ಹೂವಿನ ಮಹತ್ವ ಅನಾದಿ ಕಾಲದಿಂದಲೂ ದೇವರನ್ನು ಪೂಜಿಸಲು ಹೂವನ್ನು ಬಳಸಲಾಗುತ್ತದೆ. ಹಿಂದೂ ಧರ್ಮದಲ್ಲೊಂದೇ ಅಲ್ಲ, ಜಗತ್ತಿನ ಬಹುತೇಕ ಎಲ್ಲ ಧರ್ಮಗಳಲ್ಲೂ ಪೂಜೆಗೆ ಹೂವು ಬಳಸುತ್ತಾರೆ. ದೇವರ ಮೂರ್ತಿಗಳಿಲ್ಲದ ಧರ್ಮಗಳಲ್ಲೂ ಪೂಜೆಯಲ್ಲಿ ಹೂವು ಮಾತ್ರ ಇದ್ದೇ ಇರುತ್ತದೆ.
ಹಿಂದೂ ಪೂಜಾ ವಿಧಿ ವಿಧಾನಗಳ ಸಂದರ್ಭದಲ್ಲಿ ಹೂವುಗಳಿಗೆ ಪ್ರತ್ಯೇಕ ಸ್ಥಾನವಿದೆ. ದೇವರಿಗೆ ಹೂವುಗಳನ್ನು ಅರ್ಪಿಸದೆಯೇ ಪೂಜಾ ಸಂಪನ್ನಗೊಳ್ಳುವುದಿಲ್ಲ. ಆದರೆ ಯಾವ ದೇವರಿಗೆ ಯಾವ ಹೂವು ಇಷ್ಟ ಎಂಬುದನ್ನು ಮೊದಲೇ ಅರಿತುಕೊಂಡು ಪೂಜೆಯನ್ನು ಸಲ್ಲಿಸಿದರೆ ದೇವರ ಅನುಗ್ರಹಕ್ಕೆ ನಾವು ಶೀಘ್ರವೇ ಪಾತ್ರರಾಗುತ್ತವೇ. ಅದಕ್ಕೆಂದೇ ಇಂದಿನ ಲೇಖನದಲ್ಲಿ ಯಾವ ಹೂವನ್ನು ಯಾವ ದೇವರಿಗೆ ಅರ್ಪಸಿಲಾಗುತ್ತದೆ ಎಂಬುದನ್ನು ತಿಳಿದುಕೊಳ್ಳಲಿದ್ದೇವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಹೂವುಗಳು ಪ್ರಕೃತಿಯಲ್ಲಿ ಸಿಗುವ ಅತ್ಯಂತ ಸುಂದರ ವಸ್ತುಗಳು. ದೇವರನ್ನು ಮೆಚ್ಚಿಸಲು ಉತ್ಕೃಷ್ಟವಾದದ್ದನ್ನೇ ಆತನಿಗೆ ನೀಡಬೇಕಲ್ಲವೆ? ಎಲ್ಲ ಧರ್ಮಗಳೂ ಪ್ರಕೃತಿಯನ್ನು ದೇವರೆಂದೇ ಪರಿಗಣಿಸುವುದರಿಂದ, ಪ್ರಕೃತಿದತ್ತವಾದ ಪುಷ್ಪಗಳು ದೇವರನ್ನು ಆರ್ಕಸುತ್ತವೆ ಎಂದೂ ನಂಬುತ್ತೇವೆ. ಪೂಜೆಯ ವೇಳೆ ಭೂಮಿಗಿಳಿದು ಬರುವ ದೇವತೆಗಳು ಯಾವ ಸ್ಥಳದಿಂದ ಸುವಾಸನೆ ಬರುತ್ತಿದೆಯೋ, ಯಾವ ಸ್ಥಳ ಅತ್ಯಂತ ಸುಂದರವಾಗಿದೆಯೋ ಅಲ್ಲಿಗೇ ಬರುತ್ತಾರೆ ಎಂಬ ನಂಬಿಕೆ ಆಸ್ತಿಕರಲ್ಲಿದೆ. ಹೂವುಗಳನ್ನು ಎಲ್ಲಿ ಬಳಸಿದರೂ ಆ ಸ್ಥಳ ಸುಂದರವಾಗಿಯೇ ಕಾಣಿಸುತ್ತದೆ ಮತ್ತು ಅಲ್ಲಿ ಸುವಾಸನೆ ಹರಡಿರುತ್ತದೆ. ಒಟ್ಟಿನಲ್ಲಿ ಪೂಜಾಸ್ಥಳ ಪರಿಮಳದಿಂದ ಕೂಡಿರಬೇಕು, ಭಕ್ತನ ಮನಸ್ಸಿನಲ್ಲಿ ಏಕಾಗ್ರತೆ ಮೂಡಿಸಬೇಕು, ಮನಸ್ಸನ್ನು ಪ್ರಶಾಂತಗೊಳಿಸಬೇಕು ಮತ್ತು ಬೇಡದ ಯೋಚನೆಗಳನ್ನು ಮನಸ್ಸಿನಿಂದ ಹೊರಹಾಕಬೇಕು ಎಂಬುದು ಪೂಜೆಗೆ ಹೂವುಗಳನ್ನು ಬಳಸುವುದಕ್ಕೆ ಮುಖ್ಯ ಕಾರಣ.
ಪೂಜೆಗೆ ಹೂವು ಏಕೆ ಅತಿ ಮುಖ್ಯ
ವಾತಾವರಣದಲ್ಲಿ, ನಿರ್ದಿಷ್ಟ ದೇವರುಗಳು ಕೆಲವೊಂದು ಹೂವುಗಳಿಗೆ ಆಕರ್ಷಿತರಾಗಿರುತ್ತಾರೆ. ಅವರುಗಳು ಆವರ್ತನೆಗಳನ್ನು ಸ್ವೀಕರಿಸಿದಾಗ ಅದನ್ನು ಮರಳಿ ವಾತಾವರಣಕ್ಕೆ ಕಳುಹಿಸುತ್ತಾರೆ ಇದನ್ನು “ಪವಿತ್ರಕ” ಎಂದು ಕರೆಯಲಾಗುತ್ತದೆ. ಇದನ್ನು ಇನ್ನಷ್ಟು ವಿವರವಾಗಿ ತಿಳಿದುಕೊಳ್ಳಲು ದಾಸವಾಳ ಹೂವನ್ನು ಪರಿಗಣನೆಗೆ ತೆಗೆದುಕೊಳ್ಳೋಣ….
ದಾಸವಾಳದಲ್ಲಿದೆ ದೈವಿಕ ಶಕ್ತಿ :-
ಭೂಮಿಯಲ್ಲಿ ಗಣೇಶ ಸಿದ್ಧಾಂತಗಳಿದ್ದು ಇದು ಹೂವಿನ ಕೇಂದ್ರ ಭಾಗವನ್ನು ಆಕರ್ಷಿಸುತ್ತದೆ. ಇದು ವರ್ತುಗಳ ಮಾದರಿಯಲ್ಲಿ ಆವರ್ತನೆಗಳನ್ನು ಕಳುಹಿಸುತ್ತದೆ. ಗಣೇಶ ಸಿದ್ಧಾಂತವು ಸ್ಟೆಮ್ ಮೂಲಕ ಹೀರಿಕೊಳ್ಳಲ್ಪಡುತ್ತದೆ ಮತ್ತು ದಾಸವಾಳದ ದಳದ ಮೂಲಕ ವಾತಾವರಣಕ್ಕೆ ಮರಳುತ್ತದೆ. ಪ್ರಾಣ ಶಕ್ತಿಯನ್ನು ಉತ್ಪತ್ತಿ ಮಾಡಲು ದಾಸವಾಳ ಕಾರಣವಾಗುತ್ತದೆ. ದಾಸವಾಳದ ಸ್ವಭಾವ ರಾಜ ಸತ್ವವಾಗಿದೆ. ಇದರ ದಳಗಳು ದೈವಿಕ ಶಕ್ತಿಯನ್ನು ಉತ್ಪಾದಿಸುತ್ತದೆ ಮತ್ತು ದೈವಿಕ ಚೈತನ್ಯವನ್ನು ಉಂಟು ಮಾಡುತ್ತದೆ. ಇದರಿಂದ ವಾತವಾರಣದಲ್ಲಿರುವ ಋಣಾತ್ಮಕ ಶಕ್ತಿ ನಾಶವಾಗುತ್ತದೆ.
