ನಿಮಗೆ ಕಣ್ಣು, ಹೃದಯ ಇದಿಯಾ..? : ಸರ್ಕಾರಕ್ಕೆ “ಬಂಡೆ” ಡಿಚ್ಚಿ
ಹುಬ್ಬಳ್ಳಿ : ರೈತರಿಗೆ ತರಕಾರಿ ಮಾರಾಟ ಮಾಡೋಕೆ ಕೇವಲ ಎರಡೂ ಗಂಟೆ ಅವಕಾಶ ನೀಡ್ತಾರೆ. ಆದ್ರೆ ಲಿಕ್ಕರ್ ಮಾರೋಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡ್ತಿರಿ ಎಂದು ರಾಜ್ಯ ಸರ್ಕಾರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಿಡಿಕಾರಿದ್ದಾರೆ.
ಹುಬ್ಬಳ್ಳಿಉಲಿಲ ಮತನಾಡಿದ ಅವರು ಡಿ ಕೆ ಶಿವಕುಮಾರ್, ರೈತರನ್ನ ಸಮಸ್ಯೆ ಅಲಿಸೋಣ ಅಂತ ಅವರ ಜಮೀನಿಗೆ ಬಂದಿದ್ದೇನೆ. ಇಲ್ಲಿಯವರೆಗೂ ಸರ್ಕಾರ ನೀಡಿದ ಪರಿಹಾರ ರೈತರಿಗೆ ಸಿಕ್ಕಿಲ್ಲ. ರೈತರಿಗೆ ತರಕಾರಿ ಮಾರಾಟ ಮಾಡೋಕೆ ಕೇವಲ ಎರಡೂ ಗಂಟೆ ಅವಕಾಶ ನೀಡ್ತಾರೆ. ಆದ್ರೆ ಲಿಕ್ಕರ್ ಮಾರೋಕೆ ಸಂಜೆ 4 ಗಂಟೆಯವರೆಗೂ ಅವಕಾಶ ನೀಡ್ತಿರಿ. ನಿಮಗೆ ಕಣ್ಣು,ಹೃದಯ ಇದಿಯಾ..? ಮುಖ್ಯಮಂತ್ರಿಗಳೇ ಈ ಬಗ್ಗೆ ಗಮನ ಕೊಡಿ. ನಿಮ್ಮ ಅಧಿಕಾರ ಏನು ನಡೆಯುತ್ತಿಲ್ಲ. ನಾನು ಹೇಳಿದ ಮೇಲೆ ಕೆಲವು ಮಿನಿಸ್ಟರ್ ಗಳನ್ನ ಜಿಲ್ಲೆಗೆ ಕಳಿಸಿದ್ರಿ ಎಂದು ಕಿಡಿಕಾರಿದರು.
ಇನ್ನು ನಾವು ರೈತರ ಜೊತೆ ನಿಲ್ಲುತ್ತೇವೆ. ಲಾಕ್ ಡೌನ್ ವಿಸ್ತರಣೆ ಬಗ್ಗೆ ನಾನೇನು ಹೇಳಲಾರೆ. ಅದು ಸರ್ಕಾರದ ನಿರ್ಧಾರ, ಅವರೇನಾದ್ರು ಮಾಡಿಕೊಳ್ಳಲಿ. ನನಗೆ ಸರ್ಕಾರ ಕೇಳಿದ್ರೆ ನನ್ನ ಅಭಿಪ್ರಾಯ ಹೇಳ್ತೀನಿ, ಆವಾಗ ಉತ್ತರ ಕೊಡ್ತೀನಿ. ಈಗ ನಾನು ಜನರ ಹತ್ತಿರ ಬಂದಿದ್ದೇನೆ.
ಬಗ್ಗೆ ಮಾತ್ರ ಮಾತನಾಡುತ್ತೇನೆ ಎಂದರು.
.