ಹಾಸನ : ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ ಎಂದು ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಸಿರಿವಂತನ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಅಮೆರಿಕಗೆ ಇನ್ನೂ ತೀವ್ರ ಗಂಡಾಂತರ ತಪ್ಪಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ಮುಂದುವರೆದು, ಯುದ್ಧವಿಲ್ಲದೇ ಜನರು ಮಡಿಯುತ್ತಾರೆ. ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಜನರಿಗೆ, ಕೆಲ ಮಂತ್ರಿಗಳಿಗೆ ಕಂಟಕ ಆಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಭಾರತಕ್ಕೆ, ಕರ್ನಾಟಕಕ್ಕೆ ಮಹಾಮಾರಿ ಕೊರೊನಾದಿಂದ ಹೆಚ್ಚಿನ ಸಮಸ್ಯೆ ಉಂಟಾಗೋದಿಲ್ಲ. ಅಮೇರಿಕಾಕ್ಕೆ ಕೊರೊನಾ ಕಂಟಕ ಸದ್ಯಕ್ಕೆ ಬಿಡೋದಿಲ್ಲ ಎಂಬುದಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ಚಂದನವನದ ಅಜರಾಮರ ಪ್ರೇಮಕಾವ್ಯಕ್ಕೆ ಮತ್ತೆ ಜೀವ: ರವಿ-ಹಂಸ ಜೋಡಿಯ ಐತಿಹಾಸಿಕ ಕ್ರೇಜಿ ಬ್ರಹ್ಮ ಮಹಾಸಂಗಮಕ್ಕೆ ಮುಹೂರ್ತ ಫಿಕ್ಸ್!
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರುಗಳೆಂದರೆ ಅದು ಈಶ್ವರಿಯ ರವಿಚಂದ್ರನ್ ಮತ್ತು ನಾದಬ್ರಹ್ಮ ಹಂಸಲೇಖ. ಪ್ರೇಮಲೋಕದ ಮೂಲಕ ಕನ್ನಡಿಗರ ಎದೆಯಲ್ಲಿ ಪ್ರೇಮದ ಪರಾಕಾಷ್ಠೆಯನ್ನು ಬಿತ್ತಿದ...








