ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಗೌತಮ್ ಗಂಭೀರ್ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಅವರ ಮುಂದೆ ಸಾಕಷ್ಟು ಸವಾಲು ಹಾಗೂ ನಿರೀಕ್ಷೆಗಳ ಭಾರವೇ ಇದೆ.
2003ರಿಂದ 2016ರ ವರೆಗೆ ಭಾರತ ಕ್ರಿಕೆಟ್ ತಂಡದ ಆರಂಭಿಕ ಬ್ಯಾಟರ್ ಆಗಿ ಗಮನ ಸೆಳೆದಿದ್ದ ಗೌತಮ್ ಗಂಭೀರ್ ಭಾರತ ತಂಡ ಎರಡು ವಿಶ್ವಕಪ್ ಗೆಲ್ಲುವಲಿ ಪ್ರಮುಖ ಪಾತ್ರ ವಹಿಸಿದ್ದರು. 2007ರ ಐಸಿಸಿ ಟಿ20 ವಿಶ್ವಕಪ್ ಫೈನಲ್ ಹಾಗೂ 2011ರ ಐಸಿಸಿ ಏಕದಿನ ವಿಶ್ವಕಪ್ ಫೈನಲ್ನಲ್ಲಿ ಟೀಂ ಇಂಡಿಯಾ ಪರ ಗರಿಷ್ಠ ರನ್ ಬಾರಿಸುವ ಮೂಲಕ ಭಾರತ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ದಶಕಗಳ ಕಾಲ ಭಾರತ ತಂಡವನ್ನು ಪ್ರತಿನಿಧಿಸಿದ್ದು, ಲೋಕಸಭಾ ಸಂಸದರಾಗಿಯೂ ಗಂಭೀರ್ ಸೈ ಎನಿಸಿಕೊಂಡಿದ್ದರು. ಸ್ಪೋರ್ಟ್ಸ್ಕೀಡಾ ವರದಿಯಂತೆ, ಗೌತಮ್ ಗಂಭೀರ್ ಅವರ ಒಟ್ಟು ಸಂಪತ್ತು ಬರೋಬ್ಬರಿ 205 ಕೋಟಿ ರುಪಾಯಿಗಳಾಗಿವೆ.
ಕೋಲ್ಕತಾ ನೈಟ್ ರೈಡರ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಕಳೆದ ಐಪಿಎಲ್ ವೇಳೆ 25 ಕೋಟಿ ರುಪಾಯಿ ಗಳಿಸಿದ್ದರು. ಲು ಲಖನೌ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದಾಗ ಒಂದು ಸೀಸನ್ಗೆ 3.5 ಕೋಟಿ ರುಪಾಯಿ ಗಳಿಸುತ್ತಿದ್ದರು ಎಂದು ವರದಿಯಾಗಿದೆ. ಕ್ರಿಕೆಟ್ ನಿಂದ ನಿವೃತ್ತಿಯಾದ ಬಳಿಕ ಗಂಭೀರ್ 2019ರಲ್ಲಿ ರಾಜಕೀಯಕ್ಕೆ ಎಂಟ್ರಿಕೊಟ್ಟರು. 2019ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದು ಡೆಲ್ಲಿ ಪಶ್ಚಿಮ ಕ್ಷೇತ್ರದಿಂದ ಸಂಸದರಾಗಿದ್ದರು.
ಕ್ರೀಡಾ ಚಾನೆಲ್ನಲ್ಲಿ ವೀಕ್ಷಕ ವಿವರಣೆಗಾರರಾಗಿ ವಾರ್ಷಿಕ 1.5 ಕೋಟಿ ರುಪಾಯಿ ಸಂಪಾಧಿಸುತ್ತಿದ್ದರು. ದೆಹಲಿಯಲ್ಲಿ 20 ಕೋಟಿ ರುಪಾಯಿ ಮೌಲ್ಯದ ಐಶಾರಾಮಿ ಮನೆಯಲ್ಲಿ ತಮ್ಮ ಪತ್ನಿ ಹಾಗೂ ಮತ್ತಿಬ್ಬರು ಮಕ್ಕಳ ಜತೆ ವಾಸವಾಗಿದ್ದಾರೆ. ಎರಡು ಪ್ರಾಪರ್ಟಿಗಳು ಗಂಭೀರ್ ಹೆಸರಿನಲ್ಲಿವೆ.








