ಜಿಲ್ಲಾಧಿಕಾರಿಗಳು ಕಮಾಂಡರ್ ತರ ಕೆಲಸ ಮಾಡಬೇಕು : ಮೋದಿ
ಉಡುಪಿ : ಜಿಲ್ಲಾಧಿಕಾರಿ ಕಮಾಂಡರ್ ತರ ಕೆಲಸ ಮಾಡಬೇಕು. ಎಲ್ಲಾ ಮೇಲ್ವಿಚಾರಣೆ ಡಿಸಿಗಳ ಜವಾಬ್ದಾರಿ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
ಕೊರೊನಾ ನಿರ್ವಹಣೆ ಕುರಿತು ಪ್ರಧಾನಿ ನರೇಂದ್ರ ಮೋದಿ ಎಲ್ಲಾ ರಾಜ್ಯಗಳ ಜಿಲ್ಲಾಧಿಕಾರಿಗಳ ಜೊತೆ ವಿಡಿಯೋ ಕಾನ್ಫರೆನ್ಸ್ ಚರ್ಚೆ ನಡೆಸಿದರು. ಇದರಲ್ಲಿ ಉಡುಪಿ ಜಿಲ್ಲಾಧಿಕಾರಿಗಳು ಕೂಡ ಭಾಗಿಯಾಗಿದ್ದು, ಜಿಲ್ಲೆಯಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಪ್ರಧಾನಿಗಳಿಗೆ ಮಾಹಿತಿ ನೀಡಿದರು.
ಈ ವೇಳೆ ಪ್ರಧಾನಿಗಳು, ಜಿಲ್ಲಾಧಿಕಾರಿ ಕಮಾಂಡರ್ ತರ ಕೆಲಸ ಮಾಡಬೇಕು. ಎಲ್ಲಾ ಮೇಲ್ವಿಚಾರಣೆ ಡಿಸಿಗಳ ಜವಾಬ್ದಾರಿ. ಜನಪ್ರತಿನಿಧಿಗಳ ಕಮಿಟಿ ಮಾಡಿ. ಗ್ರಾಮ ಮಟ್ಟದಿಂದ ಟಾಸ್ಕ್ ಫೋರ್ಸ್ ಮಾಡಿ. ಕೊರೊನಾ ಜಾಗೃತಿ, ವ್ಯಾಕ್ಸಿನೇಶನ್ ಸೇರಿದಂತೆ ಸಮಗ್ರ ಮಾಹಿತಿ ತಲುಪಬೇಕು.
ಅಗತ್ಯ ಬಿದ್ದಲ್ಲಿ ಕಾರ್ ಆಂಬುಲೆನ್ಸ್ ಸಿದ್ಧಪಡಿಸಿಟ್ಟುಕೊಳ್ಳಿ. ಆಂಬುಲೆನ್ಸ್ ಕೊರತೆ ಆಗದಂತೆ ನೋಡಿಕೊಳ್ಳಿ. ಕೊರೊನಾ ಮುಕ್ತ ಗ್ರಾಮ ನಿಮ್ಮ ಮೊದಲ ಆದ್ಯತೆಯಾಗಲಿ. ಪಂಚಾಯತ್ ಸದಸ್ಯನಿಂದ ಸಂಸದರ ತನಕ ಕೊರೊನಾ ವಿರುದ್ಧ ಹೋರಾಟಕ್ಕೆ ಶ್ರಮಿಸಬೇಕು ಎಂದರು.
ಇನ್ನು ಕಂಟೈನ್ಮೆಂಟ್ ಜೋನ್ ಹೆಚ್ಚು ಹೆಚ್ಚು ಮಾಡಿ. ಹೆಚ್ಚು ಹೆಚ್ಚು ಟೆಸ್ಟ್ ಮಾಡಿ.. ಚೈನ್ ಕಟ್ ಮಾಡಿ. ಫ್ರಂಟ್ ಲೈನ್, ಡಾಕ್ಟರ್, ಪೊಲೀಸ್ ಮಾಧ್ಯಮ ಜೊತೆ ಚೆನ್ನಾಗಿ ಸಮನ್ವಯ ಮಾಡಿ ಎಂದು ಸಲಹೆ ನೀಡಿದರು.
ಕೊರೊನಾ ಹತೋಟಿಗೆ ಬರುವವರೆಗೆ ವಿಶ್ರಾಂತಿ ಮಾಡಬೇಡಿ. ಕೊರೋನಾ ಜೊತೆ ಯುದ್ಧ ಘೋಷಣೆಯಾಗಿದೆ. ಇದು ವಿಶ್ರಾಂತಿ ಕಾಲ ಅಲ್ಲ. ಜನರ ಆರೋಗ್ಯ ಮುಖ್ಯ. ಕಾಳಜಿಯಿಂದ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳಿಗೆ ಸಲಹೆ ನೀಡಿದರು.