Wednesday, October 4, 2023
  • Home
  • About Us
  • Contact Us
  • Privacy Policy
Cini Bazaar
Sports
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home International

ಕೊರೊನಾ Vs ಮಹಿಳಾ ನಾಯಕಿಯರು – ಹೆಣ್ಣೇ ನಿನಗೆ ಸಾಟಿ ಯಾರು?

admin by admin
April 29, 2020
in International, Newsbeat, Samagra karnataka
Share on FacebookShare on TwitterShare on WhatsappShare on Telegram

ಜಗತ್ತೇ ಕೊರೊನಾ ವೈರಸ್ ಭಾದೆಗೆ ಒಳಗಾಗಿ ತೊಳಲಾಡುತ್ತಿರುವ ಈ ಸಂದರ್ಭದಲ್ಲಿ ವಿಶ್ವದ ಆಗುಹೋಗುಗಳನ್ನು ಗಮನಿಸಿದಾಗ ಹೆಣ್ಣಿನ ನಾಯಕತ್ವದ ರಾಷ್ಟ್ರದಲ್ಲಿ ಕೋವಿಡ್-19 ನ ಸೋಂಕಿನ ಸಾವು ನೋವು ಗಣನೀಯ ಪ್ರಮಾಣದಲ್ಲಿ ಕಡಿಮೆ ಇರುವುದು ಎದ್ದು ಕಾಣುತ್ತದೆ.
ತನ್ನ ಕುಟುಂಬದ ಒಳಿತಿಗಾಗಿ ಎಂತಹ ಕಠಿಣ ಸಂದರ್ಭದಲ್ಲೂ ನಿರ್ದಾಕ್ಷಿಣ್ಯ ಕ್ರಮಗಳನ್ನು ತೆಗೆದುಕೊಳ್ಳಲು ಹಿಂದೆ ಮುಂದೆ ನೋಡದ ಹೆಣ್ಣಿನ ನಿರ್ಧಾರಗಳೇ ಈ ರಾಷ್ಟ್ರಗಳಲ್ಲಿ ಕೊರೊನಾ ನಿಯಂತ್ರಣಕ್ಕೆ ಕಾರಣ ಎಂದರೆ ಅತಿಶಯೊಕ್ತಿಯಲ್ಲ.

ನ್ಯೂಜಿಲೆಂಡ್

Related posts

ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್ ದುರಂತ

ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್ ದುರಂತ

October 4, 2023
ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

October 3, 2023

ನ್ಯೂಜಿಲೆಂಡ್ ಇಲ್ಲಿನ ಪ್ರಧಾನಿ ಜಸಿಂಡಾ ಆರ್ಡರ್ನ್

ನ್ಯೂಜಿಲೆಂಡ್ ನಲ್ಲಿ ಇಲ್ಲಿಯವರೆಗೆ 19 ಸಾವುಗಳು ಮತ್ತು 1,474 ಕೊರೋನಾ ಪ್ರಕರಣಗಳು ದಾಖಲಾಗಿದ್ದು, 1,229 ಪ್ರಕರಣಗಳು ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಐದು ವಾರಗಳ ಕಟ್ಟುನಿಟ್ಟಿನ ಲಾಕ್‌ಡೌನ್ ಕ್ರಮಗಳಿಂದಾಗಿ, ಕೊರೋನ ವೈರಸ್ ಅನ್ನು ತಡೆಯುವ ಮಹತ್ವಾಕಾಂಕ್ಷೆಯ ಗುರಿಯನ್ನು ನ್ಯೂಜಿಲೆಂಡ್ ಸಾಧಿಸಿದೆ. ಇದನ್ನು ನ್ಯೂಜಿಲೆಂಡ್‌ನ ಪ್ರಧಾನ ಮಂತ್ರಿ ಜಸಿಂಡಾ ಅರ್ಡೆರ್ನ್ “ಆಧುನಿಕ ಇತಿಹಾಸದಲ್ಲಿ ನ್ಯೂಜಿಲೆಂಡ್‌ನವರ ಮೇಲೆ ಕಟ್ಟುನಿಟ್ಟಾದ ನಿರ್ಬಂಧಗಳು” ಎಂದು ಬಣ್ಣಿಸಿದ್ದಾರೆ. ನಾವು ಒಟ್ಟಾಗಿ ಕೊರೊನಾ ವಿರುದ್ಧ ಅಸಾಧ್ಯವಾದ ರೀತಿಯಲ್ಲಿ ಕೆಲಸ ಮಾಡಿ ಜಯ ಸಾಧಿಸಿದ್ದೇವೆ ಎಂದು ಅವರು ನ್ಯೂಜಿಲೆಂಡ್‌ನ ಪ್ರಯತ್ನವನ್ನು ಶ್ಲಾಘಿಸಿದ್ದಾರೆ.

