ಕೊರೊನಾ ಮಾರ್ಗಸೂಚಿ ಎಲ್ಲರಿಗೂ ಅನ್ವಯ ಆಗ್ಬೇಕು : ಡಿ.ಕೆ.ಶಿವಕುಮಾರ್
ಬೆಂಗಳೂರು : ಕೊರೊನಾ ಮಾರ್ಗಸೂಚಿ ಎಲ್ಲರಿಗೂ ಅನ್ವಯ ಆಗಬೇಕು ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಒತ್ತಾಯಿಸಿದ್ದಾರೆ.
ಕೊರೊನಾ ಮಾರ್ಗಸೂಚಿ ವಿಚಾರವಾಗಿ ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೆಸ್ ಅಧ್ಯಕ್ಷ, ಮಾರ್ಗ ಸೂಚಿ ಏನು ಬೇಕಾದ್ರೂ ಮಾಡಲಿ.
ಮಾರ್ಗಸೂಚಿ ಎಲ್ಲರಿಗೂ ಅನ್ವಯ ಆಗಬೇಕು. ಬೇಕಾದವರಿಗೆ ಅನುಕೂಲ, ಅನಾನುಕೂಲ, ಪ್ರತಿಭಟನೆ ನಿಲ್ಲಿಸಲು ಮಾಡೋದಲ್ಲ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಇನ್ನು ಎಲ್ಲರಿಗೂ ಒಂದೇ ರೀತಿಯಲ್ಲಿ ಮಾರ್ಗ ಸೂಚಿ ಇರಲಿ. ಕಾನೂನು ಮಾಡಲಿ ಜನರಿಗೆ ಸುರಕ್ಷೆ. ಎಲ್ಲರೂ ಅನುಸರಿಸಬೇಕು ನಾನು, ನೀವು ಎಲ್ಲರೂ ಅನುಸರಿಸಬೇಕು.
ಅವರಿಗೆ ಬೇಕಾದಾಗ ಸಡಿಲ ಮಾಡೋದು, ಬೇಡ ಅಂದಾಗ ಮಾಡೋದು ಬೇಡ ಎಂದು ಟ್ರಬಲ್ ಶೂಟರ್ ಹೇಳಿದ್ದಾರೆ.