ವಿಲಕ್ಷಣ ಅಪರಾಧ ಪ್ರಕರಣಗಳು : LATEST NEWS
ಇನಿಯನ ಜೊತೆ ತಂದೆ ಕೈಗೆ ಸಿಕ್ಕಿಬಿದ್ದ ಪುತ್ರಿ : ತಲೆ ಕಡಿದು ಠಾಣೆವರೆಗೂ ಮೆರವಣಿಗೆ ಮಾಡಿದ ಅಪ್ಪ..!
ಇನಿಯನ ಜೊತೆ ತಂದೆ ಕೈಗೆ ಸಿಕ್ಕಿಬಿದ್ದ ಪುತ್ರಿ : ತಲೆ ಕಡಿದು ಠಾಣೆವರೆಗೂ ಮೆರವಣಿಗೆ ಮಾಡಿದ ಅಪ್ಪ..!
ಉತ್ತರಪ್ರದೇಶ: ಅಪರಾಧಗಳ ತವರಾಗುತ್ತಿರುವ ಉತ್ತರಪ್ರದೇಶದಲ್ಲಿ ಮತ್ತೊಮ್ಮೆ ಜನ ಬೆಚ್ಚಿ ಬೀಳುವಂತಹ ಪ್ರಕರಣ ಬೆಳಕಿಗೆ ಬಂದಿದೆ. ತಂದೆಯೊಬ್ಬ ತನ್ನ ಮಗಳ ತಲೆ ಕಡಿದು , ರುಂಡ ಹಿಡಿದು 2 ಕಿಲೋಮೀಟರ್ ನಡೆದು ಪೊಲೀಸ್ ಠಾಣೆಗೆ ಹೋಗಿ ಶರಣಾಗಿದ್ದಾನೆ. ಹರದೋಯಿ ಜಿಲ್ಲೆಯ ಮಾಜ್ ಹಿಲಾದಲ್ಲಿ ಇಂತಹದೊಂದು ಘಟನೆ ನಡೆದಿದೆ.
ಸರ್ವೇಶ್ ಕುಮಾರ್ ಎಂಬಾತ ತನ್ನ 17 ವರ್ಷದ ಮಗಳು ಬಾಯ್ ಫ್ರೆಂಡ್ ಜೊತೆಗಿದ್ದನ್ನ ನೋಡಿ ಕೋಪಗೊಂಡು ಈ ಕೃತ್ಯ ಎಸಗಿದ್ದಾನೆ. ಮಗಳ ರುಂಡವನ್ನು ಕತ್ತರಿಸಿ , ರುಂಡ ಹಿಡಿದು ನೇರವಾಗಿ ಠಾಣೆಗೆ ತೆರಳಿ ಪೊಲೀಸರಿಗೆ ಶರನಾಗಿದ್ದಾನೆ. ಈತನ ಕೈಲಿ ತಲೆ ಕತ್ತರಿಸಿದ ರುಂಡ ನೋಡಿ ಪೊಲೀಸರೇ ಒಂದು ಕ್ಷಣ ಶಾಕ್ ಆಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆತನನ್ನ ಅರೆಸ್ಟ್ ಮಾಡಿ ತನಿಖೆ ನಡೆಸುತ್ತಿದ್ದಾರೆ.
ಮುದ್ದು ಮಗನನ್ನ ಕೊಲ್ಲುವ ಮನಸ್ಸು ಹೇಗೆ ಬಂತು… ಈ ಪಾಪಿ ತಾಯಿಗೆ..!
ಇನಿಯನ ಜೊತೆ ಸೇರಿ ಹೆತ್ತ ಮಗನನ್ನೇ ಕೊಂದು ನದಿಗೆ ಎಸೆದ ಪಾಪಿ ತಾಯಿ..!
ಮಹಿಳೆಯೊಬ್ಬಳು ತನ್ನ ಸ್ವಂತ ಮಗನನ್ನೇ ಕೊಂದು ನದಿಗೆ ಎಸೆದಿದ್ದಾಳೆ. 6 ವರ್ಷದ ಜೇಮ್ಸ್ ಹಚಿನ್ಸನ್ ಮೃತ ದುರ್ದೈವಿಯಾಗಿದ್ದಾನೆ. 29 ವರ್ಷದ ಗೋಸ್ನೆ ಹೆತ್ತ ಮಗುವನ್ನೇ ಕೊಂದ ಪಾಪಿಯಾಗಿದ್ದಾಳೆ. ಈಕೆ ಜೇಮ್ಸ್ ಹ್ಯಾಮಿಲ್ಟನ್ ಎಂಬಾತನ ಜೊತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಈಕೆಗೆ ಮೂವರು ಮಕ್ಕಳಿದ್ದು, ಅದ್ರಲ್ಲಿ ಒಬ್ಬನ್ನನ್ನ ಕೊಂದು ಹಾಕಿದ್ದಾಳೆ.
