ಕಾರವಾರ: ವ್ಯಕ್ತಿಯೊಬ್ಬ ಫಕೀರನ ವೇಷದಲ್ಲಿ ಜನರಿಗೆ ಮೋಸ ಮಾಡಿರುವ ಘಟನೆ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಯುವಕರಿಬ್ಬರನ್ನು ಪೊಲೀಸರಿಗೆ ಜನರು ಹಿಡಿದುಕೊಟ್ಟಿದ್ದಾರೆ. ಈ ಘಠನೆ ಉತ್ತರಕನ್ನಡ ಜಿಲ್ಲೆಯ ದಾಂಡೇಲಿಯ ಗಾಂಧಿನಗರದಲ್ಲಿ ನಡೆದಿದೆ
ಮುಂಬಯಿ ಮೂಲದ ಯುವಕರಾದ ಅರುಣ್ ಹಾಗೂ ವಿಷ್ಣು ವೇಷ ಧರಿಸಿ ಮನೆ ಮನೆ ಸುತ್ತಾಡುತ್ತಾ ಜನರಿಗೆ ಮೋಸ ಮಾಡುತ್ತಿದ್ದರು ಎನ್ನಲಾಗಿದೆ. ಸಮಸ್ಯೆಯಲ್ಲಿದ್ದ ಜನರನ್ನು ಗುರುತಿಸಿ, ವಿವಿಧ ಸಮಸ್ಯೆ ಹೇಳಿಕೊಂಡು ಹಣ ಕೀಳುತ್ತಿದ್ದರು ಎನ್ನಲಾಗಿದೆ.
ಯುವಕರ ಮೇಲೆ ಸಂಶಯಗೊಂಡ ದಾಂಡೇಲಿಯ ದಾದಾ ಪೀರ್ ನದಿಮುಲ್ಲಾ ಇಬ್ಬರನೆ ನಡೆಸಿದ್ದಾರೆ. ಆಗ ಸತ್ಯ ಸಂಗತಿ ಗೊತ್ತಾಗಿದೆ. ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸದ್ಯ ಆರೋಪಿಗಳನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.