ಶಾಸಕ ರವಿಸುಬ್ರಹ್ಮಣ್ಯ ಮೇಲೆ ಹಣ ಪಡೆದು ಲಸಿಕೆ ಪೂರೈಕೆ ಆರೋಪ – ಡಿಸಿಎಂ ಸಮರ್ಥನೆ
ಶಾಸಕ ರವಿಸುಬ್ರಹ್ಮಣ್ಯ ಮೇಲೆ ಹಣ ಪಡೆದು ಲಸಿಕೆ ಪೂರೈಸುತ್ತಿರೋ ಆರೋಪ ಕೇಳಿಬಂದಿದೆ. ಪ್ರತೀ ವ್ಯಕ್ತಿಯಿಂದ 700ರೂ ಪಡೆದು ಲಸಿಕೆ ಹಾಕಿಸುತ್ತಿರುವುದಾಗಿ ಆರೋಪ ಕೇಳಿಬಂದಿದೆ. ಹಣ ಕೊಟ್ಟವರಿಗೆ ಕೂಪನ್ ನೀಡಿ, ಲಸಿಕೆ ಹಾಕಿಸುತ್ತಿದ್ದಾರೆ ಎನ್ನಲಾಗಿದೆ.
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಡಿಸಿಎಂ ಅಶ್ವಥ್ ನಾರಾಯಣ್ ಅವರು ಕೋವಿಶೀಲ್ಡ್ 600ರೂಗೆ ಖರೀದಿಯಾಗುತ್ತಿದೆ. ಕೋ ವ್ಯಾಕ್ಸಿನ್ 880 ರೂಗೆ ಖರೀದಿಯಾಗುತ್ತದೆ. ಜೊತೆಯಲ್ಲಿ 200ರೂ ವ್ಯಾಕ್ಸಿನೇಟಿಂಗ್ ಚಾರ್ಜ್ ಮಾಡಲಾಗುವುದು. ಕಂಪನಿಯವರು ಖಾಸಗಿಯವರಿಗೆ ಮಾರಾಟ ಮಾಡುವುದು ಈ ದರಕ್ಕೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಯಾರಿಗೆ ಲಸಿಕೆ ಹಾಕಿಸಿದ್ರೂ 200ರೂ ತೆಗೆದುಕೊಳ್ತೇವೆ ಎಂದು ಡಿಸಿಎಂ ಅಶ್ವಥ್ ನಾರಾಯಣ್ ಅವರು ಶಾಸಕ ರವಿಸುಬ್ರಹ್ಮಣ್ಯ ನಡೆ ಸಮರ್ಥಿಸಿಕೊಂಡಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.