ಇನ್ನೂ ಮಗನನ್ನು ಕೊಲೆ ಮಾಡುವುದಕ್ಕೆ ಈಕೆಯ ಬಾಯ್ ಫ್ರೆಂಡ್ ಒತ್ತಾಯ ಮಾಡುತ್ತಲೇ ಇದ್ದ. ಹೀಗಾಗಿ ಹೆತ್ತ ಕಂದಮ್ಮನ ಉಸಿರನ್ನೇ ನಿಲ್ಲಿಸಿರೋದಾಗಿ ಹೇಳಿಕೊಂಡಿದ್ದಾಳೆ ಆರೋಪಿ ತಾಯಿ.
ಇತ್ತೀಚೆಗೆ ಪಾರ್ಕ್ ಒಂದಕ್ಕೆ ಮಕ್ಕಳನ್ನ ಕರೆದುಕೊಂಡು ಹೋಗಿದ್ದ ಈಕೆ ಅಲ್ಲಿ ಜೇಮ್ಸ್ ನನ್ನ ಬಿಟ್ಟು ಬರಲು ಪ್ರಯತ್ನಿಸಿದ್ದಾಳೆ. ಆದರೂ ಮಗು ಓಡಿ ಬಂದು ಕಾರನ್ನ ಹತ್ತು ಪ್ರಯತ್ನ ಮಾಡಿದೆ. ಈ ವೇಳೆ ಮಗುವನ್ನ ಅಟ್ಟಾಡಿಸಿಕೊಂಡು ಹೋಗಿರುವ ರಾಕ್ಷಸಿ ತನ್ನ ಬಾಯ್ ಫ್ರೆಂಡ್ ಜೊತೆ ಸೇರಿ ಆತನನ್ನ ಕೊಲೆ ಮಾಡಿ ಬಳಿಕ ಮೃತದೇಹವನ್ನ ತೆಗೆದುಕೊಂಡು ನದಿಗೆ ಎಸಿದಿದ್ದಾಳೆ. ಇದಾದ ಬಳಿಕ ಈ ಇಬ್ಬರೂ ಸೇರಿ ಮಗು ಕಳೆದುಹಹೋಗಿರುವುದಾಗಿ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕೇಸ್ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿದ ವೇಳೆ ನಿಜಾಂಶ ಬಯಲಾಗಿದ್ದು, ಇಬ್ಬರನ್ನೂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಒಟ್ಟಾರೆ ತಾಯಿಯ ಹೆಸರಿಗೆ ಈಕೆ ಕಳಂಕ ಎಂಬಂತೆ ನಡೆದುಕೊಂಡಿದ್ದಾಳೆ. ಇತ್ತ ಒಬ್ಬ ಮಗ ಪ್ರಾಣ ಕಳೆದುಕೊಂಡಿದ್ರೆ ಇನ್ನಿಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಪ್ರೀತಿ ನಿರಾಕರಿಸಿದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕು ಇರಿದ ಭಗ್ನಪ್ರೇಮಿ..!
ಪ್ರೀತಿ ನಿರಾಕರಿಸಿದಕ್ಕೆ ಮನೆಗೆ ನುಗ್ಗಿ ಯುವತಿಗೆ ಚಾಕು ಇರಿದ ಭಗ್ನಪ್ರೇಮಿ..!
ಹೈದರಾಬಾದ್ : ಪ್ರೀತಿ ನಿರಾಕರಿಸಿದಕ್ಕೆ ಯುವತಿಯ ಮನೆಗೆ ನುಗ್ಗಿದ ಪಾಗಲ್ ಪ್ರೇಮಿ ಆಕೆಗೆ ಚಾಕು ಇರಿದಿರುವ ಘಟನೆ ಸೈಬರಾಬಾದ್ ನ ಲಕ್ಷ್ಮಿನಗರ ಕಾಲೋನಿಯಲ್ಲಿ ನಡೆದಿದೆ. ಸಾಫ್ಟ್ವೇರ್ ಎಂಜಿನಿಯರ್ ಆಗಿರುವ 29 ವರ್ಷದ ಯುವತಿ ಹಲ್ಲೆಗೊಳಗಾಗಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಆಕೆಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.
ಸಲ್ಮಾನ್ ಶಾರೂಖ್ ಎಂಬ ಈತ ಪ್ರೀತಿಸುವಂತೆ ಮಹಿಳೆಗೆ ಟಾರ್ಚರ್ ಕೊಡ್ತಿದ್ದ ಬಹಳ ದಿನಗಳಿಂದ ಆಕೆಯನ್ನ ಪಾಲೋ ಮಾಡ್ತಿದ್ದ. ಈ ಬಗ್ಗೆ ಮಹಿಳೆ ವಾರದ ಹಿಂದೆಯೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದಾದ ಬಳಿಕ ಮಹಿಳೆಯ ಫ್ಲಾಟ್ ಗೆ ನುಗ್ಗಿ ಚಾಕುವಿನಿಂದ ಇರಿದಿದ್ದಾನೆ.
ಅಂದ್ಹಾಗೆ ಮಹಿಳೆಗೆ ಈತ 2 ವರ್ಷಗಳಿಂದ ಪರಿಚಿತನಾಗಿದ್ದನಂತೆ. ಇತ್ತೀಚೆಗೆ ಪ್ರೇಮ ಪ್ರಸ್ತಾಪ ಮಾಡಿದ್ದು, ಆಕೆ ನಿರಾಕರಿಸಿದ್ದಾಳೆ. ಆಗಿನಿಂದಲೂ ಆಕೆಯನ್ನ ಪೀಡಿಸುತ್ತಲೇ ಇದ್ದ ಎನ್ನಲಾಗಿದೆ. ಈ ಸಂಬಂಧ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಭಗ್ನಪ್ರೇಮಿಯನ್ನ ಪೊಲೀಸರು ಬಂಧಿಸಿದ್ದಾರೆ.
ಮಹಿಳೆಯನ್ನು ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ರೈಲ್ವೇ ಪೊಲೀಸ್..!
ಮಹಿಳೆಯನ್ನು ಉಳಿಸಲು ಹೋಗಿ ಪ್ರಾಣ ಕಳೆದುಕೊಂಡ ರೈಲ್ವೇ ಪೊಲೀಸ್..!
ಉತ್ತರ ಪ್ರದೇಶ: ರೈಲ್ವೇ ನಿಲ್ದಾಣದಲ್ಲಿ ಅನೇಕರ ನಿರ್ಲಕ್ಷ್ಯ, ಆಕಸ್ಮಿಕವಾಗಿ ಬೀಳುವುದು, ಹುಚ್ಚು ಸಾಹಸ ಮಾಡಲು ಹೋಗಿ ಅನೇಕರು ಪ್ರಾಣ ಕಳೆದುಕೊಂಡಿದ್ದಾರೆ. ಆದ್ರೆ ಇಂತಹ ಹಲವರ ಜೀವಗಳನ್ನ ರೈಲ್ವೇ ರಕ್ಷಣಾ ಸಿಬ್ಬಂದಿಗಳು ಉಳಿಸಿರುವುದು ಗೊತ್ತಿದೆ. ಆದ್ರೆ ಉತ್ತರಪ್ರದೇಶದಲ್ಲಿ ರೈಲಿನಡಿ ಸಿಲುಕಬೇಕಿದ್ದ ಮಹಿಳೆಯ ಪ್ರಾಣ ಉಳಿಸಲು ಹೋಗಿ ಪೊಲೀಸ್ ಅಧಿಕಾರಿಯೊಬ್ಬರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.
ಹಳಿ ದಾಟುತ್ತಿದ್ದ ಮಹಿಳೆಯನ್ನು ರಕ್ಷಿಸಲು ಹೋದ ಆರ್ ಪಿ ಎಫ್ ಹೆಡ್ ಕಾನ್ ಸ್ಟೇಬಲ್ ಪ್ರಾಣ ಕಳೆದುಕೊಂಡ ದಾರುಣ ಘಟನೆ ಉತ್ತರ ಪ್ರದೇಶದ ಕೊಖರಾಜ್ ಪ್ರದೇಶದ ಭಾರ್ವರಿ ರೈಲ್ವೆ ನಿಲ್ದಾಣದಲ್ಲಿ ನಡೆದಿದೆ. ನಿರ್ಮಲಾ ದೇವಿ ಎಂಬಾಕೆ ಹಳಿ ದಾಟುತ್ತಿದ್ದ ವೇಳೆ ರೈಲು ಬರುತ್ತಿರುವದನ್ನು ಗಮಿನಿಸಿದ ಹೆಡ್ ಕಾನ್ ಸ್ಟೆಬಲ್ ಗ್ಯಾನ್ ಚಂದ್ ಅವರು ಮಹಿಳೆಯನ್ನು ರಕ್ಷಿಸಲು ಹೋಗಿದ್ದಾರೆ. ಈ ವೇಳೆ ರೈಲು ಡಿಕ್ಕಿ ಹೊಡೆದು ಮೃತಪಟ್ಟಿದ್ದಾರೆ. ಘಟನೆಯಲ್ಲಿ ಮಹಿಳೆ ಸಹ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಅವರಿಗೆ ಚಿಕಿತ್ಸೆ ನೀಡಲಾಗ್ತಿದೆ.