ಐಸ್‌ ಲ್ಯಾಂಡ್
ಐಸ್‌ ಲ್ಯಾಂಡ್ ಪ್ರಧಾನಿ ಕಟ್ರಾನ್ ಜಾಕೋಬ್ಸ್ಡಾಟ್ಟಿರ್

ಐಸ್ ಲ್ಯಾಂಡ್ ನಲ್ಲಿ ಇಲ್ಲಿಯವರೆಗೆ ಒಟ್ಟು 1,795
ಪ್ರಕರಣಗಳು ವರದಿಯಾಗಿದೆ. ಅದರಲ್ಲಿ 1,636 ಪ್ರಕರಣಗಳು ಗುಣಮುಖರಾಗಿದ್ದರೆ, 10 ಪ್ರಕರಣಗಳು ಸಾವು ಕಂಡಿವೆ.
ಕೊರೊನಾವೈರಸ್ ಅನ್ನು ಯಾರು ಹೊಂದಿದ್ದಾರೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದರ ಕುರಿತು ಗಮನ ಹರಿಸಿದ ಐಸ್‌ಲ್ಯಾಂಡ್ ದ್ವೀಪ ರಾಷ್ಟ್ರವು ಸೋಂಕು ಹರಡುವುದನ್ನು ತಡೆಯಲು ಯಶಸ್ವಿಯಾಗಿದೆ.
ಸಂದರ್ಶನವೊಂದರಲ್ಲಿ ಪ್ರಧಾನ ಮಂತ್ರಿ ಕಟ್ರಿನ್ ಜಾಕೋಬ್ಸ್ಡಾಟ್ಟಿರ್ ಅವರು ಇಲ್ಲಿಯವರೆಗೆ 1800 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದು, ಕೇವಲ 10 ಸಾವುಗಳು ಮಾತ್ರ ಸಂಭವಿಸಿದೆ ಎಂದು ಹೇಳಿದ್ದಾರೆ. ‌ನಾವು ಸಾಂಕ್ರಾಮಿಕ ರೋಗದ ಮೇಲೆ ಹಿಡಿತ ಸಾಧಿಸುತ್ತಿದ್ದೇವೆ ಎಂದು ನಾನು ಭಾವಿಸಿದ್ದೇನೆ ಎಂದು ಹೇಳಿದ ಅವರು ವಿಶೇಷವಾಗಿ ಸಾಮೂಹಿಕ ಪರೀಕ್ಷೆ, ಸಂಪರ್ಕ ಪತ್ತೆಹಚ್ಚುವಿಕೆ ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸುವ ಮೂಲಕ ಈ ಸೋಂಕನ್ನು ತಡೆಗಟ್ಟಿದ್ದೇವೆ ಎಂದು ಹೇಳಿದ್ದಾರೆ.

ಸಿಂಟ್ ಮಾರ್ಟನ್
ಸಿಂಟ್ ಮಾರ್ಟನ್ ಪ್ರಧಾನಿ ಸಿಲ್ವೆರಿಯಾ ಜೇಕಬ್ಸ್

ಕೆರಿಬಿಯನ್ ದ್ವೀಪದ ಸಿಂಟ್ ಮಾರ್ಟನ್ ನಲ್ಲಿ ಇಲ್ಲಿಯವರೆಗೆ ವರದಿಯಾಗಿರುವ ಕೊರೋನಾ ಪ್ರಕರಣಗಳು 75 ಮತ್ತು ಅದರಲ್ಲಿ 13 ಪ್ರಕರಣಗಳು ಸಾವನ್ನು ಕಂಡಿದ್ದರೆ, ಗುಣಮುಖವಾದ ಪ್ರಕರಣಗಳು 33.‌
ಜಗತ್ತಿನಾದ್ಯಂತ ಕೊರೊನಾ ಸೋಂಕು ಹರಡಲು ಪ್ರಾರಂಭಿಸಿದಾಗ ಕೆರಿಬಿಯನ್ ದ್ವೀಪವಾದ ಸಿಂಟ್ ಮಾರ್ಟೆನ್‌ ನಲ್ಲಿ 17 ಮಾರ್ಚ್ 2020 ಮೊದಲನೆಯ ಪ್ರಕರಣ ವರದಿಯಾಗಿತ್ತು. ಕೊರೊನಾವೈರಸ್ ಪ್ರಕರಣಗಳು ಹೆಚ್ಚಾಗುತ್ತಿದಂತೆ ವರ್ಷಕ್ಕೆ 500,000 ಪ್ರವಾಸಿಗರನ್ನು ಸ್ವಾಗತಿಸುವ ಸಣ್ಣ ದ್ವೀಪ ದೇಶವನ್ನು ಬಹಳ ಅಪಾಯದಲ್ಲಿದೆ ಎಂದು ತಿಳಿದ ಪ್ರಧಾನಿ ಸಿಲ್ವೆರಿಯಾ ಜೇಕಬ್ಸ್, ತನ್ನ ದೇಶದ 44 ಸಾವಿರ ಜನರಿಗೆ ಒಂದು ಸಾಲಿನ ಆದೇಶ ಹೊರಡಿಸಿದಳು. ಎರಡು ವಾರ ಅಲ್ಲಿ ಇಲ್ಲಿ ತಿರುಗುವುದನ್ನು ಬಿಡಿ. ನಿಮ್ಮ ಮನೆಯಲ್ಲಿ ಏನು ಇದೆಯೋ ಅದನ್ನೇ ತಿನ್ನಿ.‌ ನಿಮ್ಮ ಮನೆಯಲ್ಲಿ ನೀವು ಇಷ್ಟಪಡುವ ಬ್ರೆಡ್ ಇಲ್ಲದಿದ್ದರೆ, ರಸ್ಕ್ ತಿನ್ನಿ, ಅದಿಲ್ಲ ಇದಿಲ್ಲ ಅಂತ ಹೊರಗೆ ಬಂದರೆ ಹುಶಾರ್ ಅಂತ ಗದರಿಸಿದಳು. ಜನ ಸುಮ್ಮಗೆ ಮನೆಯೊಳಗೆ ಇದ್ದರು. ಕೊರೋನಾ ಪ್ರಕರಣ 75 ದಾಟಲಿಲ್ಲ.

ತೈವಾನ್

ತೈವಾನ್ ಪ್ರಧಾನಿ ತ್ಸೈ ಇಂಗ್ ವೆನ್
ಇಲ್ಲಿಯವರೆಗೆ 429 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿದ್ದರೆ, 6 ಸಾವುಗಳು ಸಂಭವಿಸಿವೆ. 307 ಪ್ರಕರಣಗಳು ಗುಣಮುಖರಾಗಿದ್ದಾರೆ.

ಆಸ್ಟ್ರೇಲಿಯಾ ಮತ್ತು ತೈವಾನ್ ಸುಮಾರು 24 ಮಿಲಿಯನ್ ಜನಸಂಖ್ಯೆಯನ್ನು ಹೊಂದಿವೆ, ಮತ್ತು ಎರಡೂ ಚೀನಾದ ಮುಖ್ಯ ಭೂಭಾಗದೊಂದಿಗೆ ವ್ಯಾಪಾರ ಮತ್ತು ಸಾರಿಗೆ ಸಂಪರ್ಕವನ್ನು ಹೊಂದಿವೆ. ಚೀನಾದಲ್ಲಿ ಉಗಮವಾದ ಕೊರೊನಾ ಸೋಂಕು ಜಗತ್ತಿನ ಎಲ್ಲೆಡೆಯೂ ತನ್ನ ಕಬಂಧಬಾಹುವನ್ನು ಚಾಚಿ ಮರಣ ಮೃದಂಗ ಬಾರಿಸುತ್ತಿದ್ದರೆ, ತೈವಾನ್ ಕೊರೊನಾ ಸೋಂಕು ವೈರಸ್ ಅನ್ನು ನಿಯಂತ್ರಣದಲ್ಲಿಟ್ಟುಕೊಂಡಿದೆ.

ಫೀಲ್ಯಾಂಡ್
ಫೀಲ್ಯಾಂಡ್ ಪ್ರಧಾನಿ ಸನ್ನಾ ಮರಿನ್

ಇಲ್ಲಿಯವರೆಗೆ ವರದಿಯಾಗಿರುವ ಕೊರೊನಾ ಪ್ರಕರಣಗಳು 4740 ಮತ್ತು ಸಾವನ್ನಪ್ಪಿದವರ ಸಂಖ್ಯೆ 199. 2800 ಪ್ರಕರಣಗಳು ಗುಣಮುಖರಾಗಿದ್ದಾರೆ. ಕೊರೋನ ವೈರಸ್ ಸೋಂಕಿನ ಹರಡುವಿಕೆಯ ಪ್ರಮಾಣ ಫೀಲ್ಯಾಂಡ್ ನಲ್ಲಿ ತೀವ್ರವಾಗಿ ಕಡಿಮೆಯಾಗಿದ್ದು, ಇದು ಸರ್ಕಾರ ಜಾರಿಯಲ್ಲಿರುವ ನಿರ್ಬಂಧಗಳನ್ನು ಸಡಿಲಿಸಲು ಅವಕಾಶ ನೀಡಿದೆ.

ಇದು ಕೆಲವು ಉದಾಹರಣೆಗಳು ಅಷ್ಟೇ. ಜರ್ಮನಿಯಿಂದ ನ್ಯೂಜಿಲೆಂಡ್ ಮತ್ತು ಡೆನ್ಮಾರ್ಕ್‌ನಿಂದ ತೈವಾನ್‌ವರೆಗೆ ಮಹಿಳಾ ನಾಯಕತ್ವದ ರಾಷ್ಟ್ರಗಳು ಕೊರೋನ ವೈರಸ್ ಬಿಕ್ಕಟ್ಟನ್ನು ಸಮರ್ಥವಾಗಿ ನಿರ್ವಹಿಸಿದ್ದಾರೆ.

ShareTweetSendShare
Join us on:

Related Posts

ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್ ದುರಂತ

ವಿದ್ಯುತ್ ತಂತಿ ಮೇಲೆ ಬಿದ್ದ ಪ್ರವಾಸಿ ಬಸ್ ದುರಂತ

by Honnappa Lakkammanavar
October 4, 2023
0

ಪ್ರವಾಸಿಗರನ್ನು ಹೊತ್ತುಕೊಂಡು ಸಾಗುತ್ತಿದ್ದ ಬಸ್ ಉತ್ತರ ಇಟಲಿಯ ವೆನಿಸ್ ಹತ್ತಿರದ ಮೇಲ್ಸೇತುವೆಯಿಂದ ಉರುಳಿ ಬಿದ್ದ ಪರಿಣಾಮ 21 ಜನರು ಸಾವನ್ನಪ್ಪಿರುವ ಘಟನೆ ನಡೆದಿದೆ. ಇಟಲಿಯ ವೆನಿಸ್ ಹತ್ತಿರ...

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

ವಿಮಾನ ಪತನದಲ್ಲಿ ಉದ್ಯಮಿ ಸೇರಿ 6 ಮಂದಿ ದುರ್ಮರಣ

by Honnappa Lakkammanavar
October 3, 2023
0

ಜಿಂಬಾಬ್ವೆಯಲ್ಲಿ ವಿಮಾನ ಪತನವಾಗಿದ್ದು, ಭಾರತೀಯ ಗಣಿ ಉದ್ಯಮಿ ಸೇರಿದಂತೆ ಅವರ ಪುತ್ರ ಸೇರಿ 6 ಜನ ಸಾವನ್ನಪ್ಪಿರುವ ಘಟನೆ ನಡೆದಿದೆ. ನೈಋತ್ಯ ಜಿಂಬಾಬ್ವೆಯ ವಜ್ರದ ಗಣಿ ಬಳಿ...

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

ಟ್ರಕ್ ಅಪಘಾತಕ್ಕೆ 10 ಜನ ವಲಸಿಗರು

by Honnappa Lakkammanavar
October 2, 2023
0

ಮೆಕ್ಸಿಕೋ ಸಿಟಿ : ದಕ್ಷಿಣ ಮೆಕ್ಸಿಕನ್ (Mexico) ನ ಚಿಯಾಪಾಸ್‌ನಲ್ಲಿ ಸರಕು ಸಾಗಣೆ ವೇಳೆ ಟ್ರಕ್ ವೊಂದು ಅಪಘಾತವಾಗಿದ್ದು, 10 ಜನ ವಲಸಿಗರು ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಅಲ್ಲದೇ,...

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

ಪ್ರೀತಿಗಾಗಿ ಬಾಂಗ್ಲಾದಿಂದ ಬಂದ ಮಹಿಳೆಗೆ ಶಾಕ್!

by Honnappa Lakkammanavar
October 2, 2023
0

ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ, ಪ್ರೀತಿಸುತ್ತಿದ್ದ ವ್ಯಕ್ತಿ ಭೇಟಿಯಾಗಲು ಬಾಂಗ್ಲಾದೇಶದ 32 ವರ್ಷದ ಮೂರು ಮಕ್ಕಳ ತಾಯಿಯು ಉತ್ತರ ಪ್ರದೇಶದ ಶ್ರಾವಸ್ತಿ ಜಿಲ್ಲೆಗೆ ಬಂದು, ಆತನಿಗೂ ಮದುವೆಯಾಗಿದ್ದು ತಿಳಿಯುತ್ತಿದ್ದಂತೆ...

ಉಕ್ರೇನ್ ಶಾಂತಿಗಾಗಿ 180 ರಾಷ್ಟ್ರಗಳಿಂದ ಪ್ರಾರ್ಥನೆ

ಉಕ್ರೇನ್ ಶಾಂತಿಗಾಗಿ 180 ರಾಷ್ಟ್ರಗಳಿಂದ ಪ್ರಾರ್ಥನೆ

by Honnappa Lakkammanavar
October 1, 2023
0

ಬೆಂಗಳೂರು: ವಾಷಿಂಗ್ಟನ್‌ (Washington DC) ಡಿಸಿಯ ನ್ಯಾಷನಲ್‌ ಮಾಲ್‌ನಲ್ಲಿ ನಡೆಯುತ್ತಿರುವ ‘ವಿಶ್ವ ಸಾಂಸ್ಕೃತಿಕ ಉತ್ಸವ’ (World Culture Festival)ದಲ್ಲಿ 180 ದೇಶಗಳಿಂದ ಆಗಮಿಸಿದ್ದ ಜನರು, ಉಕ್ರೇನ್‌ನಲ್ಲಿ ಶಾಂತಿಗಾಗಿ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಮಹಾ ಸುದರ್ಶನ ಹೋಮಂ ಎಂದರೇನು..?? ಮತ್ತು ಅದರಿಂದಾಗುವ ಪ್ರಯೋಜನವೇನು…!!

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Quick Links

  • Home
  • About Us
  • Contact Us
  • Privacy Policy

Categories

  • Newsbeat
  • Samagra karnataka
  • National
  • Astrology
  • Politics
  • Cinema
  • Business

Categories

  • Crime
  • Culture
  • Health
  • International
  • Politics
  • TECHNOLOGY
  • Viral News

Recent News

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

ಪಿತೃಗಳು ಕನಸಿನಲ್ಲಿ ಕಾಣಿಸಿದರೆ ಏನಾಗುತ್ತೆ?

October 4, 2023
ಹಿರಿತೆರೆಯಲ್ಲಿ ಮತ್ತೆ ರಜನಿ -ಬಿಗ್ ಬಿ !

ಹಿರಿತೆರೆಯಲ್ಲಿ ಮತ್ತೆ ರಜನಿ -ಬಿಗ್ ಬಿ !

October 4, 2023
  • Home
  • About Us
  • Contact Us
  • Privacy Policy

© 2022 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2022 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram