ADVERTISEMENT
Sunday, February 22, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಪರಿಸರ, ವನ್ಯ ಜೀವಿ ಪ್ರೇಮಿ ಗಿರಿವಾಲ್ಮಿಕಿಯವರ ಲೇಖನಿಯಿಂದ ಉದುರಿದ ಪ್ರಕೃತಿ ಸೌಂದರ್ಯದ ನುಡಿಮುತ್ತುಗಳು:

admin by admin
August 22, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಪರಿಸರ, ವನ್ಯ ಜೀವಿ ಪ್ರೇಮಿ ಗಿರಿವಾಲ್ಮಿಕಿಯವರ ಲೇಖನಿಯಿಂದ ಉದುರಿದ  ಪ್ರಕೃತಿ ಸೌಂದರ್ಯದ ನುಡಿಮುತ್ತುಗಳು:

ಅರಣ್ಯ ಬಂಗಲೆಯಿಂದ ನಾನು ಜೊತೆಗಾರ ವಿಶಾಲ್ ವಾಚರ್ ಮಂಜಪ್ಪಣ್ಣನ ಜೊತೆ ಹೊರ ಬಿದ್ದಾಗ ಬೆಳಗಿನ ಸಮಯ 5:30 EPT(Elephent proof trench) ಮಾರ್ಗವಾಗಿ ಸುಮಾರು 10,000 ಹೆಕ್ಟೇರ್ ಕಾಡಿನ ಸುತ್ತಳತೆಯನ್ನು ಗುರುತಿಸುವ ಕಾರ್ಯದಲ್ಲಿ ಪಶ್ಚಿಮ ಘಟ್ಟದ ಕಾಡುದಾರಿ ಹಿಡಿದಿದ್ದೆವು. ಬೆಳಗಿನಿಂದ ಮಧ್ಯಾಹ್ನದವರೆಗಿನ ಅಲೆದಾಟದಿಂದ ಒಂದೇ ಸಮನೆ ಸುರಿಯುತ್ತಿದ್ದ ಜಿನುಗು ಮಳೆಗೂ ಸುತ್ತಲೂ ಆವರಿಸಿದ ಮಂಜಿಗೂ ನಾವು ತೊಟ್ಟಿದ್ದ ಬಟ್ಟೆಗಳೂ ಬಹುಪಾಲು ತೇವವಾಗಿದ್ದವು.

Related posts

If you want to improve your business, get rid of bad luck and money problems, try this simple remedy using the roots of this plant.

ವ್ಯಾಪಾರದಲ್ಲಿ ಅಭಿವೃದ್ಧಿ ಕೆಟ್ಟದೃಷ್ಟಿ ಹಣದ ಸಮಸ್ಯೆ ದೂರವಾಗಬೇಂದರೆ ಈ ಗಿಡದ ಬೇರಿನಿಂದ ಈ ಸಣ್ಣ ಉಪಾಯ ಮಾಡಿ..

