ಅಧಿಕ ಶ್ರಾವಣ ಮಾಸದ ಮಹತ್ವವೆನೆಂದು ಗೊತ್ತೇ
ಅಧಿಕಮಾಸದಲ್ಲಿ ಪ್ರತಿನಿತ್ಯವೂ
ಈ 33 ದೇವರನಾಮಗಳನ್ನು ಹೇಳುತ್ತಾ
33 ಪ್ರದಕ್ಷಿಣೆ ಅಥವಾ ನಮಸ್ಕಾರಗಳನ್ನು ಹಾಕುವುದರಿಂದ “ಅಧಿಕಸ್ಯ ಅಧಿಕ ಫಲಂ” ಎಂಬಂತೆ ಗೋಲೋಕಾಧಿಪತಿ “ರಾಧಿಕಾ ಶ್ರೀಪುರುಷೋತ್ತಮ” ಪರಮಾತ್ಮನ ಪೂರ್ಣಾನುಗ್ರಹ ದಿಂದ ಮನಸ್ಸಿನ ಸಕಲ ಮನೋರಥಗಳು ಪೂರ್ಣಗೊಳ್ಳುತ್ತವೆ.
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್
ನಿಮ್ಮ ಜೀವನದ ಯಾವುದೇ ಗುಪ್ತ,ಪ್ರೀತಿ-ಪ್ರೇಮ ದಾಂಪತ್ಯ,ವೈವಾಹಿಕ,ವ್ಯವಹಾರಿಕ ಎಂತಹ ಸಮಸ್ಯೆಗಳೇ ಇದ್ದರೂ ಆ ಸಮಸ್ಯೆಗಳಿಗೆ ದೈವಿಕ ವಿಧಿವಿಧಾನದ ಶಾಸ್ತ್ರೋವಾದ ಮಾರ್ಗವನ್ನು ಕೆಲವೇ ಗಂಟೆಯಲ್ಲಿ ಪೋನಿನ ಮೂಲಕ ಶಾಶ್ವತವಾಗಿ ಪರಿಹಾರ ತಿಳಿಸಿಕೊಡುತ್ತಾರೆ ತಪ್ಪದೆ ಕರೆ ಮಾಡಿ 85489 98564
ಅಧಿಕಮಾಸದಲ್ಲಿ 33 ದೇವತೆಗಳ ವಿವರಣೆ:
ಅಷ್ಟ (8) ವಸುಗಳು
ಏಕಾದಶ (11)ರುದ್ರರು
ದ್ವಾದಶ (12) ಆದಿತ್ಯರು.
(1) ಪ್ರಜಾಪತಿ
(1) ವಷಟ್ಕಾರ
ಒಟ್ಟು 33 ದೇವತೆಗಳು.
ಪುರುಷೋತ್ತಮಮಾಸದ ಮೂವತ್ತಮೂರು(ತ್ರಯತ್ರಿಂಶದ್ರೂಪ) ದೇವತಾ ಭಗವದ್ ರೂಪ
1. ದ್ರೋಣ ನಾಮಕ ವಸು ಅಂತರ್ಗತ ಶ್ರೀ ವಿಷ್ಣವೇ ನಮಃ
2. ಪ್ರಾಣ ನಾಮಕ ವಸು ಅಂತರ್ಗತ ಶ್ರೀ ಜಿಷ್ಣವೇ ನಮಃ
3. ಧ್ರುವ ನಾಮಕ ವಸು ಅಂತರ್ಗತ ಶ್ರೀ ಮಹಾವಿಷ್ಣವೇ ನಮಃ
4. ಅರ್ಕ ನಾಮಕ ವಸು ಅಂತರ್ಗತ ಶ್ರೀ ಹರಯೇ ನಮಃ
5. ಅಗ್ನಿ ನಾಮಕ ವಸು ಅಂತರ್ಗತ ಶ್ರೀ ಕೃಷ್ಣಾಯ ನಮಃ
6. ದೋಷ ನಾಮಕ ವಸು ಅಂತರ್ಗತ ಶ್ರೀ ಅಧೋಕ್ಷಜಾಯ ನಮಃ
7. ವಸ್ತು ನಾಮಕ ವಸು ಅಂತರ್ಗತ ಶ್ರೀ ಕೇಶವಾಯ ನಮಃ
8. ವಿಭಾವಸು ನಾಮಕ ವಸು ಅಂತರ್ಗತ ಶ್ರೀ ಮಾಧವಾಯ ನಮಃ
9. ರೈವತ ನಾಮಕ ರುದ್ರ ಅಂತರ್ಗತ ಶ್ರೀ ರಾಮಾಯ ನಮಃ
10. ಅಜ ನಾಮಕ ರುದ್ರ ಅಂತರ್ಗತ ಶ್ರೀ ಅಚ್ಯುತಾಯ ನಮಃ
11. ಭವ ನಾಮಕ ರುದ್ರ ಅಂತರ್ಗತ ಶ್ರೀ ಪುರುಷೋತ್ತಮಾಯ ನಮಃ
12. ಭೀಮ ನಾಮಕ ರುದ್ರ ಅಂತರ್ಗತ ಶ್ರೀ ಗೋವಿಂದಾಯ ನಮಃ
13. ವಾಮದೇವ ನಾಮಕ ರುದ್ರ ಅಂತರ್ಗತ ಶ್ರೀ ವಾಮನಾಯ ನಮಃ
14 , ಉಗ್ರ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಶಾಯ ನಮಃ
15. ವೃಷಾಕಪಿ ನಾಮಕ ರುದ್ರ ಅಂತರ್ಗತ ಶ್ರೀ ಶ್ರೀಕಂಠಾಯ ನಮಃ
16. ಅಜೈಕಾಪತ್ ನಾಮಕ ರುದ್ರ ಅಂತರ್ಗತ ಶ್ರೀ ವಿಶ್ವಸಾಕ್ಷಿಣೇ ನಮಃ
17. ಅಹಿರ್ಬುದ್ಧಿ ನಾಮಕ ರುದ್ರ ಅಂತರ್ಗತ ನಾರಾಯಣಾಯ ನಮಃ
18 , ವಿರೂಪಾಕ್ಷ ನಾಮಕ ರುದ್ರ ಅಂತರ್ಗತ ಶ್ರೀ ಮಧುರಿಪವೇ ನಮಃ
19. ಉಮಾಪತಿ ನಾಮಕ ರುದ್ರ ಅಂತರ್ಗತ ಶ್ರೀ ಅನಿರುದ್ಧಾಯ ನಮಃ
20. ವಿವಸ್ವನ್ ನಾಮಕ ಆದಿತ್ಯ ಅಂತರ್ಗತ ಶ್ರೀ ತ್ರಿವಿಕ್ರಮಾಯ ನಮಃ
21. ಆರ್ಯಮನ್ ನಾಮಕ ಆದಿತ್ಯ ಅಂತರ್ಗತ ಶ್ರೀ ವಾಸುದೇವಾಯ ನಮಃ
22. ಪೂಷನ್ ನಾಮಕ ಆದಿತ್ಯ ಅಂತರ್ಗತ ಶ್ರೀ ಜಗದ್ಯೋನಯೇ ನಮಃ
23 , ತ್ವಷ್ಟ ನಾಮಕ ಆದಿತ್ಯ ಅಂತರ್ಗತ ಶ್ರೀ ಅನಂತಾಯ ನಮಃ
24. ಸವಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಶೇಷಶಾಯಿನೇ ನಮಃ
25. ಭಗ ನಾಮಕ ಆದಿತ್ಯ ಅಂತರ್ಗತ ಶ್ರೀ ಸಂಕರ್ಷಣಾಯ ನಮಃ
26. ಧಾತೃ ನಾಮಕ ಆದಿತ್ಯ ಅಂತರ್ಗತ ಶ್ರೀ ಪ್ರದ್ಯುಮ್ಯಾಯ ನಮಃ
27. ಪರ್ಜನ್ಯ ನಾಮಕ ಆದಿತ್ಯ ಅಂತರ್ಗತ ಶ್ರೀ ದೈತ್ಯಾರಯೇ ನಮಃ
28. ವರುಣ ನಾಮಕ ಆದಿತ್ಯ ಅಂತರ್ಗತ ಶ್ರೀ ವಿಶ್ವತೋಮುಖಾಯ ನಮಃ
29. ಮಿತ್ರ ನಾಮಕ ಆದಿತ್ಯ ಅಂತರ್ಗತ ಶ್ರೀ ಜನಾರ್ಧನಾಯ ನಮಃ
30. ಶಕ್ತ ನಾಮಕ ಆದಿತ್ಯ ಅಂತರ್ಗತ ಶ್ರೀ ಧರಾವಾಸಾಯ ನಮಃ
31. ಉರುಕ್ರಮ ನಾಮಕ ಆದಿತ್ಯ ಅಂತರ್ಗತ ಶ್ರೀ ದಾಮೋದರಾಯ ನಮಃ
32. ಪ್ರಜಾಪತಿ ಅಂತರ್ಗತ ಶ್ರೀ ಅಘಾರ್ದನಾಯ ನಮಃ
33. ವಷಟ್ಕಾರ ಅಭಿನ್ನ ಶ್ರೀ ಶ್ರೀಪತಯೇ ನಮಅಧಿಕ ಮಾಸ
ಅಧಿಕ ಮಾಸದಲ್ಲಿ ಅಪೂಪ (ಅತಿರಸ) ದಾನ*
ಅಧಿಕ ಮಾಸದಲ್ಲಿ ದಾನಕ್ಕೆ ಅದರಲ್ಲೂ 33 ಅಪೂಪ ದಾನಕ್ಕೆ ವಿಶೇಷ ಫಲವಿದೆ. ದಂಪತಿಪೂಜೆ, ದೀಪದಾನಗಳು ವಿಹಿತವಾಗಿವೆ.ಅಪೂಪದಾನದಿಂದ ಪೃಥ್ವೀದಾನದ ಫಲವನ್ನು ಕೊಡುತ್ತದೆ.
ಅಧಿಕಮಾಸದ ಪ್ರತಿದಿನವೂ ಆಗದಿದ್ದರೆ ದ್ವಾದಶಿ, ಹುಣ್ಣಿಮೆ ಮತ್ತಿತರೇ ದಿನಗಳಲ್ಲಿಯಾದರೂ ದೀಪದೊಂದಿಗೆ ಕಂಚಿನಪಾತ್ರೆಯಲ್ಲಿಟ್ಟು ಅಪೂಪವನ್ನು ದಕ್ಷಿಣೆಯೊಂದಿಗೆ ಶ್ರೇಷ್ಠ ಬ್ರಾಹ್ಮಣರಿಗೆ ದಾನ ಕೊಡಬೇಕು. ಕೊಡುವಾಗ ಅಪೂಪದಲ್ಲಿರುವ ೩೩ಭಗವದ್ರೂಪಗಳನ್ನು ಚಿಂತಿಸಿ ದಾನ ಮಾಡಬೇಕು. ಹೀಗೆ ದಾನ ಮಾಡಿದರೆ ಅಪೂಪದಲ್ಲಿರುವ ಛಿದ್ರಗಳ ಸಂಖ್ಯೆಯಷ್ಟು ದೀರ್ಘಕಾಲದ ತನಕ ಸ್ವರ್ಗದಲ್ಲಿ ವಾಸಿಸುವ ಪುಣ್ಯವು ಲಭಿಸುತ್ತದೆ
ಲೇಖನ: ಧಾರ್ಮಿಕಚಿಂತಕರು ಮತ್ತು ಸಲಹೆಗಾರರು
ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರೀ ದೇವಸ್ಥಾನ
ದೈವಜ್ಞ ಪ್ರಧಾನ್ ತಾಂತ್ರಿಕ್ ಜ್ಞಾನೇಶ್ವರ್ ರಾವ್ ಜ್ಯೋತಿಷ್ಯರು 8548998564