ಹಾಸನ : ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ ಎಂದು ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು ಭವಿಷ್ಯ ನುಡಿದಿದ್ದಾರೆ.
ಈ ಕುರಿತಂತೆ ಸುದ್ದಿಗಾರರೊಂದಿಗೆ ಮಾತನಾಡಿರುವ ಕೋಡಿಮಠ ಶ್ರೀಗಳಾದ ಶಿವಾನಂದ ಶಿವಯೋಗಿ ಮಹಾಸ್ವಾಮಿಗಳು, ಸಿರಿವಂತ ಮಗನುಟ್ಟಿ ಆಳುವನು ಮುನಿಪುರವ, ಯುದ್ಧವಿಲ್ಲದೆ ನುಡಿಯೆ ಪುರವೆಲ್ಲ ಕೂಳಾದೀತು ಎಂಬುದಾಗಿ ಭವಿಷ್ಯ ನುಡಿದಿದ್ದಾರೆ. ಸಿರಿವಂತನ ಮಗ ಎಂದರೆ ಟ್ರಂಪ್, ಮುನಿಪುರ ಎಂದರೆ ಅಮೆರಿಕಾ. ಅಮೆರಿಕಗೆ ಇನ್ನೂ ತೀವ್ರ ಗಂಡಾಂತರ ತಪ್ಪಿಲ್ಲ ಎಂದು ಭವಿಷ್ಯ ನುಡಿದಿದ್ದಾರೆ.
ಇನ್ನೂ ಮುಂದುವರೆದು, ಯುದ್ಧವಿಲ್ಲದೇ ಜನರು ಮಡಿಯುತ್ತಾರೆ. ಭಾರತಕ್ಕೆ ಮಹಾಮಾರಿ ಕೊರೊನಾದಿಂದ ಭಾರೀ ಗಂಡಾಂತರವಿಲ್ಲ. ಮೇ ಅಂತ್ಯಕ್ಕೆ ಕೊರೊನಾ ಕಂಟಕ ಕೊನೆಯಾಗಲಿದೆ. ಕರ್ನಾಟಕಕ್ಕೆ ಯಾವುದೇ ಹೆಚ್ಚಿನ ತೊಂದರೆ ಇಲ್ಲ. ಜನರಿಗೆ, ಕೆಲ ಮಂತ್ರಿಗಳಿಗೆ ಕಂಟಕ ಆಗಲಿದೆ ಎಂದಿದ್ದಾರೆ.
ಒಟ್ಟಾರೆಯಾಗಿ ಭಾರತಕ್ಕೆ, ಕರ್ನಾಟಕಕ್ಕೆ ಮಹಾಮಾರಿ ಕೊರೊನಾದಿಂದ ಹೆಚ್ಚಿನ ಸಮಸ್ಯೆ ಉಂಟಾಗೋದಿಲ್ಲ. ಅಮೇರಿಕಾಕ್ಕೆ ಕೊರೊನಾ ಕಂಟಕ ಸದ್ಯಕ್ಕೆ ಬಿಡೋದಿಲ್ಲ ಎಂಬುದಾಗಿ ಕೋಡಿಮಠದ ಶ್ರೀಗಳು ಭವಿಷ್ಯ ನುಡಿದಿದ್ದಾರೆ.
ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!
ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಎಐಎಡಿಎಂಕೆ ಶಾಸಕರ ರಾಜೀನಾಮೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂವರು ಎಐಎಡಿಎಂಕೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ...