February 22, 2026
ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

February 21, 2026

ಆ ಮಳೆ ಗಾಳಿಯಿಂದ ಸಣ್ಣಗೆ ನೆಗಡಿ ಶುರುವಾಗಿತ್ತು ನನಗೆ ಆ ಸಣ್ಣ ಚಳಿಯ ಚಳುವಳಿಯಲ್ಲಿ ಮಂಜಪ್ಪಣ್ಣ, ಆನೆಗಳ ಬಗ್ಗೆ ಆತನಿಗಿದ್ದ ಅನುಭವದ ಕೌತುಕದ ಕಥೆಗಳನ್ನ ಹೇಳಿ ದೇಹದ ತಾಪಮಾನವನ್ನು ಆ ಸಣ್ಣ ಮಳೆಯಲ್ಲೂ ಬಿಸಿಯಾಗಿಸಿ ಬಿಡುತ್ತಿದ್ದ. ಅರಣ್ಯ ಗೃಹದಿಂದ ನಾವು ಹೊರಡುವಾಗ ಬೇಗನೇ ಹಿಂದುರುಗುತ್ತೇವೆಂದು ಭಾವಿಸಿ ನಾವು ಗಮ್ ಬೂಟ್ ಗಳನ್ನು ಧರಿಸಿದೇ ಕಾಡೊಳಗೆ ಮಿಕಗಳ ತರಹ ಹಂದಾಡುತ್ತಿದ್ದರಿಂದ ಜಿಗಣೆಗಳು ಕಂದಾಯ ರೂಪದಲ್ಲಿ ದೇಹದ ತುಸು ರಕ್ತ ಬಸಿದುಕೊಂಡವು, ರಕ್ತ ಹೀರುತ್ತಿದ್ದ ಜಿಗಣೆಗಳನ್ನ ಕಿತ್ತು ಬೀಸುಟುತ್ತಾ ಕಾಡಿನ ಎತ್ತರ ಪ್ರದೇಶದ ಹಿನ್ನೆಲೆಯಲ್ಲಿ ಬೀಸುತ್ತಿದ್ದ ಕುಳಿರ್ಗಾಳಿಗೆ ಈ ಬಯಲು ಸೀಮೆಯ ಮನಸ್ಸು ಮಾತ್ರ ಕೆಳಗೆ ಚೆಕ್ ಪೋಸ್ಟಿನ ಬಳಿ ಮಾರುತ್ತಿದ್ದ ಗೂಡಂಗಡಿಯ ಬಿಸಿ- ಬಿಸಿ ಶುಂಠಿ ಚಹಾಕ್ಕಾಗಿ ಹಂಬಲಿಸುತ್ತಿತ್ತು.

ಪಶ್ಚಿಮ ಘಟ್ಟದ ಮಳೆಕಾಡುಗಳ ಮೇಲ್ಚಾವಣಿ(Tree canopy)ಯನ್ನು ಸವರಿಕೊಂಡು ಸುರಿಯುತ್ತಿದ್ದ ಆಶ್ಲೇಷ ಮಳೆಯ ಗೋಲಕಾರದ ಹನಿಗಳು ಮರಗಳ ಕೆಳಗೆ ಕುಕ್ಕುರುಗಾಲಿನಲ್ಲಿ “ಟೀ” ಗಾಗಿ ಹಪ ಹಪಿಸುತ್ತಿದ್ದ ನನ್ನನ್ನು ಸಂತೈಸುವಂತೆ ಭಾಸವಾಗುತ್ತಿತ್ತು. ಸುತ್ತಲೂ ಮಂಜು ಮುಸುಕಿದ ಹಸಿರು ಮಿಶ್ರಿತ ಶ್ವೇತ ವಾತಾವರಣದವದೂ ಅಲ್ಲಿಂದ ಎದ್ದು ಬೆಟ್ಟದ ನಡುಭಾಗದ ಕಿಬ್ಬಿಯ ನೆತ್ತಿಯ ಮೇಲೆ, ನಾವು ಬಂದು ನಿಂತಾಗ ಆಗ ತಾನೇ ಮಬ್ಬುಗತ್ತಲು ಹರಿದು ನಿಧಾನವಾಗಿ ಬೆಳಗು ಮೂಡ ತೊಡಗಿತ್ತು. ಅದೊಂದು ಉಜ್ವಲ ಮುಂಜಾನೆ, ಜೀವನದಲ್ಲಿ ನಿರಕಾರಣ ವೈರಾಗ್ಯ, ನಶ್ವರತೆ ಮೈಗೂಡಿಸಿಕೊಂಡ ನಿರಶಾವಾದಿಯೂ ಜೀವನೋತ್ಸಾಹಿಯಾಗುವಂಥ ದೇದೀಪ್ಯಮಾನವಾದಂಥಹ ಎಳೆಯ ಬೆಳಗದು.

