ರಾಷ್ಟ್ರಕವಿ ಕುವೆಂಪು ಅವರಿಗೆ ಶಿಕ್ಷಣ ಇಲಾಖೆಯಿಂದ ಅವಮಾನ
ಶಿಕ್ಷಣ ಇಲಾಖೆ ವಿರುದ್ಧ ಸಾಹಿತಿಗಳು ,ಶಿಕ್ಷಕರು , ವಿಚಾರವಾದಿಗಳು ,ಮ ನೆಟ್ಟಿಗರು ಗರಂ
ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆ ಎಂದು ಉಲ್ಲೇಖ
ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಎಡವಟ್ಟು
ವಿವಾದಾತ್ಮಕ ಪಠ್ಯದ ಬರಹವನ್ನು ಸರಿ ಪಡಿಸದೇ ಹೋದರೆ ಪ್ರತಿಭಟನೆ ಎಚ್ಚರಿಕೆ
ಶಿಕ್ಷಣ ಇಲಾಖೆಯು ಮಹಾ ಎಡವಟ್ಟೊಂದನ್ನ ಮಾಡಿದ್ದು ಅನೇಕರ ಕೆಂಗಣ್ಣಿಗೆ ಗುರಿಯಾಗಿದೆ.. ಸೋಷಿಯಲ್ ಮೀಡಿಯದಲ್ಲಿ ನೆಟ್ಟಿಗರು ಆಕ್ರೋಶ ಹೊರಹಾಕುತ್ತಿದ್ದಾರೆ.. ಸಾಹಿತಿಗಳು ,ಶಿಕ್ಷಕರು , ವಿಚಾರವಾದಿಗಳು ಕೂಡ ಕೆಂಡ ಕಾರುತ್ತಿದ್ದಾರೆ..
ನಾಲ್ಕನೇ ತರಗತಿಯ ಪರಿಸರ ಅಧ್ಯಯನ ಪಠ್ಯದಲ್ಲಿ ಕವಿ ಕುವೆಂಪು ಕಥೆ, ಕವನ ಬರೆಯುವ, ಪುಸ್ತಕ ಓದುವ ಅಭ್ಯಾಸವಿತ್ತು. ಅವರು ಅನೇಕರ ಪ್ರೋತ್ಸಾಹದಿಂದ ಪ್ರಖ್ಯಾತಿ ಆಗಿದ್ದಾರೆ ಎಂದು ಮುದ್ರಿಸಲಾಗಿದೆ..
ಇದೀಗ ಶಿಕ್ಷಣ ಇಲಾಖೆ ಎಡವಟ್ಟಿಗೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದೆ.. ಅಲ್ಲದೇ ಕುವೆಂಪು ಅವರು ತಮ್ಮ ಸ್ವಂತ ಶ್ರಮದಿಂದ, ಸಾಹಿತ್ಯ ಕೃಷಿಯ ಮೂಲಕ ಮಹಾನ್ ಕವಿಯಾದವರು..
ರಾಷ್ಟ್ರಕವಿಗೆ ಶಿಕ್ಷಣ ಇಲಾಖೆ ಅಪಮಾನ ಮಾಡಿದೆ. ಕೂಡಲೇ ಕುವೆಂಪು ಬಗ್ಗೆ ಇರುವಂತ ವಿವಾದಾತ್ಮಕ ಪಠ್ಯದ ಬರಹವನ್ನು ಸರಿ ಪಡಿಸದೇ ಹೋದರೆ ಪ್ರತಿಭಟನೆ ನಡೆಸುವುದಾಗಿಯೂ ಎಚ್ಚರಿಸಲಾಗ್ತಿದೆ..