ADVERTISEMENT
Sunday, July 5, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

fifa world cup 2026- ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

admin by admin
July 4, 2026
in Newsbeat, Sports, ಕ್ರೀಡೆ
Romelu Lukaku

Romelu Lukaku

Share on FacebookShare on TwitterShare on WhatsappShare on Telegram

ಬಡತನಕೆಸರಿನಲ್ಲಿ ಅರಳಿದ ಕಪ್ಪು ವಜ್ರ…! ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?

ಅಮ್ಮನ ಎದೆ ಹಾಲು.. ಅಪ್ಪನ ರಕ್ತದ ಬೆವರು… ಅಜ್ಜನ ಪ್ರೀತಿ..!
ಆತನೇ ಹೇಳುವಂತೆ ಈ ಮೂರು ಶಕ್ತಿಗಳು ಇಲ್ಲದೆ ಇರುತ್ತಿದ್ರೆ ಇಂದು ಎಲ್ಲೋ ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸಬೇಕಾಗಿತ್ತು.

Related posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

July 5, 2026
ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

July 5, 2026

ಆದ್ರೆ ಆತನ ಬದುಕು ಹಾಗಲಿಲ್ಲ. ಕಳೆದ 33 ವರ್ಷಗಳಲ್ಲಿ ಯಾರು ಊಹೆ ಮಾಡದ ಎತ್ತರಕ್ಕೆ ಬೆಳೆದು ನಿಂತ. ಎಲ್ಲರಿಗೂ ಸ್ಪೂರ್ತಿ, ಮಾದರಿಯಾಗುವಂತಹ ಮನುಷ್ಯನಾದ. ಕತ್ತಲೆಯಿಂದ ಬೆಳಕಿನೆಡೆಗೆ ಸಾಗಿ ಬಂದ ಈತ ಈಗ ಪ್ರಖರವಾಗಿ ಹೊಳೆಯುತ್ತಿದ್ದಾನೆ. ಯಾರು ಆತನ ಬಗ್ಗೆ ಅನುಮಾನ ಪಟ್ಟರೋ, ಯಾರು ಆತನ ಬಗ್ಗೆ ಕೀಳಾಗಿ ಮಾತನಾಡಿದ್ರೋ, ಇಂದು ಅವರೆಲ್ಲರೂ ಪ್ರೀತಿಯಿಂದ ಆರಾಧಿಸುವಂತಹ ವ್ಯಕ್ತಿಯಾದ. ಈತನ ದೇಶವೇ ಕೊಂಡಾಡುವಂತಹ ಕಣ್ಮನಿಯಾದ.

ಅದ್ಭುತ ಆಟಗಾರನ ಬದುಕಿನ ಚಿತ್ರಣ..!

ಫುಟ್‍ಬಾಲ್ ಅಭಿಮಾನಿಗಳಿಗೆ ಈತನ ಹೆಸರು ಚಿರಪರಿಚಿತ. ಮಾಂಚೆಸ್ಟರ್ ಯುನೈಟೆಡ್, ಇಂಟರ್‍ಮಿಲನ್, ಚೆಲ್ಸಿಯಾ, ನೆಪೋಲಿ ತಂಡಗಳ ಪ್ರಮುಖ ಸ್ಟ್ರೈಕರ್. ಬೆಲ್ಜಿಯಂ ತಂಡದ ಸೂಪರ್ ಸ್ಟಾರ್. ಫುಟ್‍ಬಾಲ್ ಜಗತ್ತಿನ ದುಬಾರಿ ಬೆಲೆಯ ಆಟಗಾರ. ಆದ್ರೆ ಈ ಮಹಾನ್ ಆಟಗಾರನ ಬದುಕಿನ ಬವಣೆಯ ಚಿತ್ರಣವನ್ನು ಕೇಳಿದ್ರೆ ಎಂಥವರ ಮನಸ್ಸು ಕೂಡ ಕರಗಿ ಹೋಗುತ್ತೆ.

ಅಂದ ಹಾಗೇ ಇದು ಬಡತನದ ಕೆಸರಿನಲ್ಲಿ ಅರಳಿದ ಪ್ರತಿಭೆ. ಕಿತ್ತು ತಿನ್ನುವ ಬಡತನ. ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದ ಕುಟುಂಬದ ಹುಡುಗ. ಹಾಗಂತ ಇದೇನು ಕಟ್ಟು ಕಥೆಯಲ್ಲ. ಬದಲಾಗಿ ಒಬ್ಬ ಅಪ್ರತಿಮ ಫುಟ್‍ಬಾಲ್ ಆಟಗಾರನ ಬದುಕಿನ ನೈಜ ದರ್ಪನ.

ನೀರು ಮಿಶ್ರಿತ ಹಾಲು, ಬ್ರೆಡ್ ಇದುವೇ ಈ ಆಟಗಾರನಿಗೆ ಪೌಷ್ಠಿಕ ಆಹಾರ..!

ಉತ್ತರ ಬೆಲ್ಜಿಯಂನ ಆಂಟ್ವೆರೆಪ್ ನಗರವೇ ಈ ಬಡ ಫುಟ್‍ಬಾಲ್ ಆಟಗಾರನ ಹುಟ್ಟೂರು. ತಂದೆ ಕೂಡ ಸ್ಥಳೀಯ ಫುಟ್‍ಬಾಲ್ ಆಟಗಾರ. ತಾಯಿ ಗೃಹಿಣಿ. ಒಬ್ಬ ತಮ್ಮನಿದ್ದಾನೆ. ಅಷ್ಟಕ್ಕೂ ಈತನ ತಂದೆ ರೋಜರ್ ಸ್ಥಳೀಯ ಕ್ಲಬ್ ಟೂರ್ನಿಗಳಲ್ಲಿ ಸಾಕಷ್ಟು ಹೆಸರು ಮಾಡಿದ್ದ. ಆದ್ರೆ ಫುಟ್‍ಬಾಲ್ ಆಟದಿಂದ ದುಡ್ಡು ಬರಲಿಲ್ಲ. ಉದ್ಯೋಗನೂ ಸಿಗಲಿಲ್ಲ. ಮನೆಯಲ್ಲಿ ಬಡತನ ಎಂಬುದು ದರಿದ್ರದಂತೆ ಕಾಡುತ್ತಿತ್ತು. ಇಬ್ಬರು ಮಕ್ಕಳು ಸೇರಿ ನಾಲ್ವರ ಜೀವನ ಸಾಗಿಸಲು ಈ ಹುಡುಗನ ಅಪ್ಪ -ಅಮ್ಮ ಪಡುತ್ತಿದ್ದ ಕಷ್ಟ ಅಷ್ಟಿಷ್ಟಲ್ಲ. ಆದ್ರೂ ಎಳೆಯ ಮಕ್ಕಳಿಗೆ ಬಡತನದ ಬೇಗೆ ಗೊತ್ತಾಗದಂತೆ ನೋಡಿಕೊಳ್ಳುತ್ತಿದ್ದರು.

ಆದ್ರೆ ಬುದ್ದಿ ಬರುವಷ್ಟರಲ್ಲಿ ತಮ್ಮ ಮನೆಯ ಕಡು ಬಡತನದ ಪರಿಸ್ಥಿತಿ ಈ ಹುಡುಗನ ಅರಿವಿಗೆ ಬಂತು. ಆರನೇ ವಯಸ್ಸಿಗೆ ಅಪ್ಪ – ಅಮ್ಮ ಪಡುತ್ತಿರುವ ಬದುಕಿನ ಯಾತನೆ ಸ್ಪಷ್ಟವಾಗಿ ಗೊತ್ತಾಗುತ್ತಿತ್ತು. ತಾವು ಹಸಿವಿನ ಸಂಕಟ ಅನುಭವಿಸಿದ್ರೂ ಮಕ್ಕಳ ಹಸಿವನ್ನು ನೀಗಿಸಲು ಪಡಬಾರದ ಕಷ್ಟÀ ಅನುಭವಿಸಿದ್ದರು. ಮನೆಯ ಪಕ್ಕದ ಬೆಕರಿಯಿಂದ ಸಾಲ ಮಾಡಿಕೊಂಡು ಹಾಲು ಬ್ರೆಡ್ ತಂದು ಮಕ್ಕಳ ಹಸಿವನ್ನು ನೀಗಿಸುತ್ತಿದ್ದರು. ಕೆಲವೊಂದು ಬಾರಿ ಹಸಿವಿನಿಂದ ಮಕ್ಕಳೂ ಆಳುತ್ತಾ ಕೂರುತ್ತಿದ್ದರು. ಶಾಲೆಯಿಂದ ಮನೆಗೆ ಬಂದಾಗ ತಾಯಿ, ನೀರಿಗೆ ಹಾಲು ಮಿಶ್ರಣ ಮಾಡಿ ಮಕ್ಕಳಿಗೆ ಕೊಡುತ್ತಿದ್ದರು. ಎಷ್ಟೇ ಬಡತನವಿದ್ರೂ ಮಕ್ಕಳಿಗೆ ಗೊತ್ತಾಗಬಾರದು ಅಂತ ನಗುಮುಖದೊಂದಿಗೆ ಮಕ್ಕಳನ್ನು ಸಮಾಧಾನಪಡಿಸುತ್ತಿದ್ದಳು. ತನ್ನ ತಾಯಿಯ ಮನಸ್ಸನ್ನು ಈ ಖ್ಯಾತ ಆಟಗಾರ ಈಗಲೂ ನೆನಪಿಸಿಕೊಳ್ಳುತ್ತಾನೆ.

ತನ್ನ ನಾಲ್ಕನೇ ವಯಸ್ಸಿನಲ್ಲಿ ಮನೆಯ ಹತ್ತಿರದಲ್ಲಿದ್ದ ಪಾರ್ಕ್‍ನಲ್ಲಿ ಈ ಬಾಲಕ ಫುಟ್‍ಬಾಲ್ ಆಡುತ್ತಿದ್ದ. ಪುಟ್ಟ ಕಾಲುಗಳಿಂದ ಚೆಂಡನ್ನು ಒದೆಯುತ್ತಿದ್ದ. ಸುಸ್ತಾಗಿ ಮನೆಗೆ ಬಂದ್ರೆ ಊಟ ತಿಂಡಿ ಏನು ಸಿಗುತ್ತಿರಲಿಲ್ಲ. ನೀರು ಮಿಶ್ರಿತ ಹಾಲು, ಬ್ರೆಡ್ ಇದುವೇ ಈ ಆಟಗಾರನಿಗೆ ಬಾಲ್ಯದಲ್ಲಿ ಸಿಗುತ್ತಿದ್ದ ಪೌಷ್ಠಿಕ ಆಹಾರ. ಇಂತಹ ಪರಿಸ್ಥಿತಿಯಲ್ಲೂ ಫುಟ್‍ಬಾಲ್ ಆಟದ ಮೇಲೆ ಮಾತ್ರ ಅಪಾರ ಪ್ರೀತಿ, ಆಸಕ್ತಿ ಹೊಂದಿದ್ದನು. ಕಾರಣ ಫುಟ್‍ಬಾಲ್ ಆಟ ಆತನ ರಕ್ತದಲ್ಲೇ ಹರಿಯುತ್ತಿತ್ತು. ಅದಕ್ಕೆ ತಕ್ಕಂತೆ ಅಮ್ಮನ ಎದೆಹಾಲಿನ ಶಕ್ತಿಯಿಂದಲೇ ಈತ ದೈಹಿಕವಾಗಿ ಗಟ್ಟಿಗೊಂಡಿದ್ದ.

ಕಷ್ಟದಲ್ಲಿದ್ರೂ ನೆಮ್ಮದಿಯ ನಿದ್ರೆಗೆ ಭಂಗ ಮಾಡುತ್ತಿದ್ದ ಇಲಿಗಳು..!

ಹೀಗೆ ಶಾಲಾ ದಿನಗಳಲ್ಲಿ ಫುಟ್‍ಬಾಲ್ ತಂಡದಲ್ಲಿ ಕಾಣಿಸಿಕೊಂಡಿದ್ದ ಈತನಿಗೆ ಯಾವುದೇ ಪಂದ್ಯಗಳನ್ನು ನೋಡಲು ಸಾಧ್ಯವಾಗುತ್ತಿರಲಿಲ್ಲ. ಪಕ್ಕದ ಮನೆಂiÀಲ್ಲಾದ್ರೂ ಟಿವಿ ನೋಡೋಣ ಅಂದ್ರೆ ಕರೆಂಟ್ ಇರುತ್ತಿರಲಿಲ್ಲ. ಸ್ನಾನ ಮಾಡೊಕೆ ಬಿಸಿ ನೀರು ಇರುತ್ತಿರಲಿಲ್ಲ. ತಣ್ಣೀರು ಸ್ನಾನ ಮಾಡುವಂತಹ ಪರಿಸ್ಥಿತಿ. ಕತ್ತಲ ಕೋಣೆಯಲ್ಲೇ ಕಾಲ ಕಳೆದ ಈ ಹುಡುಗ ಫುಟ್‍ಬಾಲ್ ಆಟವೇ ಬಾಳಸಂಗಾತಿಯಾಗಿತ್ತು. ಆಯಾಸ ನಿವಾರಿಸಲು ಮನೆಯಲ್ಲಿ ಏನು ಸೌಲಭ್ಯಗಳಿರಲಿಲ್ಲ. ಎಲ್ಲವನ್ನೂ ಮರೆತು ನಿದ್ದೆ ಮಾಡಬೇಕು ಅಂದ್ರೆ ಮನೆಯಲ್ಲಿ ಇಲಿಗಳ ಕಾಟ. ಇದ್ರಿಂದ ಒಂದು ದಿನವೂ ನೆಮ್ಮದಿ ಅಂತ ಇರಲಿಲ್ಲ.

ತಂದೆ ತಾಯಿ ಕಣ್ಣೀರು ಹಾಕುತ್ತಿರುವುದು ನನಗೆ ಇಷ್ಟವಿರಲಿಲ್ಲ..!

ಹೀಗೆ ಬದುಕಿನ ಘಟನೆಗಳನ್ನು ಬಿಚ್ಚಿಡುವ ಸ್ಟಾರ್ ಸ್ಟ್ರೈಕರ್, ಒಂದು ದಿನ ನಾನು ದೃಢ ಸಂಕಲ್ಪ ಮಾಡಿದ್ದೆ. “ನನಗೆ ಯಾರೋ ಬಂದು ಎಚ್ಚರಿಸಿದಂತೆ ಆಯಿತ್ತು. ನಾನು ಮುಂದೆ ಏನು ಆಗಬೇಕು ಎಂಬುದುನ್ನು ಆಗಲೇ ನಿರ್ಧರಿಸಿಬಿಟ್ಟಿದ್ದೆ. ಯಾಕಂದ್ರೆ ನನ್ನ ತಂದೆ ತಾಯಿ ಸಂಕಟದಿಂದ ಬದುಕುವುದು ನನಗೆ ಇಷ್ಟವಿರಲಿಲ್ಲ. ಪ್ರತಿ ದಿನ ಆಕೆ ಕಣ್ಣೀರು ಹಾಕುತ್ತಿದ್ದಳು. ಆಗ ನಾನು ಅವಳನ್ನು ಸಮಾಧಾನಪಡಿಸುತ್ತಿದೆ. “ನೋಡ್ತಾ ಇರು. ಎಲ್ಲವೂ ಬದಲಾಗುತ್ತೆ. ನಮ್ಮ ಬಡತನಕ್ಕೆ ಮುಕ್ತಿ ಸಿಗುತ್ತದೆ. ಮುಂದೊಂದು ದಿನ ನಾನು ಫುಟ್‍ಬಾಲ್ ಆಟಗಾರನಾಗುತ್ತೇನೆ. ಆಗ ನಾವು ನೆಮ್ಮದಿಯ ಜೀವನ ಸಾಗಿಸಬಹುದು” ಎಂದು ಹೇಳುತ್ತಿದೆ. ಹೀಗೆ ತನ್ನ ಬದುಕಿನ ಒಂದೊಂದು ಘಟನೆಗಳನ್ನು ಮೆಲುಕು ಹಾಕಿಕೊಳ್ತಾನೆ ಈತ.

ಇನ್ನು ಫುಟ್‍ಬಾಲ್ ಆಡಲು ಈ ಆಟಗಾರನ ಬಳಿ ಸ್ಟಡ್ಸ್ ಇರಲಿಲ್ಲ. ಅಪ್ಪನ ಹಳೆಯ ಸ್ಟಡ್ಸ್ ಹಾಕೊಂಡು ಆಡುತ್ತಿದ್ದ. ಶಾಲಾ ಟೂರ್ನಿಗಳಲ್ಲಿ ಆಡುವಾಗ ಎಲ್ಲರು ಅನುಮಾನದಿಂದಲೇ ಈತನನ್ನು ನೋಡುತ್ತಿದ್ದರು. ಈತನ ವಯಸ್ಸಿನ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿದ್ದರು. ಐಡಿ ಕಾರ್ಡ್, ಬರ್ತ್ ಸರ್ಟಿಫಿಕೇಟ್, ಸ್ಕೂಲ್ ಐಡಿ ಕಾರ್ಡ್ ಹೀಗೆ ಎಲ್ಲವನ್ನು ನೋಡುತ್ತಿದ್ದಾಗ ಈ ಬಾಲಕನ ಮನಸ್ಸು ಎಷ್ಟು ಘಾಸಿಯಾಗಿರಬೇಕಲ್ವಾ ?

ಮನೆಯ ಕಡು ಬಡತನ, ಸಮಾಜ ವಕ್ರದೃಷ್ಟಿ ಹೀಗೆ ಎಲ್ಲ ಸಿಟ್ಟನ್ನು ಫುಟ್‍ಬಾಲ್ ಚೆಂಡಿನ ಮೇಲೆ ತೋರಿಸುತ್ತಿದ.್ದ ಶಾಲಾ ಟೂರ್ನಿಗಳ ಜೊತೆಗೆ ಲೋಕಲ್ ಕ್ಲಬ್ ತಂಡಗಳ ಪರ ಆಡಲು ಶುರು ಮಾಡಿದ್ದ. ತನ್ನ 12ನೇ ವಯಸ್ಸಿನಲ್ಲಿ ತನ್ನ ತಂದೆಯ ಸ್ಡಡ್ಸ್ ಹಾಕೊಂಡು 34 ಪಂದ್ಯಗಳಲ್ಲಿ 76 ಗೋಲು ದಾಖಲಿಸಿದ್ದ.

ನೀನು ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಯಲ್ವಾ..?

12ನೇ ವಯಸ್ಸಿನಲ್ಲಿ ಈತ ಸ್ಥಳೀಯ ಮಟ್ಟದಲ್ಲಿ ಖ್ಯಾತಿ ಪಡೆದುಕೊಂಡಿದ್ದ. ಆಗ ಈತನ ಅಜ್ಜನ ಖುಷಿಗಂತೂ ಪಾರವೇ ಇರಲಿಲ್ಲ. ಮೊಮ್ಮಗನ ಆಟದ ವೈಖರಿಯನ್ನು ನೋಡಿ ಹೆಮ್ಮೆಯಿಂದ ಬೀಗುತ್ತಿದ್ದ. ಆ ದಿನದ ಘಟನೆಯನ್ನು ಈ ಆಟಗಾರ ಹೇಳುವುದು ಹೀಗೆ..

“ಒಂದು ದಿನ ನನ್ನ ಅಜ್ಜ ನಮ್ಮ ಮನೆಗೆ ಬಂದಿದ್ದರು. ಬಂದವರೇ ನನ್ನ ಬಳಿ ಬಂದು ಪ್ರಾಮಿಸ್ ಮಾಡಬೇಕು ಅಂದ್ರು. ಏನು ಅಂತ ಕೇಳಿದ್ರೆ ಮೊದಲು ಪ್ರಾಮಿಸ್ ಮಾಡು. ಆಮೆಲೆ ಹೇಳುತ್ತೇನೆ ಅಂತ ಅಂದ್ರು. ಸರಿ ಅಂತ ನಾನು ಅಜ್ಜನಿಗೆ ಪ್ರಾಮಿಸ್ ಮಾಡಿದ್ದೆ. ಏನು ಅಂತ ಕೇಳಿದಾಗ ನನ್ನ ಮಗಳನ್ನು ಚೆನ್ನಾಗಿ ನೋಡಿಕೊಳ್ಳುತ್ತಿಯಲ್ವಾ ? ನೀನು ಅವಳನ್ನು ಚೆನ್ನಾಗಿ ನೋಡಿಕೊಳ್ಳಬೇಕು ಅಂದ್ರು. ಸರಿ ಅಂತ ಹೇಳಿ ಇನ್ನೊಮ್ಮೆ ಪ್ರಾಮಿಸ್ ಮಾಡಿದ್ದೆ.”

“ದುರಂತ ಅಂದ್ರೆ ನಾಲ್ಕು ದಿನಗಳ ಬಳಿಕ ನನ್ನ ಅಜ್ಜ ನಿಧನರಾದ್ರು. ಆದ್ರೆ ಅವರಿಗೆ ಮಾಡಿದ್ದ ಪ್ರತಿಜ್ಞೆಯನ್ನು ನಾನು ನಾಲ್ಕೇ ವರ್ಷಗಳಲ್ಲಿ ಪೂರೈಸಿದ್ದೆ. ಯಾಕಂದ್ರೆ 16ನೇ ವಯಸ್ಸಿಗೆ ನಾನು ಪ್ರತಿಷ್ಠಿತ ಕ್ಲಬ್ ಆಂಡರ್ಲೆಚಿಟಿ ತಂಡವನ್ನು ಸೇರಿಕೊಂಡಿದ್ದೆ. ನಂತರ ನಾನು ಹಿಂತಿರುಗಿ ನೋಡಲೇ ಇಲ್ಲ. ನನ್ನ ಅಜ್ಜನಿಗೆ ಮಾತು ಕೊಟ್ಟಂತೆ ನನ್ನ ತಾಯಿಯನ್ನು ನಾನು ಚೆನ್ನಾಗಿಯೇ ನೋಡಿಕೊಳ್ಳುತ್ತಿದ್ದೇನೆ. ಈಗ ಆಕೆಗೆ ಯಾವ ಬಡತನದ ಸಂಕಟವೂ ಇಲ್ಲ” ಅಂದಾಗ ಆತನ ಮುಖದಲ್ಲಿ ಸಾರ್ಥಕತೆಯ ಭಾವನೆ ಎದ್ದು ಕಾಣುತ್ತಿತ್ತು.

ಪಂದ್ಯ ಸೋತ್ರೂ ಆ ಕ್ಷಣ ನಾನು ಸ್ವರ್ಗದಲ್ಲಿ ತೇಲಾಡುತ್ತಿದ್ದೆ ಅಂದಿದ್ದು ಯಾಕೆ..?

ಆಂಡರ್ಲೆಚಿಟಿ ತಂಡದ ಜೊತೆ ಒಪ್ಪಂದ ಮಾಡಿಕೊಂಡ್ರೂ ಈ ಆಟಗಾರನಿಗೆ ಆರಂಭದಲ್ಲಿ ಆಡುವ ಅವಕಾಶ ಸಿಕ್ಕಿರಲಿಲ್ಲ. ಆದ್ರೆ ಸಡನ್ ಆಗಿ ಅವಕಾಶ ಸಿಕ್ಕಿದ್ದು ಹೇಗೆ ಎಂಬುದನ್ನು ಈತ ಹೇಳುವುದು ಹೀಗೆ…

“ನಾನು ಒಬ್ಬ ಫುಟ್‍ಬಾಲ್ ಅಭಿಮಾನಿಯಂತೆ ಮನೆಯಲ್ಲಿ ಟಿವಿ ನೋಡ್ಕೊಂಡು ಪಂದ್ಯ ನೋಡುತ್ತಿದ್ದ್ದೆ. ಸಡನ್ ಆಗಿ ತರಬೇತುದಾರನ ದೂರವಾಣಿ ಕರೆ ಬಂತು. ಎಲ್ಲಿದ್ದೀಯಾ ? ಏನು ಮಾಡ್ತಾ ಇದ್ದಿಯಾ ಅಂತ. ಉತ್ತರ ಕೊಡುವ ಮುನ್ನವೇ ಅತ್ತ ಕಡೆಯಿಂದ ಫೈನಲ್ ಪಂದ್ಯ ಆಡಬೇಕು. ಬೇಗ ಬಾ ಅಂತ ಹೇಳಿದ್ರು.. ಆಗ ನನ್ನ ಆನಂದಕ್ಕೆ ಪಾರವೇ ಇರಲಿಲ್ಲ. ಅಪ್ಪ, ಅಮ್ಮ, ತಮ್ಮನಿಗೆ ಹೇಳಿ ಓಡೋಡಿ ರೆಡಿಯಾಗಿÀ ಸೀದಾ ಮೈದಾನಕ್ಕೆ ಬಂದಿದ್ದೆ. ಆಗಲೇ ನನ್ನ ಮೊಬೈಲ್‍ಗೆ ಸಾಕಷ್ಟು ಕರೆಗಳು ಬಂದಿದ್ದವು. ಅದ್ರಲ್ಲಿ ನನ್ನ ಆಪ್ತ ಸ್ನೇಹಿತನಿಗೆ ಮಾತ್ರ ಮೆಸೇಜ್ ಮಾಡಿದ್ದೆ. ನಾನು ಈಗ ಆಂಡರ್ಲೆಚಿಟಿ ಮೆನ್ ಅಂತ ಟೆಸ್ಟ್ ಮಾಡಿದೆ”É ಅಂತ ತನ್ನ ಹಳೆಯ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾನೆ.

ಬಳಿಕ ಡ್ರೆಸಿಂಗ್ ರೂಂಗೆ ಹೋಗಿ ಕ್ಲಬ್ ತಂಡದ ಜೆರ್ಸಿ ಕೊಟ್ರು. ಯಾವ ನಂಬರ್ ಬೇಕು ಅಂತ ಕೇಳಿದಾಗ 10 ಅಂತ ಅಂದೆ. 10 ನಂಬರ್ ಸಿಗಲ್ಲ. ಅಕಾಡೆಮಿ ಆಟಗಾರರಿಗೆ ನೀಡಲಾಗಿದೆ. 30ಕ್ಕಿಂತ ಮೇಲಿನ ನಂಬರ್ ಸಿಗುತ್ತೆ. ಕೈ ಬೆರಳಿನಲ್ಲೇ ಲೆಕ್ಕಹಾಕೊಂಡು 3 ಪ್ಲಸ್ 6 ಅಂತ 36 ನಂಬರ್ ಕೇಳಿದೆ. ಕೊನೆಗೂ ನನ್ನ ಕನಸು ನನಸಾದ ಕ್ಷಣ ಬಂದೇ ಬಿಟ್ಟಿತ್ತು. ಪಂದ್ಯದ 67ನೇ ನಿಮಿಷದಲ್ಲಿ ನನಗೆ ಆಡುವ ಅವಕಾಶ ಸಿಕ್ಕಿತ್ತು. ಆದ್ರೆ ಆ ಪಂದ್ಯದಲ್ಲಿ ನಮ್ಮ ತಂಡ ಸೋಲು ಅನುಭವಿಸಿತ್ತು. ಆದ್ರೆ ನನಗೆ ಸೋಲಿನ ಕಹಿ ಅನುಭವ ಆಗಲಿಲ್ಲ. ಯಾಕಂದ್ರೆ ಆ ದಿನ, ಆ ಕ್ಷಣದಲ್ಲಿ ನಾನು ಸ್ವರ್ಗದಲ್ಲಿ ತೇಲಾಡುತ್ತಿದ್ದೆ ಅಂತಾನೆ ಈ ಆಟಗಾರ.

ಅಜ್ಜ – ಅಮ್ಮನಿಗೆ ಕೊಟ್ಟ ಮಾತು.. ನುಡಿದಂತೆ ನಡೆದ ಮಗ..!

ನಂತರ ಯುರೋಪಿಯನ್ ಲೀಗ್ ಚಾಂಪಿಯನ್‍ಷಿಪ್‍ನ ನಾನಾ ಟೂರ್ನಿಗಳ ಆಡುವ ಅವಕಾಶ ಸಿಕ್ಕಿತ್ತು. ಅಲ್ಲಿ ಬೇರೆ ಬೇರೆ ಆಟಗಾರರನ್ನು ನೋಡಿದಾಗ ಈತನಿಗೆ ಅಂಜಿಕೆಯಾಗುತ್ತಿತ್ತು. ಯಾಕಂದ್ರೆ ಈತನ ಬಳಿ ಸರಿಯಾದ ಟ್ರ್ಯಾಕ್ ಸೂಟ್‍ಗಳಿರಲಿಲ್ಲ. ಊಟ ಮಾಡುತ್ತಿರುವಾಗಲೂ ಏನು ಹೇಳಬೇಕು ಅಂತನೇ ಗೊತ್ತಿರಲಿಲ್ಲ. ಅಲ್ಲಿದ್ದವರೆಲ್ಲಾ ಹೈ ಫೈ ಶ್ರೀಮಂತರಾಗಿದ್ದರು. ಆದ್ರೂ ಎದೆಗುಂದಲಿಲ್ಲ. ಬಡತನದ ನೋವನ್ನು ಮೈದಾನದಲ್ಲಿ ಈತ ತೋರಿಸುತ್ತಿದ್ದ. ದೈಹಿಕ ಮತ್ತು ಮಾನಸಿಕ ನೋವುಗಳಿಂದ ಕಂಗೆಟ್ಟಿದ್ದ ಈತ ಸರಾಗವಾಗಿ ಗೋಲು ದಾಖಲಿಸಿ ಅದ್ಭುತ ಆಟಗಾರನಾಗಿ ಹೊರಹೊಮ್ಮಿದ್ದ.

ತನ್ನ 12ನೇ ವಯಸ್ಸಿನವರೆಗೆ ಅಪ್ಪನ ಹಳೆಯ ಸ್ಟಡ್ಸ್ ಹಾಕೊಂಡು ಆಡುತ್ತಿದ್ದ. ಆದ್ರೆ 12 ವರ್ಷಗಳ ಬಳಿಕ ಬೆಲ್ಚಿಯಂ ರಾಷ್ಟ್ರೀಯ ತಂಡದಲ್ಲಿ ಕಾಣಿಸಿಕೊಂಡ. ಅದು ಕೂಡ ಫಿಫಾ ವಿಶ್ವಕಪ್‍ನಲ್ಲಿ.

ಈತನಿಗೆ ಫಿಫಾ ಅಂದ್ರೆ ಏನು ಅಂತ ಗೊತ್ತಿರಲಿಲ್ಲ. ಅಕಾಡೆಮಿಂiÀಲ್ಲಿ ಫುಟ್‍ಬಾಲ್ ಆಟದ ತರಬೇತಿಯನ್ನು ಪಡೆಯಲಿಲ್ಲ. ಹೈಫೈ ಬದುಕು ಗೊತ್ತೇ ಇರಲಿಲ್ಲ. ನೀರಿಗೆ ಮಿಶ್ರಣಗೊಂಡ ಹಾಲು, ಬ್ರೆಡ್ ತಿಂದುಕೊಂಡು ಫುಟ್‍ಬಾಲ್ ಆಡಿದ್ದವ ಈಗ ತಾನು ಅಂದುಕೊಂಡಿದ್ದನ್ನು ಸಾಧಿಸಿದ್ದಾನೆ. ಅಮ್ಮ ಮತ್ತು ಅಜ್ಜನಿಗೆ ಕೊಟ್ಟ ಮಾತಿನಂತೆ ನಡೆದುಕೊಂಡಿದ್ದಾನೆ. ಅದೇ ಗುರಿಯಾಗಿತ್ತು. ಆ ಗುರಿ ತಲುಪಿದ ಹೆಮ್ಮೆ, ಸಾರ್ಥಕತೆ ಈತನಲ್ಲಿದೆ.

ಅಜ್ಜನ ಆತ್ಮದ ಜೊತೆ ಮಾತನಾಡುವ ಮೊಮ್ಮಗ..!

