ಮನೆಯಿಂದ ಹೊರ ಹಾಕಿದ ಮಕ್ಕಳಿಗೆ ಕಾನೂನು ರೀತಿಯಲ್ಲಿ ತಂದೆ ಹೇಗೆ ಪಾಠ ಕಲಿಸಿದರು ನೋಡಿ..!
ಕೊಪ್ಪಳ : ಕಷ್ಟಪಟ್ಟು ಬೆಳೆಸಿ , ಮಕ್ಕಳ ಭವಿಷ್ಯ ರೂಪಿಸುವ ತಂದೆ ತಾಯಿಯನ್ನ ಮಕ್ಕಳು ಕೊನೆ ಘಳಿಗೆಯಲ್ಲಿ ಮನೆಯಿಂದ ಆಚೆ ದಬ್ಬಿರುವ ಎಷ್ಟೋ ಪ್ರಕರಣಗಳು ಬೆಳಕಿಗೆ ಬಂದಿವೆ. ಅದ್ರಂತೆ ಕೊಪ್ಪಳದ ಲೇಬಗೇರಿ ನಿವಾಸಿಯಾಗಿರುವ ನಿಂಗಪ್ಪ ತಮ್ಮನ್ನ ಮನೆಯಿಂದ ಆಚೆ ದಬ್ಬಿದ ಮಕ್ಕಳಿಗೆ ತಕ್ಕ ಪಾಠ ಕಲಿಸಿದ್ದಾರೆ. ಮನೆಯಿಂದ ಹೊರದಬ್ಬಿದ್ದ ಮಕ್ಕಳಿಂದ ತಮ್ಮ ಆಸ್ತಿಯನ್ನು ಕಾನೂನು ಹೋರಾಟ ನಡೆಸಿ ವಾಪಸ್ ಪಡೆದುಕೊಂಡಿದ್ದಾರೆ.
ಮ್ಯಾನ್ಮಾರ್ ಸೇನಾ ದಂಗೆ : ಭಾರತ- ಅಮೆರಿಕ ಚರ್ಚೆ..!
ಹೌದು ಕಲಾವಿದರಾಗಿರುವ ನಿಂಗಪ್ಪ ಅವರ ಹೆಸರಿನಲ್ಲಿದ್ದ ಆಸ್ತಿಯಲ್ಲಿ ಮಕ್ಕಳು ಮಜಾ ಮಾಡ್ತಿದ್ದರು. ಆದ್ರೆ ಅವರನ್ನ ಮನೆಯಿಂದ ಹೊರದಬ್ಬಿದ್ದರು. ಇತ್ತ ನಿಂಗಪ್ಪ 2000 ರೂ. ಪಿಂಚಣಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ. ಇತ್ತ ಔಷಧ ಖರ್ಚಿಗೆ, ಜೀವನಕ್ಕೆ ಹಣವಿಲ್ಲದೆ ನಿಂಗಪ್ಪ ಒದ್ದಾಡ್ತಿದ್ದರು, ಮಕ್ಕಳು ಈ ಬಗ್ಗೆ ಕ್ಯಾರೆ ಅನ್ನುತ್ತಿರಲಿಲ್ಲ. ನಿಂಗಪ್ಪ ಹೆಸರಿನಲ್ಲಿದ್ದ 4.37 ಎಕರೆ ಜಮೀನು ಅನುಭವಿಸುತ್ತಿದ್ದ ಮಕ್ಕಳು ಬೇರೆಯವರಿಗೆ ಸಾಗುವಳಿಗೆ ಜಮೀನು ನೀಡಿದ್ದು ಅದರಿಂದ ಬಂದ ಆದಾಯವನ್ನು ಅವರೇ ತೆಗೆದುಕೊಳ್ಳುತ್ತಿದ್ದರು.
ಅಪ್ರಾಪ್ತೆ ಮೇಲೆ ಅತ್ಯಾಚಾರ , ಬ್ಲಾಕ್ ಮೇಲ್ : ಇಬ್ಬರ ಬಂಧನ..!
ಇದರಿಂದಾಗಿ ಮಕ್ಕಳ ವಿರುದ್ಧ ನಿಂಗಪ್ಪ ಎಸಿ ಕೋರ್ಟ್ ಮೆಟ್ಟಿಲೇರಿದ್ದು ಹಿರಿಯ ನಾಗರಿಕರ ರಕ್ಷಣಾ ಕಾಯ್ದೆ ಅನ್ವಯ ನಿಂಗಪ್ಪರಿಗೆ ವಾಪಸ್ ಜಮೀನು ನೀಡಲಾಗಿದೆ. ಮಕ್ಕಳು ಅವರನ್ನು ಮನೆಯಿಂದ ಹೊರ ಹಾಕಿದ್ದರು. ಜೀವನಾಂಶಕ್ಕೆ ಪ್ರತಿ ತಿಂಗಳು ತಂದೆಗೆ 8000 ರೂಪಾಯಿ ನೀಡಲು ಆದೇಶಿಸಲಾಗಿದೆ. ತಮ್ಮ ಜಮೀನು ವಾಪಸ್ ಪಡೆದುಕೊಂಡ ನಿಂಗಪ್ಪ ತಮ್ಮ ಜೀವನದ ಅಂತ್ಯಕಾಲದಲ್ಲಿ ತಮ್ಮನ್ನು ನೋಡಿಕೊಳ್ಳುವವವರಿಗೆ ಜಮೀನು ಕೊಡುವುದಾಗಿ ಹೇಳಿಕೊಂಡಿದ್ದಾರೆ. ಒಟ್ಟಾರೆ ಜನ್ಮ ನೀಡಿದ ತಂದೆಯ ಆಸ್ತಿ ಬೇಕು ಆದ್ರೆ ಅವರಿಗೆ ಆಶ್ರಯವಾಗಲ್ಲ ಎಂದು ದುರಂಕಾರದಲ್ಲಿ ತಂದೆಯನ್ನೇ ಬೀದಿ ಪಾಲು ಮಾಡಿದ್ದ ಮಕ್ಕಳಿಗೆ ತಕ್ಕ ಶಾಸ್ತಿಯೇ ಆಗಿದೆ.
ಕೇಂದ್ರ ಸರ್ಕಾರದ ಖಡಕ್ ಸೂಚನೆಗೆ ಬೆಚ್ಚಿಬಿದ್ದ ಟ್ವಿಟ್ಟರ್ – 700 ಕ್ಕೂ ಅಧಿಕ ಅಕೌಂಟ್ ಗಳು ಬ್ಲಾಕ್
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel