ಮಹಿ ಬೈಗುಳಗಳೇ ನನ್ನ ಬೆಳವಣಿಗೆಗೆ ಕಾರಣ
ನವದೆಹಲಿ : ಮುಂಬರುವ ಶ್ರೀಲಂಕಾ ಪ್ರವಾಸಕ್ಕಾಗಿ ವೈಟ್ ಬಾಲ್ ತಂಡದಲ್ಲಿ ಅವಕಾಶ ಪಡೆಯಲು ಮುಂಚೂಣಿಯಲ್ಲಿರುವ ಭಾರತ ತಂಡದ ಬೌಲರ್ ದೀಪಕ್ ಚಹಾರ್, ತಾವೂ ಪವರ್ ಪ್ಲೇ ಬೌಲರ್ ಆಗಿ ಯಶಸ್ವಿಯಾಗಲು ಎಂಎಸ್ ಧೋನಿ ಕಾರಣ ಎಂದು ಹೇಳಿದ್ದಾರೆ.ಮಹಿ ಭಾಯ್ ನನ್ನನ್ನು ಪವರ್ ಪ್ಲೇ ಬೌಲರ್ ಆಗಿ ಮಾಡಿದರು. ಅವರ ಯಾವಾಗಲೂ ನನ್ನನ್ನು’ನೀನು ನನ್ನ ಪವರ್ ಪ್ಲೇ ಬೌಲರ್’ ಎಂದು ಹೇಳುತ್ತಿರುತ್ತಾರೆ. ಅವರು ಬಹುಪಾಲು ಪಂದ್ಯಗಳಲ್ಲಿ ನನಗೆ ಮೊದಲ ಓವರ್ ಬೌಲಿಂಗ್ ಮಾಡಲು ಕೊಡುತ್ತಾರೆ.ನಾನು ಅವರಿಂದ ಸಾಕಷ್ಟು ಬಾರಿ ಬೈಯಿಸಿಕೊಂಡಿದ್ದೇನೆ. ಆದರೆ, ಅವರ ಆ ಮಾತುಗಳು ಮತ್ತು ಮಾರ್ಗದರ್ಶನವೇ ನನ್ನ ಬೆಳವಣಿಗೆಗೆ ಸಹಕಾರಿಯಾಗಿದೆ ಎಂದು ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ಚಹಾರ್ ಹೇಳಿದ್ದಾರೆ.ಮುಂದೂಡಲ್ಪಟ್ಟಿರುವ ಐಪಿಎಲ್ನಲ್ಲಿ ಚಹಾರ್ ಹೊಸ ಬಾಲಿನಲ್ಲಿ ಹೆಚ್ಚು ಬೌಲಿಂಗ್ ಮಾಡಿದ್ದಾರೆ. ಅವರು 4 ವಿಕೆಟ್ ಗೊಂಚಲು ಸೇರಿದಂತೆ ಕೆಲ ಪಂದ್ಯಗಳಲ್ಲಿ ವಿಕೆಟ್ ಪಡೆದಿದ್ದಾರೆ.
ಕೊರೊನ ಮಹಾಮಾರಿ:
ಕೊರೊನ ವೈರಸ್ ಹರಡಲು ಬೇಕಾಗಿರುವುದು ನಮ್ಮ ಸಹಾಯ ಆದರೆ ಹರಡದಂತೆ ಮಾಡಬೇಕಾಗಿರುದು ನಮ್ಮ ಸಹಕಾರ”.
ತಪ್ಪದೇ ಹೊರಗೆ ಹೋದಾಗ ಸ್ವಚ್ಛವಾದ ಮಾಸ್ಕ ಧರಿಸಿ.
ಸಾರ್ವಜನಿಕ ಸ್ಥಳಗಳಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಿ .
ಜನ ನಿಬಿಡ ಪ್ರದೇಶದಿಂದ ದೂರವಿರಿ.
ಮನೆ ಸಮೀಪದ ಅಂಗಡಿಯಲ್ಲಿ ಫೋನ್ ಮೂಲಕ ತಮಗೆ ಬೇಕಾದ ದಿನಸಿ ಮತ್ತು ಇತರ ವಸ್ತುಗಳನ್ನು ಪಟ್ಟಿ ಮಾಡಿ ನಿರ್ದಿಷ್ಟ ಸಮಯ ಗೊತ್ತು ಮಾಡಿ.
ನಿಮ್ಮ ಮನೆಗೆ ನೀವೇ ಲಕ್ಷ್ಮಣ ರೇಖೆ ಸೃಷ್ಟಿ ಮಾಡಿ.
ಅನಗತ್ಯ ಓಡಾಟ ಸಲ್ಲದು. ಹೊರಗಡೆ ಹೋಗಿ ಬಂದ ಮೇಲೆ ಬಟ್ಟೆ ಬದಲಾಯಿಸಿ ಸ್ನಾನ ಮಾಡಿ.
ನಮ್ಮ ಹೋರಾಟ ಕೊರೊನ ನಿರ್ಮೂಲನೆಯತ್ತ.
ಇದು ಸಾಕ್ಷ ಟಿವಿಯ ಕಳಕಳಿಯ ವಿನಂತಿ.