ರಾಯಚೂರು : ಜಮೀನು ವಿವಾದ (Land Dispute)ದ ಹಿನ್ನೆಲೆಯಲ್ಲಿ 9 ಎಕರೆಯಲ್ಲಿ ಬೆಳೆದಿದ್ದ ಹತ್ತಿಯನ್ನು ಸಂಬಂಧಿಕರೇ ನಾಶ ಮಾಡಿರುವ ಘಟನೆ ಜಿಲ್ಲೆಯ ಮಾನ್ವಿ ತಾಲೂಕಿನ ಕುರಡಿ ಗ್ರಾಮದಲ್ಲಿ ನಡೆದಿದೆ.
ನಾಲ್ಕು ತಿಂಗಳ ಬೆಳೆಯನ್ನು ಸಂಬಂಧಿಕರೇ ಎಲ್ಲರ ಎದುರು ನಾಶ ಮಾಡಿದ್ದಾರೆ. ಈ ಭೂಮಿಯಲ್ಲಿ ನರಸಿಂಹ ಹಾಗೂ ಹುಲಿಗೆಪ್ಪ ಕುಟುಂಬ ಉಳುಮೆ ಮಾಡುತ್ತಿದ್ದರು. ಜಮೀನಿನಲ್ಲಿದ್ದ ಹತ್ತಿ ಬೆಳೆಯನ್ನು ಅಬ್ರಾಹಂಪ್ಪ, ಮಾರೆಪ್ಪ, ಪ್ರಭಾಕರ್ ಸೇರಿದಂತೆ ಕೆಲವರು ನಾಶ ಮಾಡಿದ್ದಾರೆ ಎಂದು ಆ ರೈತರು ಆರೋಪಿಸಿದ್ದಾರೆ.
ಈ ವರ್ಷ ಸರಿಯಾಗಿ ಮಳೆಯಾಗಿರಲಿಲ್ಲ. ಇದರ ಮಧ್ಯೆಯೇ ಈ ರೈತರು ಉತ್ತಮವಾಗಿ ಬೆಳೆ ಬೆಳೆದು, ಇನ್ನೇನು ಫಸಲು ಕೈ ಸೇರಲಿದೆ ಎಂದು ಭಾವಿಸಿದ್ದರು. ಅಷ್ಟರಲ್ಲಿಯೇ ನಾಶಮಾಡಿದ್ದಾರೆ. ಸದ್ಯ ಘಟನೆಗೆ ಸಂಬಂಧಿಸಿದಂತೆ 28 ಜನರ ವಿರುದ್ಧ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.