ಪೂಜೆ ಪುನಸ್ಕಾರಗಳಲ್ಲಿ ಹೂವುಗಳಿಗೆ ಒಂದು ವಿಶೇಷವಾದ ಸ್ಥಾನಮಾನವಿದೆ. ಯಾವ ದೇವರಿಗೆ ಯಾವ ಹೂವನ್ನು ಅರ್ಪಿಸಬೇಕು ಎಂಬುದು ಕೂಡ ತುಂಬಾ ಮುಖ್ಯವಾಗಿರುತ್ತದೆ. ದೇವತೆಗಳ ಪೂಜೆಗೆ ಕೆಂಪು ಹೂವು ತುಂಬಾ ಮಹತ್ವವನ್ನು ಪಡೆದುಕೊಂಡಿದೆ. ಅದೇ ರೀತಿ ಭಗವಂತನ ಪೂಜೆಯಲ್ಲಿ ಹಳದಿ ಹೂವು ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಹಾಗಾದರೆ ಇಂದು ನಾವು ದಾಸವಾಳದ ಹೂವಿನ ಬಗ್ಗೆ ವಿಶೇಷವಾದ ಮಾಹಿತಿಯನ್ನು ತಿಳಿದುಕೊಳ್ಳೋಣ ಬನ್ನಿ.
ನವದುರ್ಗೆಯರಿಗೆ ಒಂಬತ್ತು ಅಥವಾ ಹನ್ನೊಂದು ಸಂಖ್ಯೆಯಲ್ಲಿ ಮಾಲೆಯನ್ನು ಸಿದ್ಧಮಾಡಿ ಅರ್ಪಿಸಿದರೆ ನಿಮ್ಮ ಮನಸ್ಸಿನ ಇಚ್ಛೆಗಳು, ಕೋರಿಕೆಗಳು ನೆರವೇರುತ್ತದೆ. ತಾಯಿ ಲಕ್ಷ್ಮೀದೇವಿ ಅಥವಾ ದುರ್ಗಾಮಾತೆಗೆ ಕೆಂಪು ದಾಸವಾಳದ ಹೂವು ತುಂಬಾ ಇಷ್ಟ. ಇದರ ಜೊತೆಗೆ ಆಂಜನೇಯಸ್ವಾಮಿಗೂ ಕೂಡ ದಾಸವಾಳದ ಹೂವನ್ನು ಅರ್ಪಿಸಬಹುದು. ಮಂಗಳವಾರದ ದಿನದಂದು ನವದುರ್ಗೆಯರಿಗೆ ಅಥವಾ ಆಂಜನೇಯಸ್ವಾಮಿಗೆ ಮತ್ತು ಶುಕ್ರವಾರದ ದಿನದಂದು ತಾಯಿ ಲಕ್ಷ್ಮೀದೇವಿಗೆ ದಾಸವಾಳದ ಹೂವನ್ನು ಅರ್ಪಿಸಿದರೆ ಕೇವಲ ಧನಸಂಪತ್ತು ವೃದ್ಧಿಸುವುದಲ್ಲದೆ ಸುಖ, ಶಾಂತಿ, ನೆಮ್ಮದಿಯೂ ನೆಲೆಸುತ್ತದೆ. ಒಂದು ವೇಳೆ ವ್ಯಕ್ತಿಯ ಜೀವನದಲ್ಲಿ ನವಗ್ರಹಗಳ ದೋಷಗಳಿದ್ದರೆ ಅದು ಕೂಡಾ ನಿವಾರಣೆಯಾಗುತ್ತದೆ.
ತಾಯಿ ದುರ್ಗಾಮಾತೆಗೆ ನಿರಂತರವಾಗಿ ಪ್ರತಿನಿತ್ಯವೂ ಒಂದು ದಾಸವಾಳದ ಹೂವನ್ನು ಅರ್ಪಿಸುತ್ತ ಬಂದರೆ ನಿಮ್ಮ ವಿರೋಧಿಗಳು ಅಥವಾ ಶತ್ರುಗಳು ನಿಮ್ಮಿಂದ ದೂರವಾಗುತ್ತಾರೆ. ಯಾವ ವ್ಯಕ್ತಿ ದಾಸವಾಳದ ಹೂವಿನ ಟೀ ಕುಡಿಯುತ್ತಾರೋ ಅವರ ಶಕ್ತಿ ಹೆಚ್ಚಾಗುತ್ತದೆ. ದಾಸವಾಳದ ಹೂವು ರೋಗಗಳಿಂದ ವ್ಯಕ್ತಿಯನ್ನು ರಕ್ಷಣೆ ಮಾಡುವ ಕೆಲಸವನ್ನು ಸಹ ಮಾಡುತ್ತದೆ. ಒಂದು ವೇಳೆ ದಾಂಪತ್ಯದಲ್ಲಿ ಬಿರುಕು,ತೊಂದರೆಯನ್ನು ಅನುಭವಿಸುತ್ತಿದ್ದರೆ ಮಂಗಳವಾರದ ದಿನದಂದು 11 ಸಂಖ್ಯೆಯಲ್ಲಿ ದಾಸವಾಳದ ಹೂವಿನಿಂದ ಮಾಲೆಯನ್ನು ಮಾಡಿ ಆಂಜನೇಯಸ್ವಾಮಿಗೆ ಅರ್ಪಿಸಿದರೆ ದಾಂಪತ್ಯದಲ್ಲಿ ಇರುವ ಸಮಸ್ಯೆಗಳು ದೂರವಾಗುತ್ತದೆ.
ಇದು ಹಿಂದೆ ವೈಜ್ಞಾನಿಕ ಸತ್ಯ ಅಡಗಿದೆ. ಪ್ರತಿಯೊಂದು ಹೂವು ಕೂಡ ತನ್ನದೇ ಆದ ಸುವಾಸನೆ ಮತ್ತು ಬಣ್ಣವನ್ನು ಒಳಗೊಂಡಿದೆ. ಅಂದರೆ ಪ್ರತಿಯೊಂದು ಹೂವಿನ ಆವರ್ತನೆ ಶಕ್ತಿ ವಿಭಿನ್ನವಾಗಿದೆ. ನಿರ್ದಿಷ್ಟ ದೇವರುಗಳ ದೈವಿಕ ಶಕ್ತಿಯನ್ನು ನಿರ್ದಿಷ್ಟ ಹೂವುಗಳು ಹೀರಿಕೊಳ್ಳುತ್ತವೆ.
ಹೂವುಗಳು ತಾಜಾ ಇರಬೇಕು ಎಂದು ಏಕೆ ಹೇಳುತ್ತಾರೆ ದೇವರುಗಳಿಗೆ ಅತ್ಯಂತ ಉತ್ತಮವಾಗಿರುವುದನ್ನೇ ನೀಡಬೇಕು ಎಂದು ವೇದಗಳು ತಿಳಿಸುತ್ತವೆ. ಆದ್ದರಿಂದ ಹೂವುಗಳ ವಿಚಾರದಲ್ಲಿ ಕೂಡ ಇದೇ ಸಿದ್ಧಾಂತವನ್ನು ಪಾಲಿಸಲಾಗುತ್ತದೆ. ಕ್ರಿಮಿಗಳಿಂದ ಹಾನಿಗೊಳ್ಳದ ತಾಜಾ ಹೂವುಗಳನ್ನೆ ದೇವರ ಪೂಜೆಗೆ ಬಳಸಲಾಗುತ್ತದೆ. ಇದರಿಂದ ದೇವರು ಸಂತುಷ್ಟಗೊಂಡು ನಮ್ಮನ್ನು ಅನುಗ್ರಹಿಸುತ್ತಾರೆ ಎಂದು ನಂಬಲಾಗಿದೆ. ಆದ್ದರಿಂದ ನಾವು ನೀಡುವುದು ಉತ್ತಮವಾಗಿದ್ದರೆ ನಮಗೆ ಮರಳಿ ಬರುವುದು ಉತ್ತಮವಾಗಿರುತ್ತದೆ. ಅಂತೆಯೇ ಹೂವು ಒಣಗಿದ್ದರೆ ಅದರ ಸಾಮರ್ಥ್ಯ ಇಳಿಮುಖವಾಗುತ್ತದೆ.
ಹೂವುಗಳನ್ನು ಪೂಜೆಗೆ ಬಳಸುವಾಗ ಕೆಲವೊಂದು ನಿಯಮಗಳಿಗೆ
ಹೂವನ್ನು ಎಡಗೈಯಲ್ಲಿ ಸ್ಪರ್ಶಿಸಬಾರದು ಮತ್ತು ಅದನ್ನು ಮೂಸಿ ನೋಡಬಾರದು,ಸುವಾಸನೆ ರಹಿತ ಹೂವುಗಳನ್ನು ಪೂಜೆಗೆ ಬಳಸಬಾರದು, ಸರಿಯಾಗಿ ಅರಳಿರದ ಹೂವನ್ನು ದೇವರಿಗೆ ಅರ್ಪಿಸಬಾರದು, ಮೊಗ್ಗನ್ನು ಕೂಡ ಬಳಸುವ ಹಾಗಿಲ್ಲ,ನೀರಿನಲ್ಲಿ ಅದ್ದಿದ ತೊಳೆದ ಹೂವುಗಳನ್ನು ಕೂಡ ಬಳಸಬಾರದು, ತಾವರೆಯ ಮೊಗ್ಗನ್ನು ದೇವರಿಗೆ ಅರ್ಪಿಸಬಹುದು, ನಾವು ಹೂವಿನ ಮೇಲೆ ನೀರನ್ನು ಚಿಮುಕಿಸಬಹುದು ಆದರೆ ಹೂವನ್ನು ನೀರಿನಲ್ಲಿ ಮುಳುಗಿಸಬಾರದು.
ಸೂರ್ಯಾಸ್ತದ ನಂತರ ಏಕೆ ಹೂವನ್ನು ಕೀಳಬಾರದು :-
ಸನಾತನ ಹಿಂದೂ ಧರ್ಮವು ಪ್ರತಿಯೊಂದು ಕಾರ್ಯಕ್ಕೂ ಸಮಯವನ್ನು ನಿಗದಿಪಡಿಸಿದೆ. ಅಂತೆಯೇ ಹೂವು ಕೀಳುವುದಕ್ಕೆ ಕೂಡ. ಸಂಜೆಯ ಹೊತ್ತು ಹೂವು ಕೀಳುವುದನ್ನು ನಿಷೇಧಿಸಲಾಗಿದೆ. ಸೂರ್ಯಾಸ್ತದ ಸಮಯದಲ್ಲಿ ಋಣಾತ್ಮಕ ಶಕ್ತಿ ಅಧಿಕವಾಗಿರುತ್ತದೆ ಮತ್ತು ಹೂವುಗಳು ದುಷ್ಟತನವನ್ನು ಹೀರಿಕೊಳ್ಳುತ್ತವೆ. ಆದ್ದರಿಂದ ಈ ಸಮಯದಲ್ಲಿ ಹೂವು ಕೀಳುವುದನ್ನು ನಿಷೇಧಿಸಲಾಗಿದೆ. ಆದರೆ ಬೇಲ, ಚಮೇಲಿ, ರಜನೀಗಂಧ ಮೊದಲಾದ ಹೂವುಗಳು ಸಂಜೆಯ ಹೊತ್ತು ಅರಳುತ್ತವೆ ಅಂತೆಯೇ ಇತರ ಹೂವುಗಳಿಗೆ ಹೋಲಿಸಿದರೆ ಅವುಗಳ ಸುವಾಸನೆ ಅಧಿಕವಾಗಿರುತ್ತವೆ.
ಹೂವುಗಳನ್ನು ಕೀಳುವುದಕ್ಕೆ ನಿಯಮಗಳು
ಸ್ನಾನ ಮಾಡದೆಯೇ ಚಪ್ಪಲಿಗಳನ್ನು ಧರಿಸಿಕೊಂಡು ಹೂವುಗಳನ್ನು ಕೀಳಬಾರದು,
ನೀವು ಹೂವು ಕೀಳುವಾಗ ಅದಕ್ಕೆ ನೋವಾಗದ ರೀತಿಯಲ್ಲಿ ಹಿಂಸೆಯನ್ನುಂಟು ಮಾಡದೆಯೇ ಗೌರವಯುತವಾಗಿ ಕೀಳಬೇಕು,ಹೂವು ಕೀಳುವಾಗ ಮಂತ್ರವನ್ನು ಪಠಿಸಬಹುದು.
ಯಾವ ಹೂವು ಯಾವ ದೇವರಿಗೆ :—
ಶಿವನಿಗೆ:- ಯಾವುದೇ ಬಿಳಿ ಹೂವು. ನೀಲಿ ತಾವರೆ, ಮಾಲುಶ್ರೀ, ಕನೀರ್. ಇತರ ಹೂವುಗಳಾದ ಬೇಲಎಲೆಗಳು, ದತ್ತೂರ ಹೂವು, ನಾಗಕೇಶರ, ಹರಿಶಿಂಗಾರ್, ಶಿವನ ಮೆಚ್ಚಿನ ಹೂವುಗಳಾಗಿವೆ. ಆದರೆ ಶಿವ ಪೂಜೆಯ ಸಮಯದಲ್ಲಿ ನೀವು ಬಿಲ್ವಪತ್ರೆಯಿಲ್ಲದೆ ಪೂಜೆ ಮಾಡುವಂತಿಲ್ಲ. ಕೇತಕಿ ಹೂವು ನಿಷೇಧವಾಗಿದೆ.
ಗಣೇಶ :- ಯಾವುದೇ ಕೆಂಪು ಬಣ್ಣದ ಹೂವು. ದಾಸವಾಳ ಗಣೇಶನಿಗೆ ಮೆಚ್ಚಿನ ಹೂವಾಗಿದೆ. ತಾವರೆ, ಚಂಪ, ಗುಲಾಬಿ, ಮಲ್ಲಿಗೆ, ಸೂರ್ಯಕಾಂತಿ, ಗರಿಕೆ ಹುಲ್ಲು, ಬಿಲ್ವ ಪತ್ರೆಯನ್ನು ಪೂಜೆಗೆ ಬಳಸಬಹುದು. 21 ಬಗೆಯ ಹೂವುಗಳನ್ನು ಗಣೇಶ ಪೂಜೆಯ ಸಮಯದಲ್ಲಿ ಬಳಸಬೇಕು.
ಕಟೀಲು ಶ್ರೀ ದುರ್ಗಾಪರಮೇಶ್ವರೀ ಜ್ಯೋತಿಷ್ಯ ಫಲ ಪ್ರಧಾನ ತಾಂತ್ರಿಕರು ದೈವಜ್ಞರು ಪಂಡಿತ್ ಜ್ಞಾನೇಶ್ವರ್ ರಾವ್ 8548998564.ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಹಸ್ತಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ. ನಿಮ್ಮ ಸಮಸ್ಯೆಗಳಾದ, ಆರೋಗ್ಯ, ಸಂತಾನ, ಸಾಲಬಾದೆ, ವಿವಾಹ, ಉದ್ಯೋಗದಲ್ಲಿ ತೊಂದರೆ, ಸಾಲಬಾದೆ, ಸತಿ ಪತಿ ಕಲಹ, ಪ್ರೇಮ ವಿಚಾರ, ಅತ್ತೆ-ಸೊಸೆ ಕಲಹ,ದೃಷ್ಟಿ ದೋಷ, ಮನೆಯಲ್ಲಿ ದರಿದ್ರತನ ದೋಷ, ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು, ವ್ಯಾಪಾರದಲ್ಲಿ ತೊಂದರೆ, ಕುಟುಂಬ ಕಷ್ಟ, ಹಣಕಾಸಿನಲ್ಲಿ ಅಡಚಣೆ, ಪ್ರೇಮ ವೈಫಲ್ಯ, ಹಾಗೂ ಸ್ತ್ರೀ-ಪುರುಷ ವಶೀಕರಣ ದಂತಹ ಸಮಸ್ಯೆಗಳಿಗೆ ಇನ್ನೂ ಅನೇಕ ಗುಪ್ತ ಕಠಿಣ ಸಮಸ್ಯೆಗಳಿಗೆ ತಾಂಬೂಲ ಪ್ರಶ್ನೆ, ಅಷ್ಟ ಮಂಡಲ ಪ್ರಶ್ನೆ, ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟ-ಕಾರ್ಪಣ್ಯಗಳಿಗೆ ಶಾಶ್ವತವಾದ ಪರಿಹಾರ ಮತ್ತು ಸಲಹೆ ಪಡೆದುಕೊಳ್ಳಿ 8548998564
ಪಾರ್ವತಿ:- ಶಿವನಿಗೆ ಅರ್ಪಿಸುವ ಎಲ್ಲಾ ಹೂವುಗಳನ್ನು ಪಾರ್ವತಿ ದೇವಿಗೆ ಅರ್ಪಿಸಬಹುದು. ಬಿಳಿ ತಾವರೆ, ಬೇಲ, ಪಲಾಶ್, ಮದಾರ್, ಅಪಮರ್ಗ್, ಚಂಪಾ ಮತ್ತು ಚಮೇಲಿಯನ್ನು ಬಳಸಬಹುದು.
ದುರ್ಗಾ:- ಎಲ್ಲಾ ಕೆಂಪು ಹೂವುಗಳು. ತಾವರೆ, ಮೋಗ್ರಾ ಹೂವು, ಬೇಲಾ ಹೂವುಗಳನ್ನು ಅರ್ಪಿಸಬಹುದು.
ವಿಷ್ಣು:- ವಿಷ್ಣುವಿಗೆ ತಾವರೆ ಎಂದರೆ ಬಲು ಪ್ರೀತಿ. ಕೆಂಪು ತಾವರೆ, ಮಾಲುಶ್ರೀ, ಜೂಹಿ, ಕದಂಬ, ಕೇವಾರ, ಚಮೇಲಿ, ಚಂಪಾ, ಅಶೋಕ, ಮಲ್ತಿ, ಬಸಂತಿ ಹೂವುಗಳನ್ನು ವಿಷ್ಣು ಪೂಜೆಗೆ ಬಳಸಬಹುದು.
ಲಕ್ಷ್ಮೀ ಪೂಜೆ:- ತಾವರೆ , ಗುಲಾಬಿ ಬಣ್ಣದ ತಾವರೆ ಆಕೆಗೆ ಪ್ರಿಯವಾದುದು.
ದತ್ತಾತ್ರೇಯ:-ಮಲ್ಲಿಗೆ, ಬಿಲ್ವ ಪತ್ರೆ, ಔದುಂಬರಎಲೆಗಳು.
ಹನುಮಾನ್:- ಚಮೇಲಿ ಹೂವು, ತುಳಸಿ ಮಾಲೆ
ಬ್ರಹ್ಮ : ಬಿಳಿ ಕಮಲ
ಮಹಾಕಾಳಿ:- ಹಳದಿ ಹೂಗಳು
ಸರಸ್ವತಿ ಪೂಜೆ:- ಬಿಳಿ ಹೂವು, ಬಿಳಿ ತಾವರೆ.
ಸೂರ್ಯ:- ತಾವರೆ ಹೂವು
ಶನಿ:- ನೀಲಿ ಬಣ್ಣದ ಹೂವು
ಕೃಷ್ಣ ಪೂಜೆ:- ತುಳಸಿ ಎಲೆಗಳು, ನೀಲಿ ತಾವರೆ, ಪಾರಿಜಾತ.