ಸವಿಸ್ತಾರವಾದ ಮಳೆಕಾಡು ಮೋಡದ ನೆರಳಿನಲ್ಲಿ ಕಪ್ಪಾಗಿ ಕಾಣುತ್ತಿದ್ದರೆ ಒಂದು ಕಡೆ ಮಾತ್ರ ಮೋಡದ ನೆತ್ತಿಯನ್ನು ಸೀಳಿಕೊಂಡು ಬಂದ ಸೂರ್ಯನ ಕಿರಣಗಳು ಸ್ಥಿರವಾಗಿ ಒಂದೇ ಕಡೆ ಕಾಡಿನ ಮೇಲೆ ಬೆಳಕನ್ನು ನಿರ್ದಿಷ್ಟ ಪ್ರದೇಶದ ಮೇಲೆ ಕೋಲ್ಮಿಂಚಿನಂಥ ಬೆಳ್ಳಿ ಬೆಳಕನ್ನು ಚೆಲ್ಲಿ ಇಡೀ ಕಪ್ಪಾದ ಅಡವಿಗೆ ದೃಷ್ಟಿ ಬೊಟ್ಟು ಇಟ್ಟಂತೆ ಕಂಗೂಳಿಸುತ್ತಿತ್ತು ಆ ಕ್ಷಣದಲ್ಲಿ ಸೃಷ್ಟಿಸಿದ ಅನೂಹ್ಯವಾದ ನಿಸರ್ಗದ ಕಣ್ಣು ಕೋರೈಸುವ ಚೆಲುವನ್ನು ಅಕ್ಷರಗಳಲ್ಲಿ ಕಟ್ಟಿಕೊಡುವುದು ಸದ್ಯಕ್ಕೆ ನನ್ನಿಂದಾಗದು.

ತಲೆಯ ಮೇಲೆ ಓಡುವ ಮೋಡಗಳು ಮಳೆ ನೆರಳಿನ ಪಶ್ಚಿಮ ಘಟ್ಟದ ಪ್ರದೇಶದಲ್ಲಿ ಮಾಯಕ ಲೋಕವನ್ನು ಸೃಷ್ಠಿಸಿದ್ದವು. ಕೂಗಳತೆಯ ದೂರದ ಭೂತನ ಕಾಡಿನ ಮೇಲೆ ವ್ಯೋಮ ಮಾರ್ಗದ ನಿರ್ಮಾನುಷ ಬೀದಿಗಳಲ್ಲಿ ಮೋಡಗಳು ಸಂಚರಿಸುತ್ತಾ ಮಳೆಕಾಡಿನ ಚೆಲುವಿಗೆ ಮನಸೋತು ಅಲ್ಲೇ ಶಾಶ್ವತವಾದ ನಿಲ್ದಾಣ ಮಾಡಿಕೊಂಡಿದ್ದವು. ಆ ಮೋಡದ ಗುಂಪುಗಳು ನನಗೆ ಮಾಂತ್ರಿಕ ಜೀನಿಯ ಚಾಪೆಯಂತೆ ಭಾಸವಾಗುತ್ತಿತ್ತು. ಆ ಮೋಡಗಳ ಅನುಮತಿ ಪಡೆದು ಅದರ ಮೇಲೆ ಹತ್ತಿ ಸವಾರಿ ಮಾಡುತ್ತ ಎತ್ತಲಾದರೂ ಆ ನೀಲಿ ಮೋಡದ ಚಾಪೆಯ ಮೇಲೆ ಆಕಾಶಮಾರ್ಗಿಯಂತೆ ಸಂಚರಿಸುವ ಅಲ್ಲಾವುದ್ದೀನನಂತೆ ಮೋಡದ ಮೇಲೆ ನನಗೆ ತೇಲಿ ಹೋಗಬೇಕೆನಿಸುತ್ತಿತ್ತು.!

ಇಲ್ಲಿ ಸಂಚರಿಸುವವರು ಯಾರೂ ಸಹ ಈ ನಿಸರ್ಗದ ರಮ್ಯ ಸೌಂದರ್ಯೋಪಾಸನೆಯನ್ನು ತಪ್ಪಿಸಿಕೊಳ್ಳುವಂತಿರಲಿಲ್ಲ. ರುದ್ರ ರಮಣೀಯ ಸೋಜಿಗಲ್ಲಿನಂಥಹ ಪಶ್ಚಿಮ ಘಟ್ಟದ ಸೌಂದರ್ಯಕ್ಕೆ ತೃಣರೂಪಿ ಮನುಷ್ಯ ತಲೆಬಾಗದೇ ಇರಲಾಗುವುದಿಲ್ಲ. ದಿಗ್ದಿಗಂತವಾಗಿ ಗಾಂಭೀರ್ಯದಿಂದ ಹಬ್ಬಿದ ಈ ಮಲೆಯೊಳಗೆ ಹೊರ ಜಗತ್ತಿಗೆ ಬಿಟ್ಟು ಕೊಡದ ಕಡು ಮೌನದ ನೀರವತೆ ಇದೆ. ಗಾಢ ವಿಷಾದವಿದೆ! ಎಷ್ಟೋ ಕೌತುಕಗಳು ಅಡಗಿವೆ. ಹಾಗೂ ಅನನ್ಯ ಸೌಂದರ್ಯ ರಾಶಿಯ ಮಡಿಲಲ್ಲೂ ನಿಗೂಢತೆಯನ್ನು ಇಂದಿಗೂ ಕಾಫಿಟ್ಟುಕೊಂಡು ಮನುಷ್ಯ ಜಗತ್ತಿಗೆ ಬಿಟ್ಟುಕೊಡದ ಕುತೂಹಲವಿದೆ. ಭೀಕರತೆ ಇದೆ!

ನಮ್ಮನ್ನು ಪೊರೆಯುವ ಜೀವ ಕಾರುಣ್ಯದ ಈ ಪ್ರಕೃತಿಯ ಮುಂದೆ ಮನುಷ್ಯ ಸಂಕುಲ ಯಾವತ್ತಿದ್ದರೂ ತೃಣಕ್ಕೆ ಸಮಾನವೆಂಬ ಸಾರ್ವಕಾಲಿಕ ಜ್ಞಾನೋದಯ ಶಾಶ್ವತವಾಗಿ ಮನದಲ್ಲಿ ಮೂಡಿತು. ವಿಶಾಲ್ ಮತ್ತು ಮಂಜಪ್ಪಣ್ಣ ಆಗೋ ಹಸುರು ಕೇಕನ್ನು ಕತ್ತರಿಸಿದಂತೆ ಅಲ್ಲಿ ಕಾಣಿಸುತ್ತಿದೆಯಲ್ಲಾ ಅದು “ಕೆಳಗೂರು” ಈಗ ಕೆಳಗಿಳಿದು ಬಿಸಿ “ಟೀ” ಕುಡಿಯೋಣಾ ನಡಿ ಎಂದು ಹೆಗಲ ಮೇಲೆ ಕೈ ಹಾಕಿ ಹೊರಟರು ಎಂದಿನಂತೆ ಮೋಡ ಬೆನ್ನ ಹಿಂದೆ ಮತ್ತೆ ಘನೀಕರಣಗೊಳ್ಳತೊಡಗಿತು..

ಲೇಖನ :- ಗಿರಿವಾಲ್ಮೀಕಿ
ಪರಿಸರ ಹಾಗೂ ವನ್ಯ ಜೀವಿ ಪ್ರೇಮಿ, ಪರಿಸರ ಹೋರಾಟಗಾರ
ಬೆಂಗಳೂರು

Tags: #Elephent proof trench#Environmental and Wildlife lover#saakshatv.comForestkarnatakawestern ghats
ShareTweetSendShare
Join us on:

Related Posts

If you want to improve your business, get rid of bad luck and money problems, try this simple remedy using the roots of this plant.

ವ್ಯಾಪಾರದಲ್ಲಿ ಅಭಿವೃದ್ಧಿ ಕೆಟ್ಟದೃಷ್ಟಿ ಹಣದ ಸಮಸ್ಯೆ ದೂರವಾಗಬೇಂದರೆ ಈ ಗಿಡದ ಬೇರಿನಿಂದ ಈ ಸಣ್ಣ ಉಪಾಯ ಮಾಡಿ..

by admin
February 22, 2026
0

ವ್ಯಾಪಾರದಲ್ಲಿ ಅಭಿವೃದ್ಧಿ ಕೆಟ್ಟದೃಷ್ಟಿ ಹಣದ ಸಮಸ್ಯೆ ದೂರವಾಗಬೇಂದರೆ ಈ ಗಿಡದ ಬೇರಿನಿಂದ ಈ ಸಣ್ಣ ಉಪಾಯ ಮಾಡಿ.. ಮಂಗಳವಾರದಂದು ಈ ಗಿಡದ ಕಾಯಿಯಿಂದ ಅಥವಾ ಬೇರಿನಿಂದ ಪೂಜೆಯನ್ನು...

