ನಿಖಿಲ್ ಕುಮಾರಸ್ವಾಮಿ-ರೇವತಿ ಮದುವೆ ನಾಳೆ ನಡೆಯಲಿದೆ. ಬಿಡದಿ ಸಮೀಪದಲ್ಲಿರುವ ಕೇತಗಾನಹಳ್ಳಿಯಲ್ಲಿನ ಫಾರಂ ಹೌಸ್ ನಲ್ಲಿ ಮದುವೆಗೆ ಸಿದ್ಧತೆ ನಡೆಸಲಾಗಿದೆ. ನಿಖಿಲ್-ರೇವತಿ ಮದುವೆಯನ್ನು ಈ ಮೊದಲು ರಾಮನಗ-ಚನ್ನಪಟ್ಟಣದ ಮಧ್ಯದಲ್ಲಿರುವ ಜಾನಪದ ಲೋಕದ ಸಮೀಪ ಅದ್ಧೂರಿ ಮಂಟಪ ನಿರ್ಮಿಸಿ ನಡೆಸಲು ತೀರ್ಮಾನಿಸಲಾಗಿತ್ತು. ಕೊರೊನಾ ವೈರಸ್ ಹರಡುವಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಮದುವೆ ಸ್ಥಳವನ್ನು ಬೆಂಗಳೂರಿಗೆ ವಧುವಿನ ಮನಗೆ ಸ್ಥಳಾಂತರಿಸಲಾಗಿತ್ತು. ವಧುವಿನ ಮನೆಯಲ್ಲಿ ಸರಳವಾಗಿ ಮದುವೆ ನಡೆಸಲು ಎರಡು ಕುಟುಂಬಗಳು ತೀರ್ಮಾನಿಸಿದ್ದರು. ಇದೀಗ ರೇವತಿ ಅವರು ಇರುವ ಬಡವಾಣೆಯನ್ನು ಹಾಟ್ ಸ್ಪಾಟ್ ಎಂದು ಗುರುತಿಸಲಾಗಿದೆ. ಆ ಕಾರಣಕ್ಕಾಗಿ ಬಿಡದಿ ಬಳಿ ಇರುವ ಹೆಚ್ ಡಿಕೆ ತೋಟದ ಮನೆಗೆ ಸ್ಥಳಾಂತರಿಸಲಾಗಿದೆ. ಶುಕ್ರವಾರ ಬೆಳಿಗ್ಗೆ 10 ಗಂಟೆಗೆ ಧಾರೆ ಮೂಹೂರ್ತ ನಡೆಯಲಿದೆ. ಪುತ್ರನ ಮದುವೆ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಜನರಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಕುರಿತು ಸಂದೇಶ ನೀಡಿದ ಅವರು, ನಿಖಿಲ್ ಗೌಡ ಹಾಗೂ ರೇವತಿ ಅವರ ವಿವಾಹ ಇದೇ 17 ರಂದು ಕೇತಗಾನಹಳ್ಳಿಯ ತೋಟದಲ್ಲಿ ಜರುಗಲಿದೆ. ಈ ವೇಳೆ ತಾವೆಲ್ಲರೂ ತಾವಿದ್ದ ಸ್ಥಳದಿಂದಲೆ ವಧುವರರನ್ಧು ಆಶೀರ್ವಾದ ಮಾಡಬೇಕಾಗಿ ವಿನಂತಿಸುತ್ತೇನೆ. ಕೊರೋನಾ ಪಿಡುಗು ಮರೆಯಾದ ಮೇಲೆ ತಮ್ಮೆಲ್ಲರ ಆಶೀರ್ವಾದಕ್ಕಾಗಿ ದಂಪತಿಗಳು ನಿಮ್ಮ ಮುಂದೇ ಬರಲಿದ್ದಾರೆ. ದಯಮಾಡಿ ತಾವು ಅಭಿಮಾನದಿಂದ ಬಂದು ನಮ್ಮಿಂದ ಸಮಾಜಕ್ಕೆ ತಪ್ಪು ಸಂದೇಶ ಹೋಗುವುದು ಬೇಡ ಆರೋಗ್ಯ ಸಮಾಜ ನಿರ್ಮೀಸೋಣ ಎಂದು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
‘ಇದಕ್ಕೇ ಭಂಡರು ಅನ್ನೋದು, ‘ಕಳ್ಳ ದುಡ್ಡು ಮುಚ್ಚಿಡಲು RSS ನೋಂದಣಿ ಮಾಡಿಸ್ತಿಲ್ಲ’: ಬಿಎಲ್ ಸಂತೋಷ್ ಹೇಳಿಕೆಗೆ ಸಚಿವ ಕಾಶಪ್ಪನವರ್ ಕೆಂಡ
ಬಾಗಲಕೋಟೆ: ಆರ್ಎಸ್ಎಸ್ ಹಿಂದೆಂದೂ ನೋಂದಣಿಯಾಗಿಲ್ಲ, ಮುಂದೆಯೂ ನೋಂದಣಿ ಆಗುವುದಿಲ್ಲ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರ ಸವಾಲಿನ ಹೇಳಿಕೆಗೆ ರಾಜ್ಯ ಕಾಂಗ್ರೆಸ್...








