ಯಾದಗಿರಿ : ಯಾದಗಿರಿ ಜಿಲ್ಲೆಯ ಶಹಾಪುರ ತಾಲೂಕಿನ ಸಗರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದ ಸ್ಥಿತಿ ಅತ್ಯಂತ ಶೋಚನೀಯವಾಗಿದೆ. ಕಳೆದ ನಾಲ್ಕು ದಿನದಿಂದ ಸುರಿಯುತ್ತಿರೋ ಮಳೆಗೆ ಆಸ್ಪತ್ರೆಯ ಮೇಲ್ಚಾವಣಿ ಶಿಥಿಲಾವಸ್ಥೆ ತಲುಪಿದ್ದು, ಆಸ್ಪತ್ರೆಯೊಳಗೆ ನೀರು ಹನಿಯಿಡುತ್ತಿದೆ.
ಆದರೆ ನೀರು ಹನಿಯಿಡುತ್ತಲೇ ಇದ್ದರು ಬಗ್ಗೆ ತಲೆಕೆಡಿಸಿಕೊಳ್ಳದ ವೈದ್ಯರು ಟಾರ್ಫಲ್ ರಕ್ಷಣೆಯಲ್ಲಿ ಹೆರಿಗೆ ಮಾಡಿ ಮಾನವೀಯತೆ ಮೆರೆದಿದ್ದಾರೆ. ಮಳೆ ನೀರಿನ ಮಧ್ಯೆ ಚಾಂದ್ ಬೀ ಎಂಬ ಮಹಿಳೆಗೆ ಹೆರಿಗೆ ಮಾಡಿಸಲಾಗಿದ್ದು, ಹೆರಿಗೆಯಾಗುತ್ತಿದ್ದಂತೆಯೇ ತಾಯಿ ಮಗುವನ್ನು ಮನೆಗೆ ಕಳುಹಿಸಿಕೊಡಲಾಗಿದೆ.
ಇತ್ತ ಆಸ್ಪತ್ರೆಯ ದುಸ್ಥಿತಿ ಕಂಡು ಬಾಣಂತಿ ಕುಟುಂಬಸ್ಥರು ಕಣ್ಣೀರು ಇಟ್ಟಿದ್ದಾರೆ. ಆಸ್ಪತ್ರೆಯ ಕಟ್ಟಡವು ಸುಮಾರು 30ವರ್ಷಗಳಷ್ಟು ಹಳೆಯದಾಗಿದ್ದು, ಸುಮಾರು 18 ಗ್ರಾಮಸ್ಥರಿಗೆ ಈ ಆಸ್ಪತ್ರೆಯೇ ಆಸರೆಯಾಗಿದೆ.