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

ಮುಡಾ ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣ ಅರೆಸ್ಟ್

by Shwetha
February 21, 2026
0

ಮುಡಾ (MUDA) ಪ್ರಕರಣದ ದೂರುದಾರ ಸ್ನೇಹಮಯಿ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮುಡಾ ಮಾಜಿ ಆಯುಕ್ತ ನಟೇಶ್ ಮುಂಬಡ್ತಿ ಪಡೆಯಲು ಹಣ ನೀಡಿರುವುದಾಗಿ ಗಂಭೀರ ಆರೋಪ ಮಾಡಿದ್ದ...

ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

ಮೋಸ್ಟ್ ವಾಂಟೆಡ್ ಉಗ್ರನ ಸುಳಿವು ನೀಡಿದರೆ ₹5 ಲಕ್ಷ ಬಹುಮಾನ ಘೋಷಣೆ

by Shwetha
February 21, 2026
0

ಮೋಸ್ಟ್ ವಾಂಟೆಡ್ ಉಗ್ರ ಶಂಕಿತ ಜುನೈದ್ ಅಹಮದ್‌ ಬಗ್ಗೆ ಸುಳಿವು ನೀಡಿದವರಿಗೆ ₹5 ಲಕ್ಷ ಬಹುಮಾನ ನೀಡುವುದಾಗಿ ರಾಷ್ಟ್ರೀಯ ತನಿಖಾ ಏಜೆನ್ಸಿ (NIA) ಘೋಷಿಸಿದೆ. ಕಳೆದ ಮೂರು...

ಅಂಬಾನಿಗೆ 1 ಲಕ್ಷ ಕೋಟಿ ಲಾಭ ಮಾಡಿಕೊಟ್ಟಿದ್ದೇಕೆ, ಬಿಎಸ್‌ಎನ್‌ಎಲ್ ಕೊಂದಿದ್ದೇಕೆ: ಮೋದಿ ಸರ್ಕಾರದ ವಿರುದ್ಧ ಸಚಿವ ಲಾಡ್ ಕೆಂಡಾಮಂಡಲ

ಅಂಬಾನಿಗೆ 1 ಲಕ್ಷ ಕೋಟಿ ಲಾಭ ಮಾಡಿಕೊಟ್ಟಿದ್ದೇಕೆ, ಬಿಎಸ್‌ಎನ್‌ಎಲ್ ಕೊಂದಿದ್ದೇಕೆ: ಮೋದಿ ಸರ್ಕಾರದ ವಿರುದ್ಧ ಸಚಿವ ಲಾಡ್ ಕೆಂಡಾಮಂಡಲ

by Shwetha
February 21, 2026
0

ಹುಬ್ಬಳ್ಳಿ: ದೇಶದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ಸಂಸ್ಥೆಯನ್ನು ಮೂಲೆಗುಂಪು ಮಾಡಿ, ಖಾಸಗಿ ಉದ್ಯಮಿ ಅಂಬಾನಿಯವರ ಜಿಯೋ ಸಂಸ್ಥೆಗೆ ಅತೀ ಹೆಚ್ಚು ಲಾಭ ಮಾಡಿಕೊಡಲಾಗಿದೆ ಎಂದು ರಾಜ್ಯ ಕಾರ್ಮಿಕ...

ಕಮಿಷನ್ ಚೋರ್ ಸರ್ಕಾರ ಕಾಮ್ ಚೋರ್ ಮಂತ್ರಿಗಳು: ಸಿಎಂ ಸಿದ್ದರಾಮಯ್ಯ ಸಂಪುಟದ ವಿರುದ್ಧ ಆರ್ ಅಶೋಕ್ ಕೆಂಡಾಮಂಡಲ

ಕಮಿಷನ್ ಚೋರ್ ಸರ್ಕಾರ ಕಾಮ್ ಚೋರ್ ಮಂತ್ರಿಗಳು: ಸಿಎಂ ಸಿದ್ದರಾಮಯ್ಯ ಸಂಪುಟದ ವಿರುದ್ಧ ಆರ್ ಅಶೋಕ್ ಕೆಂಡಾಮಂಡಲ

by Shwetha
February 21, 2026
0

ಬೆಂಗಳೂರು: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ತೀವ್ರ ವಾಗ್ದಾಳಿ ನಡೆಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram