ಇತ್ತೀಚೆಗಷ್ಟೇ ಇಟಲಿ ಪ್ರವಾಸವನ್ನು ಮುಗಿಸಿ ವಾಪಾಸಾಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ಸೋನಿಯಾ ಗಾಂಧಿ ಅವರಿಗೆ ಶಂಕಿತ ಕೊರೋನಾ ಪರೀಕ್ಷೆ ಮಾಡಿಸಬೇಕು ಎಂದು ಸಂಸದರೊಬ್ಬರು ಗುರುವಾರ ಲೋಕಸಭೆಯಲ್ಲಿ ಆಗ್ರಹಿಸಿದ ಘಟನೆ ನಡೆಯಿತು.
ಲೋಕಸಭೆಯಲ್ಲಿ ಜಗತ್ತಿನಾದ್ಯಂತ ಭಯಭೀತ ವಾತಾವರಣ ಹುಟ್ಟು ಮಾಡಿರುವ ಕೊರೊನಾ ವೈರಸ್ ಕುರಿತು ಚರ್ಚೆ ನಡೆಯುತ್ತಿದ್ದ ಸಂದರ್ಭದಲ್ಲಿ ಪಕ್ಷೇತರ ಸಂಸದ ಹನುಮಾನ್ ಬೇನಿವಾಲ ಅವರು ಮೊದಲು ಈ ವಿಚಾರವನ್ನು ಪ್ರಸ್ತಾಪಿಸಿದರು.
ರಾಹುಲ್ ಮತ್ತು ಸೋನಿಯಾ ಗಾಂಧಿ ಅವರ ಇತ್ತೀಚೆಗಿನ ಇಟಲಿ ಪ್ರವಾಸವನ್ನು ಉಲ್ಲೇಖಿಸಿದ ಪಕ್ಷೇತರ ಸಂಸದ ಬೇನಿವಾಲಾ ಅವರಿಬ್ಬರಿಗೂ ಶಂಕಿತ ಕೊರೋನಾ ಪರೀಕ್ಷೆ ಮಾಡಿಸಬೇಕು ಎಂದು ಹೇಳಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್ ಸಂಸದರು, ಹನುಮಾನ್ ಬೇನಿವಾಲಾ ಅವರ ಕ್ಷಮೆ ಅಥವಾ ಅಮಾನತಿಗೆ ಆಗ್ರಹಿಸಿದರು. ಕೂಡಲೇ ಲೋಕಸಭಾಧ್ಯಕ್ಷರು ವಿಚಾರವನ್ನು ಕಡತದಿಂದ ತೆಗೆದು ಹಾಕಲು ಸೂಚಿಸಿದರು ಮತ್ತು ಈ ವಿಚಾರವನ್ನು ಅಲ್ಲಿಗೇ ಮುಗಿಸಲು ಪ್ರಯತ್ನಿಸಿದರು. ಆದರೆ ಕಾಂಗ್ರೆಸ್ ಸದಸ್ಯರು ಮಾತ್ರ ಬೇನಿವಾಲಾ ಅವರ ಕ್ಷಮೆಗೆ ಪಟ್ಟುಹಿಡಿದರು.
ವಿಜಯೇಂದ್ರ ಮತ್ತು ಅಶೋಕ್ ನಾಯಕತ್ವಕ್ಕೆ ಬಿಜೆಪಿ ಶಾಸಕರ ಧಿಕ್ಕಾರ: ಅಡ್ಡ ಮತದಾನ ಪ್ರಕರಣದಿಂದ ಬಯಲಾದ ಆಂತರಿಕ ಬಂಡಾಯ
ಕರ್ನಾಟಕ ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನ ಪ್ರಕರಣವು ರಾಜ್ಯ ಬಿಜೆಪಿಯಲ್ಲಿ ದೊಡ್ಡ ಮಟ್ಟದ ರಾಜಕೀಯ ಭೂಕಂಪಕ್ಕೆ ಕಾರಣವಾಗಿದೆ. ಇದು ಕೇವಲ ಒಂದು ಸೋಲಲ್ಲ, ಬದಲಾಗಿ...








