ಬೆಂಗಳೂರು: ಮಕ್ಕಳಿಂದ ಹಿಡಿದು, ಯುವಕರು, ಮಧ್ಯವಯಸ್ಕರಿಗೂ ಹಾಟ್ ಫೇವರೇಟ್ ಹಾಲಿಡೇಸ್ ತಾಣವಾಗಿದ್ದ ವಂಡರ್ ಲಾ ಲಾಕ್ ಡೌನ್ ನಿಂದಾಗಿ ಬಂದ್ ಆಗಿದೆ. ಕೊರೊನಾ ಆತಂಕದ ನಡುವೆ ಇನ್ನೂವರೆಗೂ ವಂಡರ್ ಲಾ ಯಾವಾಗ ರಿ ಓಪನ್ ಆಗಲಿದೆ ಎಂಬುದರ ಬಗ್ಗೆ ಇನ್ನೂವರೆಗೂ ನಿರ್ದಾರವಾಗಿಲ್ಲ. ಇನ್ನೂ ಪ್ರವಾಸಿಗರಿಲ್ಲದೆ ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ವಂಡರ್ ಲಾ ಸಂಸ್ಥೆಗೆ ಬರೋಬ್ಬರಿ 14.51 ಕೋಟಿ ನಷ್ಟ ಆಗಿದೆ.
ಹಿಂದಿನ ಹಣಕಾಸು ವರ್ಷದಲ್ಲಿ ಮೊದಲ ತ್ರೈಮಾಸಿಕದಲ್ಲಿ 42.03 ಕೋಟಿ ಲಾಭ ಗಳಿಸಿತ್ತು. ಇನ್ನೂ ಮತ್ತೆ ವಂಡರ್ ಲಾದಲ್ಲಿ ಕಾರ್ಯಾಚರಣೆ ಆರಂಭಿಸುವ ಬಗ್ಗೆ ಕಂಪನಿಯ ವ್ಯವಸ್ಥಾಪಕ ನಿರ್ದೇಶಕ ಜಾರ್ಜ್ ಜೋಸೆಫ್ ತಮಾಹಿತಿ ನೀಡಿದ್ದು, ಶೀಘ್ರದಲ್ಲೇ ಪಾರ್ಕ್ ಓಪನ್ ಮಾಡಲು ಅನುಮತಿ ಸಿಗುವ ನಿರೀಕ್ಷೆಯಿದ್ದು, ಎಲ್ಲಾ ರೀತಿಯ ಸುರಕ್ಷತಾ ಮತ್ತು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದ್ದೇವೆ’ ಎಂದು ತಿಳಿಸಿದ್ದಾರೆ.
ಸಚಿವ ಕೆ ಎಚ್ ಮುನಿಯಪ್ಪ ವಿರುದ್ಧ ಕೆಪಿಸಿಸಿ ವಕ್ತಾರ ಲಕ್ಷ್ಮಣ್ ಕೆಂಗಣ್ಣು ಕೇಂದ್ರವನ್ನು ಓಲೈಸುವ ಬದಲು ಬಾಯಿ ಮುಚ್ಚಿಕೊಂಡಿರಿ ಎಂದು ಹಿಗ್ಗಾಮುಗ್ಗಾ ವಾಗ್ದಾಳಿ
ಬೆಂಗಳೂರು: ರಾಜ್ಯದಲ್ಲಿ ಎಲ್ಪಿಜಿ ಸಿಲಿಂಡರ್ ಹಾಗೂ ಆಟೋ ಗ್ಯಾಸ್ ಅಭಾವ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಸಾಮಾನ್ಯ ಜನತೆ ಮತ್ತು ಆಟೋ ಚಾಲಕರು ಕಂಗಾಲಾಗಿದ್ದಾರೆ. ಈ ಗಂಭೀರ ವಿಚಾರ...








