ಉಕ್ರೇನ್ ನಲ್ಲಿರುವ ಭಾರತೀಯರನ್ನ ಕರೆತರಲು ರೊಮೇನಿಯಾ, ಹಂಗೇರಿ ಸಂಪರ್ಕಿಸಿದ ಭಾರತ…
ಉಕ್ರೇನ್ನಿಂದ ಸಿಲುಕಿರುವ ಭಾರತೀಯರನ್ನು ಸ್ಥಳಾಂತರಿಸುವ ಕುರಿತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಗುರುವಾರ ರಾತ್ರಿ ರೊಮೇನಿಯಾ, ಹಂಗೇರಿ ಮತ್ತು ಸ್ಲೋವಾಕಿಯಾ ದೇಶಗಳೊಡನೆ ಮಾತನಾಡಿದ್ದಾರೆ.
ಜೈಶಂಕರ್ ಅವರು ಉಕ್ರೇನ್ ಬಿಕ್ಕಟ್ಟಿನ ಕುರಿತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ಶಮನಗೊಳಿಸಲು ಮಾತುಕತೆ ಮತ್ತು ರಾಜತಾಂತ್ರಿಕತೆಯು ಉತ್ತಮ ಮಾರ್ಗವಾಗಿದೆ ಎಂಬುದನ್ನ ಒತ್ತಿ ಹೇಳಿದ್ದಾರೆ,
“ಉಕ್ರೇನ್ ಬೆಳವಣಿಗೆಗಳ ಕುರಿತು ರಷ್ಯಾದ ವಿದೇಶಾಂಗ ಸಚಿವ ಸೆರ್ಗೆಯ್ ಲಾವ್ರೊವ್ ಅವರೊಂದಿಗೆ ಮಾತನಾಡಿದ್ದೇನೆ. ಮಾತುಕತೆ ಮತ್ತು ರಾಜತಾಂತ್ರಿಕತೆಯು ಉತ್ತಮ ಮಾರ್ಗವಾಗಿದೆ ಎಂದು ಒತ್ತಿಹೇಳಿದ್ದಾರೆ” ಎಂದು ಅವರು ಟ್ವೀಟ್ ಮಾಡಿದ್ದಾರೆ.
ರಷ್ಯಾದ ಸೇನಾ ದಾಳಿಯ ನಂತರ ಉಕ್ರೇನ್ ತನ್ನ ವಾಯುಪ್ರದೇಶವನ್ನು ಮುಚ್ಚಿರುವುದರಿಂದ, ಭಾರತವು ಉಕ್ರೇನ್ನಿಂದ ಸುಮಾರು 16,000 ಭಾರತೀಯರನ್ನು ರೊಮೇನಿಯಾ, ಹಂಗೇರಿ, ಸ್ಲೋವಾಕ್ ಗಣರಾಜ್ಯ ಮತ್ತು ಪೋಲೆಂಡ್ನ ಭೂ ಗಡಿ ದಾಟುವ ಮೂಲಕ ಸ್ಥಳಾಂತರಿಸುವತ್ತ ಗಮನಹರಿಸುತ್ತಿದೆ. AM Jaishankar speaks to counterparts from Russia, Romania, Hungary & Slovakia.








