ರಾಜಕೀಯಕ್ಕೆ ಗುಡ್ ಬೈ ಹೇಳಿದ ಶಶಿಕಲಾ ನಟರಾಜನ್ !
ಚೆನ್ನೈ, ಮಾರ್ಚ್03: ಆಡಳಿತಾರೂಢ ಎಐಎಡಿಎಂಕೆ ಯ ಮಾಜಿ ಮುಖ್ಯಸ್ಥೆ ವಿ.ಕೆ.ಶಶಿಕಲಾ ನಟರಾಜನ್, ರಾಜಕೀಯಕ್ಕೆ ಗುಡ್ ಬೈ ಹೇಳುವುದಾಗಿ ಘೋಷಿಸಿದ್ದಾರೆ
ಜನವರಿಯಲ್ಲಿ ಬೆಂಗಳೂರು ಜೈಲಿನಿಂದ ಬಿಡುಗಡೆಯಾದ ಶಶಿಕಲಾ ಮುಂದಿನ ತಿಂಗಳ ಚುನಾವಣೆಯಲ್ಲಿ ಪಕ್ಷದ ನೇತೃತ್ವ ವಹಿಸುವ ಮತ್ತು ಮುಖ್ಯಮಂತ್ರಿ ಹುದ್ದೆ ಅಭ್ಯರ್ಥಿ ಎಂದು ನಿರೀಕ್ಷಿಸಲಾಗಿತ್ತು. ಇದೀಗ ರಾಜಕೀಯಕ್ಕೆ ಗುಡ್ ಬೈ ಹೇಳುವ ಮೂಲಕ ತಮಿಳುನಾಡಿನ ಆಡಳಿತಾರೂಢ ಎಐಎಡಿಎಂಕೆ ಯ ಮಾಜಿ ಮುಖ್ಯಸ್ಥೆ ವಿ.ಕೆ.ಶಶಿಕಲಾ ಅವರು ರಾಜಕೀಯ ಮತ್ತು ಸಾರ್ವಜನಿಕ ಜೀವನವನ್ನು ತೊರೆದಿದ್ದಾರೆ.
“ಜಯ ಜೀವಂತವಾಗಿರುವಾಗಲೂ ನಾನು ಅಧಿಕಾರ ಅಥವಾ ಸ್ಥಾನದ ಆಸೆ ಪಡಲಿಲ್ಲ. ಅವಳು ಮೃತಪಟ್ಟ ನಂತರವೂ ನನಗೆ ಅದು ಬೇಕಿಲ್ಲ. ನಾನು ರಾಜಕೀಯದಿಂದ ದೂರವಿರುತ್ತೇನೆ” ಎಂದು ದಿವಂಗತ ಮಾಜಿ ಮುಖ್ಯಮಂತ್ರಿ ಜೆ.ಜಯಲಲಿತಾ ಅವರ ಅಪ್ತೆ ಶಶಿಕಲಾ ನಟರಾಜನ್ ಪತ್ರದಲ್ಲಿ ಬರೆದಿದ್ದಾರೆ.
ಎಐಎಡಿಎಂಕೆ ವಿಜಯಕ್ಕಾಗಿ ನಾನು ದೇವರು ಮತ್ತು ನನ್ನ ಸಹೋದರಿ ಜಯಲಲಿತಾ ಗೆ ಪ್ರಾರ್ಥನೆ ಸಲ್ಲಿಸುತ್ತೇನೆ. ಎಐಎಡಿಎಂಕೆ ಬೆಂಬಲಿಗರು ಒಟ್ಟಾಗಿ ಕೆಲಸ ಮಾಡಿ ಡಿಎಂಕೆ ಯನ್ನು ಸೋಲಿಸೋಣ. ಈ ನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಕೆಲಸ ಮಾಡಬೇಕೆಂದು ನಾನು ಒತ್ತಾಯಿಸುತ್ತೇನೆ ಎಂದು ಬರೆದಿದ್ದಾರೆ.
ಎಐಎಡಿಎಂಕೆ ಜೊತೆ ಮೈತ್ರಿ ಮಾಡಿಕೊಂಡಿರುವ ಬಿಜೆಪಿಗೆ ಎಂ.ಎಸ್.ಶಶಿಕಲಾ ಅವರು 2019 ರ ಚುನಾವಣೆಯಂತೆ ಮತಗಳು ವಿಭಜನೆಯಾಗದಂತೆ ಎಐಎಡಿಎಂಕೆ ಒಗ್ಗೂಡಿಸಲು ಕೆಲಸ ಮಾಡುತ್ತಿರುವುದಕ್ಕೆ ಧನ್ಯವಾದಗಳನ್ನು ಅರ್ಪಿಸಿದ್ದಾರೆ.
ತಮಿಳುನಾಡಿನಲ್ಲಿ ಚಿನ್ನಮ್ಮ ಎಂದೇ ಪ್ರಖ್ಯಾತಿ ಪಡೆದಿರುವ ಶಶಿಕಲಾ ನಟರಾಜನ್ ತಮಿಳುನಾಡಿನಲ್ಲಿ ಅಪಾರ ಜನಮನ್ನಣೆ ಗಳಿಸಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದಡಿಯಲ್ಲಿ ಆರೋಪಿಯಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ ಶಶಿಕಲಾ ಜನವರಿಯಲ್ಲಿ ಜೈಲಿನಿಂದ ಬಿಡುಗಡೆಯಾಗಿದ್ದರು.
ಮೂತ್ರಪಿಂಡದಲ್ಲಿ ಕಲ್ಲು (ಕಿಡ್ನಿ ಸ್ಟೋನ್ )ಗಳ ರಚನೆಗೆ ಕಾರಣವಾಗುವ ಕೆಲವು ತರಕಾರಿಗಳು https://t.co/7SN7tqpsgH
— Saaksha TV (@SaakshaTv) February 25, 2021
ಎಸ್ಬಿಐ ಗ್ರಾಹಕರಿಗೆ ಗುಡ್ ನ್ಯೂಸ್ - ಕೇವಲ ಒಂದು ಮಿಸ್ ಕಾಲ್ ನೀಡಿ 20 ಲಕ್ಷದವರೆಗೆ ಸಾಲ ಪಡೆಯಿರಿ https://t.co/TNAZg7qahU
— Saaksha TV (@SaakshaTv) February 25, 2021
ಅನ್ನ ಮಿಕ್ಕಿದ್ದರೆ ತಯಾರಿಸಿ ಸಿಹಿಯಾದ ರಸಗುಲ್ಲಾ ! https://t.co/V946jFPPRm
— Saaksha TV (@SaakshaTv) February 25, 2021