ಕೊನೆಯದಾಗಿ ಈ ಸ್ಟಾರ್ ಫುಟ್‍ಬಾಲ್ ಆಟಗಾರ ಹೇಳುವುದು ಹೀಗೆ.. ನಾನು ಈಗ ಪ್ರೀಮಿಯರ್ ಲೀಗ್ ಬಗ್ಗೆ ಮಾತನಾಡುವುದಿಲ್ಲ. ಚಾಂಪಿಯನ್ಸ್ ಲೀಗ್ ಬಗ್ಗೆ ಮಾತನಾಡುವುದಿಲ್ಲ. ಮ್ಯಾಂಚೆಸ್ಟರ್ ಯುನೈಟೆಡ್ ತಂಡದ ಬಗ್ಗೆ ಮಾತನಾಡುವುದಿಲ್ಲ . ಫಿಫಾ ವಿಶ್ವಕಪ್ ಬಗ್ಗೆ ಮಾತನಾಡುವುದಿಲ್ಲ. ನನಗೆ ನನ್ನ ಅಜ್ಜನ ಜೊತೆ ಮಾತನಾಡಬೇಕು. ಅಜ್ಜನ ಆತ್ಮ ನನ್ನ ಸುತ್ತನೇ ಓಡಾಡುತ್ತಿರುತ್ತದೆ. ಅವರಿಗೆ ಕೇಳುವಾಗ ಹಾಗೇ ಮಾತನಾಡುತ್ತೇನೆ. “ನಿಮ್ಮ ಮಗಳು ಈಗ ಚೆನ್ನಾಗಿದ್ದಾಳೆ. ನಿಮಗೆ ಕೊಟ್ಟ ಮಾತಿನಂತೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದೇನೆ. ಅಪ್ಪ, ಅಮ್ಮ, ತಮ್ಮ ಎಲ್ಲರು ಈಗ ಚೆನ್ನಾಗಿದ್ದಾರೆ. ಯಾವ ಬಡತನವೂ ಇಲ್ಲ. ಬಡತನದ ದರಿದ್ರ ನಮ್ಮನ್ನು ಬಿಟ್ಟು ಹೋಗಿದೆ. ಮನೆಯಲ್ಲಿ ಇಲಿಗಳ ಕಾಟವಿಲ್ಲ. ತಣ್ಣೀರಿನಲ್ಲಿ ಸ್ನಾನ ಮಾಡುವ ಅಗತ್ಯವಿಲ್ಲ. ದಿನ ಪೂರ್ತಿ ಕರೆಂಟು ಹೋಗುತ್ತಿಲ್ಲ. ಟಿವಿ ಕೇಬಲ್ ಪ್ರಾಬ್ಲಂ ಇಲ್ಲ. ಫೆÇ್ಲೀರ್‍ನಲ್ಲಿ ಮಲಗುವ ಅನಿವಾರ್ಯತೆಯೂ ಇಲ್ಲ. ಯಾರು ಕೂಡ ನನ್ನನ್ನು ಅನುಮಾನದಿಂದ ನೋಡುತ್ತಿಲ್ಲ. ಐಡಿ ಕಾರ್ಡ್ ಕೇಳುತ್ತಿಲ್ಲ. ಯಾಕಂದ್ರೆ ಅವರಿಗೆಲ್ಲಾ ನನ್ನ ಹೆಸರು ಗೊತ್ತಿದೆ.”É ಅಂತ ಜೋರಾಗಿಯೇ ಹೇಳುತ್ತೇನೆ.
ನಾನು ಗ್ರೇಟ್ ಪ್ಲೇಯರ್ ಅಲ್ಲ.. ಬೆಸ್ಟ್ ಪ್ಲೇಯರ್..!

ಯಾಕಂದ್ರೆ ನನ್ನ ಅಜ್ಜನಿಗೆ ಖುಷಿಯಾಗಬೇಕು.
ನೀವು ಅಂದುಕೊಂಡಂತೆ ನಾನು ಈಗ ಸ್ಟಾರ್ ಫುಟ್‍ಬಾಲ್ ಆಟಗಾರ. ನನ್ನ ಹೆಸರು ವಿಶ್ವ ಫುಟ್‍ಬಾಲ್‍ನಲ್ಲಿ ಚಿರಪರಿಚಿತವಾಗಿದೆ. ನಾನು ಬೆಲ್ಚಿಯಂ ಪ್ರಜೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ. ವಿವಿಧ ಟೂರ್ನಿಗಳಲ್ಲಿ ಸಾಕಷ್ಟು ಗೋಲು ದಾಖಲಿಸಿದ್ದೇನೆ. ಹಾಗಂತ ನಾನು ಗ್ರೇಟ್ ಪ್ಲೇಯರ್ ಅಲ್ಲ. ನಾನು ಬೆಸ್ಟ್ ಪ್ಲೇಯರ್ ಅಷ್ಟೇ. ಕಳೆದ ನಾಲ್ಕು ವಿಶ್ವಕಪ್‍ಗಳಲ್ಲಿ ಆಡಿ ಐದಾರು ಗೋಲು ದಾಖಲಿಸಿದದ್ದೇನೆ. ಫಿಫಾ ವಿಶ್ವಕಪ್ ಗೆಲ್ಲಬೇಕು ಎಂಬ ಆಸೆ ಇದೆ. ಆದ್ರೆ ಗಾಯ ಸ್ವಲ್ಪ ಮಟ್ಟಿಗೆ ಕಾಡುತ್ತಿದೆ. ನೋಡೋಣ.. ಏನು ಆಗುತ್ತೆ ಅಂತ..

