ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳು ಕನಿಷ್ಠ 2 ಕಿ.ಮೀ ಪಾದಯಾತ್ರೆ ಮಾಡ್ಬೇಕು
ಬೆಂಗಳೂರು : ನಾವು ಜನಗಳ ಮಧ್ಯೆ ನಿಂತು ಹೋರಾಟ ಮಾಡಬೇಕು. ಕನಿಷ್ಠ ಎರಡು ಕಿ.ಮೀ. ಪಾದಯಾತ್ರೆ ಮಾಡಬೇಕು. ಹಾಗಾಗಿ ಜನರ ಮಧ್ಯೆ ಹೋರಾಟ ಮಾಡುವ ನಾಯಕರನ್ನು ಗುರುತಿಸಲು ತಂಡ ಕಳುಹಿಸುತ್ತೇವೆ.
ಅಂತಹ ಪ್ರಮುಖರನ್ನು ಗುರುತಿಸಿ ಅಂತಹವರಿಗೆ ಮಾತ್ರ ಚುನಾವಣೆ ಟಿಕೆಟ್ ಕೊಡಲಾಗುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಇಂದು ಬೆಂಗಳೂರಿನ ಚೌಡಯ್ಯ ಸ್ಮಾರಕ ಸಭಾಂಗಣದಲ್ಲಿ ಕಾರ್ಯಾಧ್ಯಕ್ಷರ ಪದಗ್ರಹಣ ಕಾರ್ಯಕ್ರಮ ಮಾತನಾಡಿದ ಅವರು, ನಮ್ಮ ರಾಜ್ಯದ ನಾಯಕರ ಮೇಲೆ ಹೈಕಮಾಂಡ್ ಗೆ ಅಪಾಯವಾದ ನಂಬಿಕೆ ಇದೆ.
ಹಾಗಾಗಿಯೇ ರಾಜ್ಯಸಭೆಯ ಪ್ರತಿಪಕ್ಷ ನಾಯಕರ ಸ್ಥಾನವನ್ನ ಮಲ್ಲಿಕಾರ್ಜುನ್ ಖರ್ಗೆ ಅವರಿಗೆ ನೀಡಲಾಗಿದೆ. ಅಲ್ಲದೇ ಹಲವು ರಾಜ್ಯಗಳ ಜವಾಬ್ದಾರಿಯನ್ನು ರಾಜ್ಯದ ನಾಯಕರಿಗೆ ವಹಿಸಿದ್ದಾರೆ.
ಇನ್ನೇನಿದ್ದರೂ ನಾವು ಜನರ ಮಧ್ಯೆ ನಿಂತು ಹೋರಾಟ ಮಾಡಬೇಕು. ಕನಿಷ್ಠ ಎರಡು ಕಿ.ಮೀ. ಪಾದಯಾತ್ರೆ ಮಾಡಬೇಕು. ಹಾಗಾಗಿ ಜನರ ಮಧ್ಯೆ ಹೋರಾಟ ಮಾಡುವ ನಾಯಕರನ್ನು ಗುರುತಿಸಲು ತಂಡ ಕಳುಹಿಸುತ್ತೇವೆ.
ಅಂತಹ ಪ್ರಮುಖರನ್ನು ಗುರುತಿಸಿ ಅಂತಹವರಿಗೆ ಮಾತ್ರ ಚುನಾವಣೆ ಟಿಕೆಟ್ ಕೊಡಲಾಗುತ್ತದೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಸೇರುವವರಿಗೆ ಮುಕ್ತ ಆಹ್ವಾನ ನೀಡಿದ ಡಿಕೆಶಿ, ಪಕ್ಷದ ತತ್ವ ಸಿದ್ಧಾಂತಗಳನ್ನು ಒಪ್ಪಿಕೊಂಡು ಬರುವ ಯಾರಿಗಾದರೂ ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುತ್ತೇವೆ.
ಪಕ್ಷ ಬಿಟ್ಟು ಹೋದವರಿಗೂ ಮತ್ತೆ ಸೇರ್ಪಡೆಗೆ ಅವಕಾಶ ಕೊಡುತ್ತಿದ್ದೇವೆ ಎಂದು ಮಾಹಿತಿ ನೀಡಿದರು.