಕೃತವಾಗಿ ಟಿಕೆಟ್ ಘೋಷಣೆ ಆದ ನಂತರ ಸ್ಪಷ್ಟವಾಗಿ ಗೊತ್ತಾಗಲಿದೆ..
Congress , siddaramaih , kolar Constituency