ಬೆಳಗಾವಿ : ರಾಜ್ಯದಲ್ಲಿ 2023ಕ್ಕೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಸತೀಶ್ ಜಾರಕಿಹೊಳಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸತೀಶ್ ಜಾರಕಿಹೊಳಿ ಅವರ ನೂತನ ಕಾರಿಗೆ ಬೆಳಗಾವಿಯ ಸದಾಶಿವ ನಗರದ ಸ್ಮಶಾನದ ಮಾನವ ಬಂಧುತ್ವ ವೇದಿಕೆಯಲ್ಲಿ ಬೇಲೂರಿನ ನಿಜಗುಣ ಶಿವಯೋಗಿ ಸ್ವಾಮೀಜಿ ನೇತೃತ್ವದಲ್ಲಿ ಚಾಲನೆ ನೀಡಲಾಯಿತು. ಈ ಕಾರ್ಯಕ್ರಮದ ಬಳಿಕ ಮಾತನಾಡಿದ ಅವರು, ಮಿಷನ್ 2023 ಟಾರ್ಗೆಟ್ ಇಟ್ಟುಕೊಂಡು ಕಾರಿನ ಸಂಖ್ಯೆ 2023 ಹಾಕಿಕೊಂಡಿದ್ದೇವೆ. ಆ ಸಂಖ್ಯೆ ನೋಡಿದ ತಕ್ಷಣವೇ ಮಿಷನ್ 2023 ನೆನಪಾಗಬೇಕು. ಖಂಡಿತವಾಗಿಯೂ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸದ ಮಾತುಗಳನ್ನಾಡಿದರು.
ಇದೇ ವೇಳೆ ಸಚಿನ್ ಪೈಲೆಟ್ ಬಂಡಾಯದ ಬಗ್ಗೆ ಮಾತನಾಡಿದ ಸತೀಶ್ ಜಾರಕಿಹೊಳಿ, ಯಾರೇ ಪಕ್ಷ ಬಿಟ್ಟು ಹೋದ್ರು ಪಕ್ಷ ಪಕ್ಷವೇ. ಮೊನ್ನೆ ಲೋಕಸಭೆ ಚುನಾವಣೆಯಲ್ಲಿ 11 ಕೋಟಿ ಮತ ಕಾಂಗ್ರೆಸ್ ಗೆ ಬಂದಿದೆ. ಬಿಜೆಪಿಗೆ 18 ಕೋಟಿ ಮತ ಬಂದಿದೆ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಮತಗಳು ಹೆಚ್ಚಾಗಲಿದೆ ಎಂದರು.
ಇನ್ನು ಲಾಕ್ ಡೌನ್ ಬಗ್ಗೆ ಮಾತನಾಡಿದ ಅವರು, ಕೊರೊನಾ ನಿಯಂತ್ರಣಕ್ಕೆ ಲಾಕ್ ಡೌನ್ ಪರಿಹಾರವಲ್ಲ, ಲಾಕ್ ಡೌನ್ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು. ಕೊರೊನಾ ಯಾರಿಗೆ ಇದೇ ಅನ್ನೋದು ಗೊತ್ತಿಲ್ಲ, ಸರ್ಕಾರದ ಬಳಿ ಕೊರೊನಾ ಔಷಧಿಯಿಲ್ಲ, ಕೊರೊನಾ ಲಾಕ್ ಡೌನ್ ಪರಿಹಾರ ಅಲ್ಲ, ಮನೆಯಲ್ಲಿ ಇದ್ದರೂ ಬರುತ್ತೆ, ಹೊರಗೆ ಇದ್ದರೂ ಬರುತ್ತೆ. ಕೊರೊನಾ ತಡೆಯಲು ಸಾಮಾಜಿಕ ಅಂತರ ಒಂದೇ ಪರಿಹಾರ ಎಂದು ಸತೀಜ್ ಜಾರಕಿಹೊಳಿ ಹೇಳಿದರು.