ಅಷ್ಟಕ್ಕೂ ನನ್ನ ಹೆಸರು ಏನು ಗೊತ್ತಾ..?
ರೊಮೆಲೊ ಮೆನಾಮ ಲುಕಾಕು ಬೊಲಿಂಗ್ಲಿ.
ಪ್ರೀತಿಯಿಂದ ಕರೆಯುವುದು ರೊಮೆಲೊ ಲುಕಾಕು

sanathrai

Tags: @followers#RomeluLukaku #Lukaku #FootballLegend #InspirationalStory #KannadaArticles #RagsToRiches #BelgiumFootball #BlackDiamond #Striker #SportsKannada#saakshatv#sanathraihighlights
ShareTweetSendShare
Join us on:

Related Posts

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

ಹೊಂದಾಣಿಕೆ ರಾಜಕೀಯದ ಗುಟ್ಟು ರಟ್ಟಾಗುವ ಭೀತಿ? ಅಡ್ಡ ಮತದಾನ ಮಾಡಿದವರ ವಿರುದ್ಧ ಮೌನಕ್ಕೆ ಶರಣಾದ ಬಿಜೆಪಿ ನಾಯಕರು – ಅಡ್ಡ ಮತದಾನ ಪತ್ತೆಯಾದರೂ ಕೈಕಟ್ಟಿ ಕುಳಿತ ಬಿಜೆಪಿ ಹೈಕಮಾಂಡ್

by Shwetha
July 5, 2026
0

ಬೆಂಗಳೂರು: ಕರ್ನಾಟಕ ಬಿಜೆಪಿಯಲ್ಲಿ ಸಂಭವಿಸಿದ ಅಡ್ಡ ಮತದಾನದ ಪ್ರಹಸನ ಈಗ ಹೈಕಮಾಂಡ್ ಪಾಲಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಪಕ್ಷದ್ರೋಹಿಗಳು ಯಾರು ಎಂಬುದು ಸಾಕ್ಷಿ ಸಮೇತ ಸಾಬೀತಾಗಿದ್ದರೂ, ಅವರ...

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

ರಾಮಮಂದಿರ ದೇಣಿಗೆ ಪ್ರಕರಣ; ಹಣ ವಾಪಸ್ ಕೇಳಿದ ಮಾಜಿ ಸಿಎಂ ದಿಗ್ವಿಜಯ್ ಸಿಂಗ್

by Shwetha
July 5, 2026
0

ರಾಮಮಂದಿರ ದೇಣಿಗೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ದಿಗ್ವಿಜಯ್ ಸಿಂಗ್ ಮಹತ್ವದ ಹೇಳಿಕೆ ನೀಡಿದ್ದಾರೆ.ಅವರು, ನಾನು ಅಯೋಧ್ಯೆಯಲ್ಲಿ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದೇನೆ. ನಾನು ನೀಡಿದ ₹1.11 ಲಕ್ಷ...

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

ಭಾರತದ E20 ಪೆಟ್ರೋಲ್‌ಗೆ ಭೂತಾನ್ ನಿರಾಕರಣೆ; ಸಾಮಾನ್ಯ ಪೆಟ್ರೋಲ್‌ಗೆ ಬೇಡಿಕೆ

by Shwetha
July 5, 2026
0

ಭಾರತದ ತೈಲ ಮಾರುಕಟ್ಟೆ ಕಂಪನಿಗಳು ಪೂರೈಸುತ್ತಿರುವ E20 (20% ಎಥೆನಾಲ್ ಮಿಶ್ರಿತ) ಪೆಟ್ರೋಲ್ ಅನ್ನು ಭೂತಾನ್ ಸ್ವೀಕರಿಸಲು ನಿರಾಕರಿಸಿದ್ದು, ಅದರ ಬದಲಿಗೆ ಸಾಮಾನ್ಯ (ಸ್ಟ್ಯಾಂಡರ್ಡ್) ಪೆಟ್ರೋಲ್ ಪೂರೈಸುವಂತೆ...

ನೀಟ್ ಹಗರಣದ ಹಿಂದೆ ಆರ್‌ಎಸ್‌ಎಸ್ ಮತ್ತು ಬಿಜೆಪಿ ಸಂಚು: ಪ್ರಿಯಾಂಕ್ ಖರ್ಗೆ ಗಂಭೀರ ಆರೋಪ

SIRಗೆ ಸರ್ಕಾರ ಯಾರಿಗೂ ಒತ್ತಾಯ ಮಾಡುತ್ತಿಲ್ಲ: ಗೃಹ ಸಚಿವ ಪ್ರಿಯಾಂಕ್ ಖರ್ಗೆ

by Shwetha
July 5, 2026
0

SIR ಪ್ರಕ್ರಿಯೆಯಲ್ಲಿ ಲೋಪಗಳಾಗುತ್ತಿವೆ ಎಂಬ ವಿಪಕ್ಷಗಳ ಆರೋಪಕ್ಕೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯೆ ನೀಡಿದ್ದಾರೆ. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾನೂನು ಮೀರಿ ಯಾರೂ ಏನನ್ನೂ ಮಾಡಲು...

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

ರಾಜ್ಯದಲ್ಲಿ ಇಂದು ಭಾರೀ ಮಳೆ ಸಾಧ್ಯತೆ; ಕರಾವಳಿ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್

by Shwetha
July 5, 2026
0

ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿದ್ದು, ಇಂದು ಮತ್ತು ನಾಳೆ ಹಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ,...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • ಈ ಒಂದು ದೀಪವನ್ನು ಮನೆಯಲ್ಲಿ ಮೂರು ಮಂಗಳವಾರ ಶುಕ್ರವಾರ ಹಚ್ಚಿ ನೋಡಿ ಸಾಕು ಸಾಕ್ಷಾತ್ ಮಹಾಲಕ್ಷ್ಮೀ ಮನೆಗೆ ಬರ್ತಾಳೆ..

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram