ಬೆಂಗಳೂರು: ಸಂಪುಟ ವಿಸ್ತರಣೆ, ಖಾತೆ ಹಂಚಿಕೆ ಬಳಿಕವೂ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ತಲೆ ಬಿಸಿ ಮಾತ್ರ ಕಡಿಮೆ ಆಗಿಲ್ಲ. ಸೋಮವಾರದಿಂದ ರಾಜ್ಯ ಅಧಿವೇಶನ ಆರಂಭವಾಗಲಿದ್ದು, ಬಿ.ಎಸ್. ಯಡಿಯೂರಪ್ಪ ಅವರಿಗೆ ಎರಡೆರಡು ಟೆನ್ಷನ್ ಶುರುವಾಗಿದೆ ಎನ್ನಲಾಗಿದೆ.
ಟೆನ್ಷನ್ ಏನು?
ಆನಂದ್ ಸಿಂಗ್ ಅವರಿಗೆ ಅರಣ್ಯ ಖಾತೆ ಕೊಟ್ಟಿರೋದು ವಿರೋಧ ಪಕ್ಷಗಳಿಗೆ ಆಹಾರವಾಗಿದೆ. ವಿಪಕ್ಷಗಳು ಈಗಾಗಲೇ ಆನಂದ್ ಸಿಂಗ್ ಗೆ ಅರಣ್ಯ ಖಾತೆ ಕೊಟ್ಟಿರುವ ಬಗ್ಗೆ ವಿರೋಧ ವ್ಯಕ್ತಪಡಿಸಿವೆ. ಅಧಿವೇಶನದಲ್ಲಿ ಈ ಬಗ್ಗೆ ವಿರೋಧ ಪಕ್ಷದ ನಾಯಕರು ಚರ್ಚೆ ಶುರುಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.
ಜೊತೆಗೆ, ಕಂದಾಯ ಸಚಿವ ಆರ್. ಅಶೋಕ್ ಅವರ ಮಗನ ಮೇಲೆ ಅಪಘಾತವೊಂದರ ಪ್ರಕರಣ ಕೇಳಿಬಂದಿರುವ ಹಿನ್ನೆಲೆ ಈ ವಿಚಾರವನ್ನೂ ವಿರೋಧ ಪಕ್ಷದವರು ಅಧಿವೇಶನದಲ್ಲಿ ಹೈಲೈಟ್ ಮಾಡಬಹುದು.
ಈ ಎರಡು ಪ್ರಕರಣಗಳನ್ನು ಹೇಗೆ ಹ್ಯಾಂಡಲ್ ಮಾಡೋದು ಅನ್ನೋ ಗೊಂದಲದಲ್ಲಿ ಸಿಎಂ ಬಿಎಸ್ ವೈ ಇದ್ದಾರೆ ಎನ್ನಲಾಗಿದೆ.