ಕಾರವಾರ : ಉತ್ತರ ಕನ್ನಡ (Uttara Kannada) ಜಿಲ್ಲೆಯ ಹೊನ್ನಾವರ (Honnavara) ಭಾಗದ ಆಳ ಸಮುದ್ರದಲ್ಲಿ ಮೀನುಗಾರಿಕೆಗೆ (Fishing) ತೆರಳಿದ್ದ ಬೋಟ್ (Boat) ಮುಳುಗಿದ (Drown) ಪರಿಣಾಮ 14 ಜನ ಮೀನುಗಾರರನ್ನು ಮುಳುಗಿದ್ದು, ಅವರನ್ನು ರಕ್ಷಿಸಲಾಗಿದೆ ಎನ್ನಲಾಗಿದೆ.
ಹೊನ್ನಾವರದ ಕಾಸರಕೋಡಿನಿಂದ (Kasarkod) ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆಗೆ ತೆರಳಿದ್ದ ಹೆಚ್.ಎಂ ಅಂಗಳೂರು ಎಂಬ ಹೆಸರಿನ ಮೀನುಗಾರಿಕಾ ಬೋಟ್ ಮುಳುಗಿದೆ. ಬೋಟ್ ನ ಕೆಳಭಾಗದಲ್ಲಿ ಒಡೆದು ಹೋಗಿದ್ದ ಪರಿಣಾಮ ಅದು ಮುಳುಗಿದೆ ಎನ್ನಲಾಗಿದ್ದು, ಕೂಡಲೇ ಅಲ್ಲಿದ್ದ ಇನ್ನಿತರ ಮೀನುಗಾರರು ಅನಸೂಯ ಎಂಬ ಹೆಸರಿನ ಬೋಟ್ ಮೂಲಕ 14 ಜನ ಮೀನುಗಾರರ ರಕ್ಷಣೆ ಮಾಡಿ ಹೊನ್ನಾವರದ ಕಾಸರಕೋಡ ಬಂದರಿಗೆ ಸುರಕ್ಷಿತವಾಗಿ ಕರೆ ತಂದಿದ್ದಾರೆ.