ರಾಜ್ಯದಲ್ಲಿ ಇಂದು ಮತ್ತೆ ಕೊರೊನಾ ಸ್ಫಟವಾಗಿದೆ. ಹಾಗೆ ನೊಡುವುದಾದ್ರೆ ಇಂದು ಕೊರೊನಾ ರಾಜ್ಯಕ್ಕೆ ದೊಡ್ಡ ಶಾಕ್ ಕೊಟ್ಟಿದೆ ಎಂದ್ರೂ ತಪ್ಪಾಗೋದಿಲ್ಲ. ಇಂದು ಒಂದೇ ಬರೋಬ್ಬರಿ 6128 ಕೊವಿಡ್-19 ಪ್ರಕರಣಗಳು ಪತ್ತೆಯಾಗಿದೆ. ಕೊರೊನಾ ಮರಣಮೃದಂಗಕ್ಕೆ ಇಂದು ದಿನ ಬರೋಬ್ಬರಿ 83 ಸೋಂಕಿತರು ಸಾವನಪ್ಪಿದ್ರೆ, ಇಂದು 3793 ಜನರು ಕೊವಿಡ್ನಿಂದ ಗುಣಮುಖರಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 118632ಕ್ಕೆ ಏರಿಕೆಯಾಗಿದೆ. ಒಟ್ಟು ಮೃತಪಟ್ಟವರ ಸಂಖ್ಯೆ 2230ಕ್ಕೆ ತಲುಪಿದೆ. ಇದುವರೆಗೂ ಕೊರೊನಾದಿಂದ ಚೇತರಿಸಿಕೊಂಡವರ ಸಂಖ್ಯೆ 46,694ರ ಘಟ್ಟ ತಲುಪಿದೆ. ಇನ್ನೂ ಬೆಂಗಳೂರಿನಲ್ಲಿ ಕೊರೊನಾ ಸ್ಥಿತಿ ನೋಡುವುದಾದ್ರೆ ಇಂದು ಒಂದೇ ದಿನ 2233 ಜನರಿಗೆ ಕೊವಿಡ್ ಸೋಂಕು ತಗುಲಿದೆ. ಈ ಮೂಲಕ ಸಿಲಿಕಾನ್ ಸಿಟಿಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 53324ಕ್ಕೆ ಏರಿದೆ.ಇಂದು ಬೆಂಗಳೂರಿನಲ್ಲಿ ಮಹಾಮಾರಿಗೆ 22 ಜನರು ಮೃತಪಟ್ಟಿದ್ದಾರೆ.
ಟಿಕೆಟ್ ಕೊಡಿಸುವುದಾಗಿ 2.5 ಕೋಟಿ ರೂ. ವಂಚನೆ; ಕೇಂದ್ರ ಸಚಿವರ ಸಹೋದರ ಅರೆಸ್ಟ್
ಹುಬ್ಬಳ್ಳಿ: ಲೋಕಸಭೆ ಚುನಾವಣೆಯಲ್ಲಿ (Loksabha Election) ಬಿಜೆಪಿ ಟಿಕೆಟ್ ಕೊಡಿಸುವುದಾಗಿ 2.25 ಕೋಟಿ ರೂ. ಸುಲಿಗೆ ಮಾಡಿದ ಆರೋಪದ ಮೇಲೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Pralhad...